ಚಿಂತಾಮಣಿ : ನಗರದ ಆಜಾದ್ ಚೌಕ್ ದಲ್ಲಿ ಫೆಬ್ರವರಿ 9 ರಂದು ರಾತ್ರಿ ಚಿನ್ನದ ಅಂಗಡಿಯೊಂದರ ಬಾಗಿಲಿನ ಬೀಗಗಳನ್ನು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಹತ್ತೇ ದಿನಗಳಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.
ನಗರದ 25 ನೇ ವಾರ್ಡ್ನ ಎನ್.ಎನ್.ಟಿ ರಸ್ತೆಯ ಕೂಲಿ ಕೆಲಸ ಮಾಡುವ ಅರವಿಂದಕುಮಾರ್ ಬಂಧಿತ ಆರೋಪಿ.ಆರೋಪಿಯಿಂದ 45,200 ರೂ ಬೆಲೆ ಬಾಳುವ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಲು ಸಮೇತ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳರು ಅಂಗಡಿಯ ಬೀಗ ಮುರಿದು ಬಾಗಿಲಿನ ಷಟರ್ ಮೀಟಿ ಒಳಕ್ಕೆ ಹೊಗಿ ಸುಮಾರು 45,200 ರೂ ಬೆಲೆ ಬಾಳುವ ಬೆಳ್ಳಿಯ ಆಭರಣಗಳು ಕಳ್ಳತನವಾಗಿದೆ.ಲಾಕರ್ ತೆಗೆಯಲು ಸಾಧ್ಯವಾಗಿಲ್ಲದ ಕಾರಣ ಹೆಚ್ಚಿನ ಆಭರಣಗಳು ಕಳ್ಳತನವಾಗಿಲ್ಲ ಎಂದು ಜ್ಯೂಯಲರಿ ಮಾಲೀಕ ಶಿವಕುಮಾರ್ ನಗರ ಠಾಣೆಗೆ ದೂರು ನೀಡಿದ್ದರು.
ಉಪವಿಭಾಗದ ಡಿವೈಎಸ್ಪಿ ಮುರಳೀಧರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ವೀಜಿಕುಮಾರ್ ನೇತೃತ್ವದಲ್ಲಿ ತನಿಖೆಯನ್ನು ಕೈಗೊಂಡು ಪತ್ತೆ ಕಾರ್ಯಕ್ಕೆ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.
ಪತ್ತೆ ತಂಡದವರು ಆರೋಪಿಗಳ ಬಗ್ಗೆ ಸ್ಥಳೀಯ ಸಿಸಿ ಕ್ಯಾರಾಗಳು ಹಾಗೂ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿದ್ದರು.ಚಿನ್ನದ ಅಂಗಡಿಯ ಒಳನುಗ್ಗಿದ್ದರೂ ಹೆಚ್ಚಿನ ಕಳ್ಳತನ ಆಗದಿರುವುದು ಸ್ಥಳೀಯರ ಕೆಲಸ ಎಂಬ ತೀರ್ಮಾನಕ್ಕೆ ಬಂದ ನಂತರ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ.? ಸವಿತಾ ಸಮಾಜದ ಬಂಧುಗಳಿಗೆ ನಿಗಮದ ಸೌಲಭ್ಯಗಳು ಕುರಿತಂತೆ ಅರಿವು ಕಾರ್ಯಕ್ರಮ
ಪತ್ತೆದಾರಿ ತಂಡದಲ್ಲಿ ಪಿ.ಎಸ್.ಐ ಪ್ರಕಾಶ್,ಸಿಬ್ಬಂದಿ ಮಂಜುನಾಥ,ವೆಂಕಟ್,ವಿಶ್ವನಾಥ ಎಸ್.ಎನ್, ಶ್ರೀನಿವಾಸಮೂರ್ತಿ,ಲೋಕೇಶ್,ಗಿರೀಶ್ ಪಾಲ್ಗೊಂಡಿದ್ದರು.





