ವಿದ್ಯುತ್ ವ್ಯತ್ಯಯಕ್ಕೆ ಕೇರಳದಲ್ಲೊಂದು ವಿಚಿತ್ರ ಪ್ರತಿಭಟನೆ: ಕರೆಂಟ್ ಬಿಲ್ಲಿಗೆ 10 ಸಾವಿರ ನಾಣ್ಯ ನೀಡಿದ ವಾರ್ಡ್ ಸದಸ್ಯ!

Date:

  • ಕೊಲ್ಲಂನ ತಳವೂರು ಪಂಚಾಯತ್‌ನ ಸದಸ್ಯ ಸಿ.ರೆಂಜಿತ್‌ರಿಂದ ವಿಚಿತ್ರ ಪ್ರತಿಭಟನೆ
  • ಕಾಯಿನ್ ಎಣಿಸಲು ಅರ್ಧ ದಿನ ತೆಗೆದುಕೊಂಡ ಕೇರಳ ವಿದ್ಯುತ್ ಇಲಾಖೆಯ ಸಿಬ್ಬಂದಿ

ತಾನು ಪ್ರತಿನಿಧಿಸುತ್ತಿದ್ದ ವಾರ್ಡಿನಲ್ಲಿ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರಿಂದ ಬೇಸತ್ತ ವಾರ್ಡ್ ಸದಸ್ಯನೋರ್ವ, ಕರೆಂಟ್ ಬಿಲ್ ಕಟ್ಟುವ ವೇಳೆ ಅಧಿಕಾರಿಗಳಿಗೆ ಸುಮಾರು 10 ಸಾವಿರ ಮೌಲ್ಯದ ನಾಣ್ಯ ಎಣಿಸುವ ಕೆಲಸಕೊಟ್ಟು ವಿಚಿತ್ರ ರೀತಿಯಲ್ಲಿ ಪ್ರತೀಕಾರ ತೀರಿಸಿದ ಘಟನೆ ಕೇರಳದಲ್ಲಿ ನಡೆದಿದೆ.

ಕೊಲ್ಲಂ ಜಿಲ್ಲೆಯ ತಳವೂರು ಪಂಚಾಯತ್‌ನ ರಾಂಡಾಲುಮೂಡು ವಾರ್ಡ್‌ ಪ್ರದೇಶದಲ್ಲಿ ಪದೇ ಪದೇ, ಅಂದರೆ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಸಿಟ್ಟಿಗೆದ್ದ ವಾರ್ಡ್ ಸದಸ್ಯರೊಬ್ಬರು, ಅಧಿಕಾರಿಗಳಿಗೆ ಪಾಠ ಕಳಿಸುವ ನಿಟ್ಟಿನಲ್ಲಿ ಈ ರೀತಿ ನಡೆದುಕೊಂಡಿದ್ದಾರೆ. ಅಧಿಕಾರಿಗಳು, ಸುಸ್ತಾಗಿ ಕಾಯಿನ್ ಎಣಿಸುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

coin bill 2

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಂಡಾಲುಮೂಡು ವಾರ್ಡ್‌ ಪ್ರತಿನಿಧಿಸುವ ಸಿ.ರೆಂಜಿತ್‌ ಅವರು ಕಾಯಿನ್ ತುಂಬಿದ್ದ ಗೋಣಿಚೀಲ ಹಿಡಿದು ಪಟ್ಟಾಡಿಯಲ್ಲಿರುವ ಕೇರಳ ರಾಜ್ಯ ವಿದ್ಯುತ್‌ ಮಂಡಳಿ ಕಚೇರಿಯ(KSEB) ಬಿಲ್ ಕೌಂಟರ್‌ಗೆ ಬಂದಾಗ ಸಿಬ್ಬಂದಿ ಕಂಗಾಲಾದರು.

ತನ್ನ ವಾರ್ಡಿನ ಒಂಭತ್ತು ಕುಟುಂಬಗಳ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಬಂದಿರುವುದಾಗಿ ತಿಳಿಸಿ, ಒಂದು, ಎರಡು, ಐದು ಮತ್ತು ಹತ್ತು ರೂಪಾಯಿ ನಾಣ್ಯಗಳು ಇದ್ದ ಗೋಣಿ ಚೀಲವನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಸಿಬ್ಬಂದಿ, ಬೇರೆ ದಾರಿ ಕಾಣದೆ ಎಣಿಸಿ,ಎಣಿಸಿ ಕೊನೆಗೂ ಬಿಲ್ ರಶೀದಿ ನೀಡಿದ್ದಾರೆ.

ಕೇವಲ ಒಂಭತ್ತು ಮಂದಿಯ ಬಿಲ್ ಅನ್ನು ಕಾಯಿನ್ ಮೂಲಕ ನೀಡಿದ್ದರಿಂದ, ಎಲ್ಲವೂ ಮುಗಿಸಲು ಸುಮಾರು ಅರ್ಧ ದಿನವೇ ತೆಗೆದುಕೊಳ್ಳಬೇಕಾದ ಪ್ರಸಂಗ ಎದುರಾದವು. ಮಧ್ಯಾಹ್ನ ಆರಂಭಿಸಿದ ಕಾಯಿನ್ ಎಣಿಕೆ ಕಾರ್ಯವು ಕಚೇರಿಯಲ್ಲಿದ್ದ ಎಲ್ಲ ಅಧಿಕಾರಿಗಳು ಸೇರಿ ರಾತ್ರಿಯವರೆಗೂ ಎಣಿಕೆ ನಡೆಸಿ, ಕೊನೆಗೆ ರಶೀದಿ ನೀಡಿದ್ದಾರೆ. ವಾರ್ಡ್‌ ಸದಸ್ಯ ನೀಡಿದ ಕಾಯಿನ್‌ಗಳ ಸಂಖ್ಯೆ 9,737₹. ಸುಮಾರು 50 ಕೆಜಿಗಿಂತ ಹೆಚ್ಚು ತೂಕದ ನಾಣ್ಯಗಳು ಗೋಣಿಚೀಲದಲ್ಲಿದ್ದವು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿ.ರೆಂಜಿತ್‌, ‘ನನ್ನ ವಾರ್ಡಿನಲ್ಲಿ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಲೇ ಇದೆ. ಸೊಳ್ಳೆಯ ಉಪಟಳದಿಂದ ರಾತ್ರಿ ಸರಿಯಾಗಿ ನನ್ನ ವಾರ್ಡಿನ ಜನರಿಗೆ ನಿದ್ದೆ ಕೂಡ ಮಾಡಲಾಗುತ್ತಿರಲಿಲ್ಲ. ಹೀಗಾಗಿ ಅಧಿಕಾರಿಗಳು ನಮ್ಮನ್ನು ಸಂಕಷ್ಟ ಈಡುಮಾಡುತ್ತಿದ್ದರು. ಅದಕ್ಕೆ ಪ್ರತಿಭಟನೆಯ ರೂಪದಲ್ಲಿ ಈ ರೀತಿ ಮಾಡಿದ್ದೇನೆ. ನಮಗೆ ಕೆಲಸ ಕೊಟ್ಟವರಿಗೆ ನಾನೂ ಕೆಲಸ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಮಾಡಿಲ್ಲ’ ಎಂದು ತಿಳಿಸಿದ್ದಾರೆ.

coin bill NEWS

‘ಆಗಾಗ್ಗೆ ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟನೆಯ ಒಂದು ವಿಶಿಷ್ಟ ರೂಪವಷ್ಟೇ ಇದು. ನಾಣ್ಯಗಳನ್ನು ಎಣಿಸಲು ಮತ್ತು ರಶೀದಿಗಳನ್ನು ನೀಡಲು ಇಡೀ ಕಚೇರಿಯ ಸಿಬ್ಬಂದಿ ಸುಮಾರು ಅರ್ಧ ದಿನ ತೆಗೆದುಕೊಂಡರು. ವಿದ್ಯುತ್ ವ್ಯತ್ಯಯದಿಂದ ನಮ್ಮ ಜೀವನವನ್ನು ಪ್ರತಿದಿನವೂ ನರಕವಾಗಿಸಿದ್ದರು. ಒಂದು ದಿನಕ್ಕೆ ಸರಾಸರಿ ಕನಿಷ್ಠ 20 ಬಾರಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದುದರಿಂದ ವಾರ್ಡಿನ ಅನೇಕ ಮನೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗುತ್ತಲೇ ಇರುತ್ತವೆ. ನಮ್ಮ ದೂರುಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸಿದಾಗ ಉಡಾಫೆಯಿಂದ ಉತ್ತರಿಸುತ್ತಿದ್ದರು. ಅದಕ್ಕಾಗಿ ಜನರು ಅನುಭವಿಸಿದ ಕಷ್ಟಗಳನ್ನು ಅವರಿಗೂ ಗೊತ್ತಾಗಬೇಕು ಎಂದು ಬಿಲ್ ಅನ್ನು ಕಟ್ಟುವ ಸಂದರ್ಭದಲ್ಲಿ ನನ್ನ ವಾರ್ಡಿನಲ್ಲಿದ್ದ ಒಂಭತ್ತು ಮನೆಯ ಬಿಲ್‌ಗಳನ್ನು ನಾನೇ ಕಟ್ಟಲು ತೆರಳಿದೆ. ಒಟ್ಟು ಮೊತ್ತ ₹ 9,737 ಆಗಿತ್ತು. ಅವರಿಂದ ಹಣ ಪಡೆದುಕೊಂಡು ನಾನಾ ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಉಸ್ತುವಾರಿಗಳ ಹತ್ತಿರ ಮಾತನಾಡಿಸಿ, ಹರಕೆಯ ಡಬ್ಬದಲ್ಲಿದ್ದ ನಾಣ್ಯಗಳನ್ನು ಸಂಗ್ರಹಿಸಿದ್ದೆ’ ಎಂದು ತಿಳಿಸಿದ್ದಾರೆ.

‘ವಿದ್ಯುತ್ ಸಮಸ್ಯೆಯ ಹಿನ್ನೆಲೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರೆ ಪೊಲೀಸ್ ಕೇಸು ಅದು ಇದು ಆಗುತ್ತದೆ. ಹಾಗಾಗಿ, ಅದನ್ನು ತಪ್ಪಿಸಲು ಈ ಉಪಾಯ ಕಂಡುಕೊಂಡೆ. ಜನರು ಅನುಭವಿಸುತ್ತಿರುವ ಕಷ್ಟ ಅಧಿಕಾರಿಗಳಿಗೂ ಗೊತ್ತಾಗಲಿ ಎಂದು ಮಾಡಿದ್ದೇನಷ್ಟೆ. ಇಷ್ಟು ಮಾಡಿಯೂ ವಿದ್ಯುತ್ ವ್ಯತ್ಯಯ ಮುಂದುವರಿದರೆ ಪ್ರತಿ ತಿಂಗಳು ಕೂಡ ಇದನ್ನು ಮುಂದುವರಿಸುತ್ತೇನೆ. ಈಗ ಕೇವಲ ಒಂಭತ್ತು ಮನೆಯ ಬಿಲ್ ಮಾತ್ರ ನೀಡಿದ್ದೇನಷ್ಟೇ ಮುಂದಿನ ದಿನಗಳಲ್ಲಿ ವಾರ್ಡಿನಲ್ಲಿರುವ ಎಲ್ಲ ಮನೆಗಳ ಬಿಲ್ ಇದೇ ರೀತಿ ಕಟ್ಟುವ ಮೂಲಕ ಅಧಿಕಾರಿಗಳಿಗೆ ಪಾಠ ಕಲಿಸಲಿದ್ದೇನೆ. ವಿದ್ಯುತ್ ಇಲಾಖೆಯ ರೀತಿಯಲ್ಲಿಯೇ ನೀರಾವರಿ ಅಧಿಕಾರಿಗಳಿಗೂ ಈ ಅನುಭವ ನೀಡುವ ಯೋಜನೆಯಲ್ಲಿದ್ದೇನೆ’ ಎಂದು ಸಿ.ರೆಂಜಿತ್‌ ತಿಳಿಸಿದ್ದಾರೆ.

ಈ ನಾಣ್ಯಗಳನ್ನು ತನ್ನ ಮನೆಯಲ್ಲಿ ಎಣಿಸಲು ಒಂದು ದಿವಸ ತೆಗದುಕೊಂಡಿದ್ದೆ. ಎಲ್ಲ ನಾಣ್ಯಗಳನ್ನು ದೇವಾಲಯಗಳಿಂದ ಸಂಗ್ರಹಿಸಿದ್ದೆ ಎಂದು ರೆಂಜಿತ್‌ ಮಾಹಿತಿ ನೀಡಿದ್ದಾರೆ. ರೆಂಜಿತ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ವಾರ್ಡ್‌ ಸದಸ್ಯನ ಕಾರ್ಯಕ್ಕೆ ಜನರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದರೆ, ಕೆಲವರು ಇದೊಂದು ರಾಜಕೀಯ ಪ್ರತೀಕಾರ, ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹೆಸರು ಬರಲು ಈ ರೀತಿ ಮಾಡಿದ್ದಾರೆ ಎಂದು ದೂರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...