ರಾಯಚೂರು | ಕೈಗಾರಿಕೆಗಾಗಿ ರೈತ ಭೂಮಿ ಕಬಳಿಕೆ ಯತ್ನ ; ಗ್ರಾಮಸ್ಥರಿಂದ ಪ್ರತಿಭಟನೆ

Date:

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಕೂಡಲೇ ಅದನ್ನು ಕೈ ಬಿಡಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಪ್ರತಿಭಟಿಸಿದರು.

ನಗರದ ಬಸವನ ಬಾವಿ ,ಚಂದ್ರ ಮೌಳೇಶ್ವರ ಚೌಕ್ , ಗಾಂಧಿ ಚೌಕ್ , ಬಸವೇಶ್ವರ ಚೌಕ್ ,ವಾಲ್ಮೀಕಿ ಚೌಕ್ , ಯಾಕ್ಲಾಸಪುರ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೆ ಮರೆವಣಿಗೆ ನಡೆಸಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಿಂದ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಯಚೂರು ಹೋಬಳಿಯ ಕುರುಬದೊಡ್ಡಿ ಗ್ರಾಮದಲ್ಲಿ 147 ಎಕರೆ, ಚಂದ್ರಬಂಡ ಹೋಬಳಿಯ ಚಂದ್ರಬಂಡ, ಸಿಂಗನೋಡಿ ಗ್ರಾಮದಲ್ಲಿ 508 ಎಕರೆ ಹಿಡುವಳಿಯ ಒಟ್ಟು 655 ಎಕರೆ ಸ್ವಾಧೀನಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ಜುಲೈ 28 ರಂದು ಹಿಡುವಳಿ ರೈತರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ರೈತರ ಭೂಮಿ ಸ್ವಾಧೀನ ಬಗ್ಗೆ ಕೈಬಿಡಬೇಕು ಎಂದು ಆಕ್ರೋಶಿಸಿದರು.

1000155770

ರಾಯಚೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ ಪಟ್ಟಾ ಮತ್ತು ಸರ್ಕಾರಿ ಜಮೀನಿನ ಸೇರಿ ಒಟ್ಟು 600 ಎಕರೆ ಅಷ್ಟೇ ಮಾತ್ರ ಸೀಮಾಂತರ ಹೊಂದಿದ್ದು, ಇದರಲ್ಲಿ 300 ಎಕರೆಯಷ್ಟು ಕೈಗಾರಿಕಾ ಪ್ರಾದೇಶಿಕ ಅಭಿವೃದ್ಧಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಸರ್ಕಾರಿ ಭೂಮಿಯಲ್ಲಿ 24 ಕುಟುಂಬಗಳಿಗೆ 1997 ರಲ್ಲಿ ಭೂ ಮಂಜೂರಾತಿ ಸಮಿತಿಯು ಭೂಮಿಯನ್ನು ಮಂಜೂರು ಮಾಡಿರುತ್ತಾರೆ. ಆದೇರೀತಿಯಾಗಿ ಇನ್ನೂಳಿದ ಸಾಗುವಳಿ ಚೀಟಿ ಭೂ ಮಂಜುರಾತಿ ಸಮಿತಿಯಲ್ಲಿ ಮಂಜುರಾದ ಫಲಾನುಭವಿಗಳಿಗೆ ಇಲ್ಲಿಯವರೆಗೂ ಪಹಣಿ ಆಗಿರುವುದಿಲ್ಲ. ಅತ್ಯಂತ ಭೂಹೀನ ಕುಟುಂಬಗಳು 26 ಕುಟುಂಬಗಳ ಫಾರಂ ನಂ: 50, 53 ಮತ್ತು 57 ಅರ್ಜಿಗಳನ್ನು ಸಲ್ಲಿಸಿ. ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಆದರೆ ಇದುವರೆಗೂ ಭೂ ಮಂಜೂರಾತಿ ಸಮಿತಿಯಲ್ಲಿ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ ಮತ್ತು ಪಹಣಿ ಆಗಿರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆಂಜನೇಯ ಕುರುಬದೊಡ್ಡಿ, ಕುರುಬದೊಡ್ಡಿ ಗ್ರಾಮಕ್ಕೆ ಅತ್ಯಂತ ಕಡಿಮೆ ಸೀಮಾಂತರದ ಜಮೀನು ಹೊಂದಿದ್ದು, ಇದರಲ್ಲಿ ಸರಕಾರಕ್ಕೆ ಉಳಿದಿರುವ 93 ಎಕರೆಯಲ್ಲಿ ರಾಜ್ಯ ಪೊಲೀಸ್ ಪಡೆಗೆ ಭೂಮಿ ನೀಡಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ಭೂಮಿ ಉಳಿಯುವುದಿಲ್ಲ, ಇದರಿಂದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಸರ್ಕಾರ ಉದ್ದೇಶಿಸಲಾಗಿರುವ ಯೋಜನೆಗೆ ರಾಯಚೂರು ಸುತ್ತ ಮುತ್ತಲಿನ 7 & 8 ಕಿ.ಮೀಟರ್ ಅಂತರದಲ್ಲಿರುವ ಇರುವ ಮಲಿಯಬಾದ ಗ್ರಾಮದಲ್ಲಿ ಸರ್ಕಾರಿ ಜಮೀನು 85 ಎಕರೆ ಇರುತ್ತದೆ ಅಲ್ಲಿ ಸ್ಥಾಪಿಸಲಿ ಎಂದು ಕಿಡಿಕಾರಿದರು.

ಬಿಜನಗೇರಾ ಗ್ರಾಮದಲ್ಲಿ ಅತೀ ಹೆಚ್ಚು ಸರ್ಕಾರಿ ಮತ್ತು ಗೈರಾಣಿ ಜಮೀನು ಇರುತ್ತದೆ. ಕಟ್ಟಟ್ಟೂರು ಗ್ರಾಮದಲ್ಲಿ ವಿಸ್ತೀರ್ಣ 97 ಎಕರೆ 00 ಗುಂಟೆ ಸರ್ಕಾರಿ ಗೈರಾಣಿ ಜಮೀನು ಇರುತ್ತದೆ. ಹಾಗೂ ವಡವಾಟಿ ಗ್ರಾಮದಲ್ಲಿ 100 ಎಕರೆ ಸರ್ಕಾರಿ ಜಮೀನು ಇರುತ್ತದೆ. ಸರ್ಕಾರ ಉದ್ದೇಶಿಸಲಾಗಿರುವ ಯೋಜನೆಗೆ ಸಾವಿರಾರು ಎಕರೆ ಲಭ್ಯವಿದೆ. ಆದ್ದರಿಂದ ಕುರುಬದೊಡ್ಡಿ ಗ್ರಾಮದಲ್ಲಿ ಈ ಯೋಜನೆ ಕೈಗೊಂಡಿರುವುದನ್ನು ಬಿಟ್ಟು ಬೇರೆ ಗ್ರಾಮಗಳಲ್ಲಿ ಪೊಲೀಸ್ ಮೈದಾನಕ್ಕಾಗಿ ಮತ್ತು ಸಮುಚ್ಚಾಯ ನಿರ್ಮಾಣ ಮಾಡಬೇಕೆಂದು ಹೇಳಿದರು.

1000155764

ಕೈಗಾರಿಕೆಗೆ ಭೂಮಿ ನೀಡಬೇಕು ಎಂದು ನೋಟಿಸ್ ಕಳುಹಿಸುತ್ತಿದ್ದಾರೆ. ನಾವು ಯಾವುದೇ ಒಂದು ಇಂಚು ಕೂಡ ಭೂಮಿ ಬಿಟ್ಟು ಕೊಡಲ್ಲ ಕೈಗಾರಿಕೆ ಬೇರೆ ಕಡೆ ಮಾಡಬೇಕು ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ರಾಯಚೂರು | ರಸಗೊಬ್ಬರ ಪೂರೈಕೆ ಮಾಡುವಂತೆ ರೈತ ಸಂಘಟನೆ ಒತ್ತಾಯ

ಈ ವೇಳೆ ಮಾರೆಪ್ಪ ಹರವಿ, ರಂಗಾರೆಡ್ಡಿ ,ಹನುಮಂತ ಗುಂಜಳ್ಳಿ , ಬಂಗಾರಿ ನರಸಿಂಹ,ಮಹೇಂದ್ರ ಗಾಜರಹಾಳ , ನರಸಿಂಹ , ಪಿ.ಮಾರೆಪ್ಪ ,ನರಸಪ್ಪ ,

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...