ಹುಣಸಗಿ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಹಳ್ಳಿಗಳಿಂದ ಬಂದ ಸಾರ್ವಜನಿಕರು ಕಾದು ಕುಳಿತಿದ್ದಾರೆ. ಆದರೆ, ನಾಗರಿಕ ಸೇವಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಕೆಲಸಗಳು ಆಗದೇ ಹರಸಾಹಸಪಡುತ್ತಿದ್ದಾರೆ. ಹೀಗಾಗಿ, ಸರ್ವರ್ ಸಮಸ್ಯಯನ್ನು ಬಗೆಹರಿಸಬೇಕು. ತಿದ್ದುಪಡಿಗೆ ನಿಗದಿಯಾಗಿರುವ ಕಡೆಯ ದಿನಾಂಕವನ್ನು ಮುಂದೂಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಯುವ ಘಟಕದ ಅಧ್ಯಕ್ಷ ಗೋಪಾಲಸಿಂಗ್ ಹಜೇರಿ ಒತ್ತಾಯಿಸಿದ್ದಾರೆ.
ಹುಣಸಗಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಆಹಾರ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡಿತರ ಚೀಟಿಯಲ್ಲಿ ಸಾರ್ವಜನಿಕರು ಹೆಸರು ತಿದ್ದುಪಡಿ ಹಾಗೂ ಹೆಸರು ಡಿಲಿಟ್ ಮಾಡಲು ಅವಕಾಶ ನೀಡಿದ್ದು, ಕಡೆಯ ದಿನಾಂಕವನ್ನು ಮುಂದೂಡಬೇಕು” ಎಂದರು.
ಸಂಘಟನೆಯ ತಾಲೂಕು ಅಧ್ಯಕ್ಷ ನಂದಣ್ಣ ದೊರೆ ಮಾತನಾಡಿ, “ಇದಲ್ಲದೇ ಪ್ರತಿ ದಿನಾಲು ಹೊಲ ಗದ್ದೆಗಳಿಗೆ ಹೋಗಿ ದಿನನಿತ್ಯ 200/300 ರೂ. ದುಡಿಯವ ರೈತಾಪಿ ವರ್ಗವು ದುಡಿಯುವುದನ್ನು ಬಿಟ್ಟು ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸಗಳಾಗದೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಹಾಗಾಗಿ, ಪಡಿತರ ಚೀಟಿಯ ತಿದ್ದಪಡಿ ಅವಧಿಯನ್ನು ನಿರಂತವಾಗಿ ಮುಂದುವರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷರು ಅಯ್ಯಣ್ಣ ಎಮ್ ಹೂಗಾರ ಯಾದಗಿರಿ ಗೌಡಪ್ಪ ಬಿರಾದಾರ, ಹಣಮಂತ್ರಾಯಗೌಡ ಪಾಟೀಲ್ ಹಳ್ಳಿ ಪರಶುರಾಮ ತಮಶೆಟ್ಟಿ, ಮೌನೇಶ ಬಳೂರಗಿ, ವಿ.ಸಿ. ಹಿರೇಮಠ, ಹುಲಗಪ್ಪ ದೇಸಾಯಿ, ದೇವರಾಜ ಗೌಡಗೇರಿ, ವಿರೇಶ ಬಳೂರಗಿ, ಮುತ್ತು ಬೊಮ್ಮಹಳ್ಳಿ, ಬಿ. ನಾಗಯ್ಯ, ಗುರುಪುತ್ರ, ತಾಯಪ್ಪ ಕಟ್ಟಿಮನಿ, ಅಯ್ಯೂಬ್ ಮಕಾನಂದಾರ, ಸಾಬಣ್ಣ ಬನಹಟ್ಟಿ, ಮರೆಣ್ಣಗೌಡ ಬನಹಟ್ಟಿ ಸೇರಿದಂತೆ ಇತರರು ಇದ್ದರು.
ವರದಿ: ಬಾಪುಗೌಡ ಮೇಟಿ, ಸಿಟಿಜನ್ ಜರ್ನಲಿಸ್ಟ್, ಹುಣಸಗಿ




