ಸೊಸೆ ದಲಿತ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕೆ ಆಕೆಯನ್ನು ಗಂಡನ ಮನೆಯವರು ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿಠಲಾಪುರದಲ್ಲಿ ನಡೆದಿತ್ತು. ವಾಲ್ಮೀಕಿ ಸಮುದಾಯದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಮಾದಿಗ ಸಮುದಾಯದ 21 ವರ್ಷದ ಮರಿಯಮ್ಮ ಅಮಾನುಷ ಜಾತಿ ಕ್ರೌರ್ಯಕ್ಕೆ ಬಲಿಯಾದ ಯುವತಿ. ಘಟನೆ ಬಗ್ಗೆ ಯುವತಿಯ ಪೋಷಕರು, ದಲಿತ ಮುಖಂಡರು ಮಾತನಾಡಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಆಕೆ ಇಷ್ಟು ಹಿಂಸೆ ಅನುಭವಿಸುತ್ತಿದ್ದಾಳೆ ಅಂತ ಗೊತ್ತಿದ್ರ ನಾವ್ ಮನಿಗೆ ಕರ್ಕೊಂಡು ಬರ್ತಿದ್ವಿ | Koppal
Date:



