ರಜಪೂತರೊಂದಿಗೆ ಹೋಲಿಸಿ ದಲಿತರನ್ನು ಹೊಗಳಿದ ನಿರುಪದ್ರವಿ ಟಿಪ್ಪಣಿಯೊಂದು ಬೆಟ್ಟವಾಗಿ ಬೆಳೆದು ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಮಂತ್ರಿ ಪರ್ಷೋತ್ತಮ ರೂಪಾಲ ಅವರನ್ನು ಕಾಡತೊಡಗಿದೆ. ಸಿಡಿದೆದ್ದಿರುವ ರಜಪೂತ ಸಮುದಾಯ, ರೂಪಾಲ ಅವರ ಟಿಕೆಟ್ ಕಿತ್ತುಕೊಂಡು ಬೇರೆ ಹುರಿಯಾಳನ್ನು ಹೂಡುವಂತೆ ಬಿಜೆಪಿಯ ಮೇಲೆ ಭಾರೀ ಒತ್ತಡ ಹೇರತೊಡಗಿದೆ. ರೂಪಾಲ ಅವರು ಗೋಗರೆದು ಕ್ಷಮೆ ಕೇಳಿದರೂ ಜಗ್ಗಿಲ್ಲ. ಈ ವಿವಾದ ಭುಗಿಲೇಳುವ ತನಕ ಬಿಜೆಪಿಯ ಪಾಲಿಗೆ ಅತ್ಯಂತ ಸುರಕ್ಷಿತ ಲೋಕಸಭಾ ಕ್ಷೇತ್ರ ಅಂತ ಕರೆಸಿಕೊಂಡಿತ್ತು.
ಅಸಮಾಧಾನಗೊಂಡ ರಜಪೂತರು, ಆತಂಕದಲ್ಲಿ ಬಿಜೆಪಿ
Date:



