ಲೋಕಸಭಾ ಚುನಾವಣೆಯ ಮತದಾನ ನಡೀತಾ ಇದೆ. ಪ್ರಧಾನಿ ಮೋದಿ ಅವರು ಮತ್ತೆ-ಮತ್ತೆ ಕರ್ನಾಟಕಕ್ಕೆ ಭೇಟಿ ಕೊಡ್ತಿದ್ದಾರೆ. ತಮ್ಮ ಸಾಧನೆಗಳ ಬಗ್ಗೆ ಹೇಳೋದಕ್ಕಿಂತ ಪ್ರತಿಪಕ್ಷಗಳ ಬಗ್ಗೆ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಇಷ್ಟೇ. ತಮ್ಮ ಸಾಧನೆಗಳನ್ನು ಹೆಚ್ಚಾಗಿ ಹೇಳಿಕೊಳ್ಳಲು ಏನೂ ಇಲ್ಲ. ಕರ್ನಾಟಕಕ್ಕೆ ಅವರ ಮಲತಾಯಿ ಧೋರಣೆ ಅನುಸರಿಸಿದ್ದೇ ಹೆಚ್ಚು. ಹೀಗಾಗಿ, ರಾಜ್ಯಕ್ಕೆ ಇಷ್ಟೊಂದು ಕೊಡುಗೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಮೋದಿ ಅವರಿಗೆ ಮುಖವಿಲ್ಲ.
ಕಷ್ಟಕ್ಕೆ ಕರೀಬೇಡಿ – ಓಟಾಕೋದು ಮರೀಬೇಡಿ; ಇದು ಮೋದಿ ರೂಲ್ಸ್
Date:



