ಸುದ್ದಿ 1: ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಮುಂದಾಗಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಇತ್ತೀಚೆಗೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿ 2: ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸವಣೂರು ಮುಖ್ಯ ರಸ್ತೆಯಲ್ಲಿರುವ ಚಂದ್ರು ಇಳಗೇರ ಮತ್ತು ಪಾಲುದಾರರಾಗಿರುವ ಶ್ರಾವಣಿ ರೆಸ್ಟೋರೆಂಟ್, ಬಾರ್ ಮತ್ತು ಲಾಡ್ಜ್ ಸ್ಥಗಿತ(ಬಂದ್) ಮಾಡುವಂತೆ ಕಳೆದ ಮೂರು ದಿನಗಳಿಂದ ಮಹಿಳೆಯರು ರಾತ್ರೋರಾತ್ರಿ ಪ್ರತಿಭನೆ ನಡೆಸಿದರು.
ಸುದ್ದಿ 3: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ಗೆ ಉಗ್ರ ಶಿಕ್ಷೆ ವಿಧಿಸಬೇಕು ಮತ್ತು ಚಿತ್ರರಂಗದಿಂದ ಅಮಾನತು ಮಾಡಬೇಕು ಎಂದು ವೀರಶೈವ ಸಮಾಜವು ದಾವಣಗೆರೆಯಲ್ಲಿ ಜೂನ್ 13ರಂದು ಪ್ರತಿಭಟನೆ ನಡೆಸಿದರು.




