ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತ, ಪಶ್ಚಿಮ ಘಟ್ಟಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಳಿಕ ಕರ್ನಾಟಕ ಅರಣ್ಯ ಇಲಾಖೆಯು ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ಆದೇಶ ಹೊರಡಿಸಿತ್ತು. ಸದ್ಯ ಈ ಆದೇಶವು ರಾಜ್ಯದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಯ ನಡುವೆ ಜಮೀನು ವಿವಾದವು ಇನ್ನೂ ಬಗೆಹರಿದಿಲ್ಲ. ಈ ನಡುವೆಯೇ ಅರಣ್ಯ ಇಲಾಖೆಯು ಕೃಷಿ ಮಾಡುತ್ತಿದ್ದ ಜಮೀನುಗಳು ಕೂಡ ಅರಣ್ಯಕ್ಕೆ ಸೇರಿದ್ದೆಂದು ಒಕ್ಕಲೆಬ್ಬಿಸಲು ಮುಂದಾಗಿದೆ. ಇದರಿಂದಾಗಿ ಭೂಮಿ ವಿವಾದದಿಂದಾಗಿ ರೈತರ ಬದುಕು ಬೀದಿಗೆ ಬೀಳುವ ಸ್ಥಿತಿಗೆ ತಲುಪಿದೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.
ರೈತರಿಗೆ ಮುಳುವಾಗುತ್ತಿದೆ ಅರಣ್ಯ ಇಲಾಖೆಯ ಈ ನಿಯಮ
Date:



