ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಮುದ್ರ ತೀರದ ರುಷಿಕೊಂಡ ಬೆಟ್ಟದಲ್ಲಿ ನಿರ್ಮಾಣವಾಗಿರುವ ‘ಅರಮನೆ’ ಈಗ ಚರ್ಚೆಯ ವಸ್ತುವಾಗಿದೆ. ರಾಜ್ಯದಲ್ಲಿ ಸಂಚಲನದ ಬಿರುಗಾಳಿ ಎಬ್ಬಿಸಿದೆ. ಆಂಧ್ರ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ (ವೈಎಸ್ಆರ್ಸಿಪಿ) ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ‘ವೈಯಕ್ತಿಕ ಅಗತ್ಯ’ಕ್ಕಾಗಿ 560 ಕೋಟಿ ರೂ. ಸರ್ಕಾರಿ ಹಣದಲ್ಲಿ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅದು ರಾಜ್ಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ನಿರ್ಮಿಸಲಾದ ಸರ್ಕಾರಿ ಕಟ್ಟಡಗಳೆಂದು ಎಸ್ಎಸ್ಆರ್ಸಿಪಿ ಹೇಳಿಕೊಂಡಿದೆ. ಅದಾಗ್ಯೂ, ಆ ಅರಮನೆಯೊಳಗಿನ ದುಬಾರಿ ವಸ್ತುಗಳು ಅದು ಪ್ರವಾಸೋದ್ಯಮಕ್ಕೋ ಅಥವಾ ವೈಯಕ್ತಿಕ ಐಷಾರಾಮಿ, ವಿಲಾಸಿ ಜೀವನಕ್ಕೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
560 ಕೋಟಿ ವೆಚ್ಚದ ರುಷಿಕೊಂಡ ಅರಮನೆ ವಿವಾದವೇನು?
Date:



