ಈ ದಿನ ಕವಿತೆ | ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

Date:

ನಡೆಯುತ್ತಿದೆ ತಿಂಗಳಿಂದ ಯುದ್ಧ
ಮುಗಿಯಲಿಲ್ಲ ರಕ್ತ ರಂಗಿನಾಟ
ಪಟಪಟ ಸಿಡಿವ ಮದ್ದು ಗುಂಡು
ಎದೆ ನಡುಗಿಸುವ ಶಬ್ದಕ್ಕೆ
ಬೆದರಿದ ಗರ್ಭದಲ್ಲಿರುವ ಶಿಶುವಿನ
ತಳಮಳದ ಹೊಯ್ದಾಟ.
ಎತ್ತರೆತ್ತರದ ಕಟ್ಟಡಗಳು
ಥರಗುಟ್ಟಿ ನೆಲಕ್ಕುರುಳುವಾಗ
ಒಳಗಿರುವ ಮಹಿಳೆ ಮಕ್ಕಳು
ಜೀವಂತ ಸಮಾಧಿ
ನೋವಿನ ಪರಮಾವಧಿ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಶೌಚಕ್ಕೆ ಉದ್ದನೆಯ ಸಾಲು ಸಾಲು
ನಿಸರ್ಗದ ಒತ್ತಡಕ್ಕೆ ತಡೆ
ಮುಟ್ಟಿಗೆ ಶುದ್ಧ ಪ್ಯಾಡುಗಳಿಲ್ಲ
ಸ್ನಾನಕ್ಕೆ ಶುದ್ದ ನೀರಿಲ್ಲ
ನರಕವಾಗಿದೆ ಬದುಕು
ಗಾಝಾದಲ್ಲಿ ಬಿದ್ದಿರುವ ಶವಗಳು
ಭೀಕರ ಸಾವಿನ ದೃಶ್ಯಗಳು
ಗಾಝಾ ಎಂದರೆ ಮಕ್ಕಳ ಮಸಣ
ಶೌಚ, ನೀರು, ಒಳ ಉಡುಪುಗಳು
ಲಭ್ಯವಿಲ್ಲ, ಎಲ್ಲೆಡೆಯೂ ಅಪಾಯ
ಮಹಿಳೆ ಮಕ್ಕಳಿಗೆ, ಗರ್ಭಿಣಿಯರಿಗೆ
ಸುರಕ್ಷಿತ ತಾಣಗಳೇ ಇಲ್ಲ
ಅಂಗಲಾಚುವ ಹೆಂಗಳೆಯರಿಗೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಲ್ಲ
ಜೀವ ಉಳಿಸಿಕೊಳ್ಳುವ ಹೋರಾಟ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ವಲಸೆ ಹೋಗುವುದಾದರೂ ಎಲ್ಲಿಗೆ?
ಮೇಲಿಂದ ಹೆರಿಗೆಯ ನೋವು, ಸಂಕಟ
ಯಾವ ಜಾಗವೂ ಸುರಕ್ಷಿತವಲ್ಲ.
ಮನೆ, ಆಸ್ಪತ್ರೆ, ಶಾಲೆ ಭದ್ರತೆಯ
ತಾಣಗಳೇ ಮಾಯವಾಗಿವೆ.
ಭೂಮಿಯ ಮೇಲೆ ಹೆರಿಗೆಗೊಂದು
ಸುರಕ್ಷಿತ ತಾಣವನ್ನು
ಎಲ್ಲಿ ಹುಡುಕಲಿ ಹೇಳು ಪ್ರಭುವೇ!
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಡಿಯಲು ನೀರಿಲ್ಲ
ಅನ್ನ ಆಹಾರ ದೂರದ ಮಾತು
ನೀರಿಲ್ಲದೇ ಬಾಣಂತಿಯರ
ಎದೆ ಹಾಲು ಬತ್ತಿ ಹೋಗಿದೆ
ಹಸಿವು ತಡೆಯದೆ ಹಸುಳೆಗಳ
ಅಕ್ರಂದನ ಮುಗಿಲು ಮುಟ್ಟಿದೆ
ಬಿಕ್ಕಿ ಬಿಕ್ಕಿ ಕಣ್ಣುಮುಚ್ಚುವ ಕಂದ
ವಿದ್ಯುತ್ತಿಲ್ಲ, ಆಮ್ಲಜನಕವಿಲ್ಲದೇ ಜೀವಬಿಟ್ಟ
ಮಕ್ಕಳು ಅಂಗಳದ ಶವವಾಗಿ
ಕೊಳೆತ ವಾಸನೆ ತಡೆಯಲಾಗದು
ಸುರಕ್ಷಿತ ಜಾಗವಿಲ್ಲ ಹೆರಿಗೆಗೆ
ಎಲ್ಲಿ ಹೋಗಲಿ ಹೇಳು ಪ್ರಭುವೇ?
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಇಸ್ರೇಲಿನ ಯಹೂದಿಗಳ
ಯುದ್ಧಕ್ಕೆ ಗಾಝಾ ಮಸಣವಾಯ್ತು
ಪ್ಯಾಲೆಸ್ತೇನಿಯರ ನರಮೇಧವಾಯ್ತು
ಉರಿದುಬಿದ್ದ ಮನೆಗಳು
ಛಿದ್ರವಾದ ದೇಹಗಳು
ಹಾಲುಗಲ್ಲದ ಹಸುಮಕ್ಕಳ
ಎದೆಗವುಚಿ ರೋದಿಸುವ ತಾಯಂದಿರು
ಕರುಣೆಯ ಹನಿ ಅಮೃತ ನೀಡಲು
ಅಲ್ಲಾಹ್‍ನಲ್ಲಿ ಪ್ರಾರ್ಥಿಸುವ ಕೈಗಳು
ಹೆರಿಗೆಗೆ ಸುರಕ್ಷಿತ ತಾಣ ಒದಗಿಸಲು
ಕೋರುತ್ತಿದ್ದಾರೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಢಾಂ.ಢುಂ.ಧಡ್, ಧಡಲ್
ನಿರಂತರ ಬೀಳುವ ಬಾಂಬು
ಎದೆ ನಡುಗಿಸುವ ಶಬ್ದ
ಹಸಿವು, ನೀರು, ಬಟ್ಟೆಯಿಲ್ಲದೆ
ಪರಿಣಾಮಗಳು ಮುಂದಿವೆ
ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಿಲ್ಲ
ಜೀವ ಉಳಿಸಿಕೊಳ್ಳುವ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

k shareefa
ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಥುವಾ ಪ್ರಕರಣ | ಭದ್ರತೆ ಕಡಿತ; ‘ಮಗಳು ಶಾಲೆಗೂ ಹೋಗುತ್ತಿಲ್ಲ’ ಎಂದ ವಕೀಲೆ ದೀಪಿಕಾ

2018ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಧರ್ಮಸ್ಥಳ | 74 ಅಸಹಜ ಸಾವು ಪ್ರಕರಣದ ಸಂಪೂರ್ಣ ತನಿಖಾ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಧರ್ಮಸ್ಥಳದಲ್ಲಿ ಸಂಭವಿಸಿರುವ 74 ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಉಡುಪು ಉದ್ಯಮದಲ್ಲಿ ಜಿಲ್ಲೆಯ ಕುಶಲೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...