‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ಹೋದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆ

Date:

ಇತ್ತೀಚೆಗೆ ಅಮೆರಿಕದಿಂದ ದಾಖಲೆರಹಿತ ಭಾರತೀಯ ವಲಸಿಗರನ್ನು ಕೈಕೋಳ ತೊಡಿಸಿ ನಿರ್ಧಯವಾಗಿ ಅಮೆರಿಕದಿಂದ ಹೊರ ಹಾಕಲಾಗಿದೆ. ಈ ನಡುವೆ 2010ರಲ್ಲಿ ‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ತೆರಳಿದ ಭಾರತದ 102 ಜನರ ಪೈಕಿ ಪಂಜಾಬ್‌ನ ಸುಮಾರು 40 ಯುವಕರು ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದಾರೆ.

ಫತೇಘರ್ ಸಾಹಿಬ್ ಜಿಲ್ಲೆಯ ಟ್ಯಾಪ್ರಿಯನ್ ಗ್ರಾಮದ ದಲ್ಜಿತ್ ಸಿಂಗ್ ಅವರ ಮಗ ರವೀಂದರ್ ಸಿಂಗ್ 2010ರ ಸೆಪ್ಟೆಂಬರ್ 15ರಂದು ಅಮೆರಿಕಕ್ಕೆ ತೆರಳಿದ್ದು, ಈವರೆಗೆ ಅವರ ಕುಟುಂಬಕ್ಕೆ ರವೀಂದರ್ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ.

ಇದನ್ನು ಓದಿದ್ದೀರಾ? ‘ಶಾರೂಕ್ ಖಾನ್ ಆ‌್ಯಕ್ಟಿಂಗ್ ಕಿ ಭಗವಾನ್’ ಎಂದ ಪ್ರೇಕ್ಷಕ; ಟ್ವಿಟರ್ ಟ್ರೆಂಡಿಂಗ್‌ನಲ್ಲಿ ‘ಡಂಕಿ’ ಸಿನಿಮಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನನ್ನ ಹಿರಿಯ ಮಗ ದ್ವಿತೀಯ ಪಿಯುಸಿ ಮುಗಿಸಿದ್ದು ಚಾಲಕನಾಗಿದ್ದನು. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದನು. ಅದಕ್ಕಾಗಿ ಪಂಚಕುಲದಲ್ಲಿರುವ ಟ್ರಾವೆಲ್ ಏಜೆಂಟ್‌ಗಳನ್ನು ನಾವು ಸಂಪರ್ಕಿಸಿದೆವು. 20 ಲಕ್ಷ ರೂಪಾಯಿ ನೀಡುವ ಒಪ್ಪಂದವನ್ನು ಮಾಡಿಕೊಂಡೆವು. ಮುಂಗಡವಾಗಿ ಐದು ಲಕ್ಷ ರೂಪಾಯಿ ನೀಡಿದೆವು. ನಮ್ಮ ಮಗನನ್ನು ಇತರರೊಂದಿಗೆ ನೇರವಾಗಿ ಮೆಕ್ಸಿಕೊಕ್ಕೆ ಕರೆದೊಯ್ಯಲಾಗುವುದು, ನಂತರ ಅಮೆರಿಕಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದ್ದರು. ಆದರೆ ದೆಹಲಿಯಿಂದ ಮನುವಾಗೆ ಕರೆದೊಯ್ಯಲಾಗಿದೆ” ಎಂದು ದಲ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಮತ್ತೆ ಐದು ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಕ್ಕೆ ನಾವು ಐದು ಲಕ್ಷ ರೂಪಾಯಿ ನೀಡಿದೆವು. 10 ದಿನಗಳ ನಂತರ ಅವರು ಮತ್ತು ಇತರರು ಗ್ವಾಟೆಮಾಲಾ ನಗರವನ್ನು ತಲುಪಿದ್ದಾರೆಂದು ನಮಗೆ ತಿಳಿಯಿತು. ಈ ಏಜೆಂಟರು ಉಳಿದ 10 ಲಕ್ಷ ರೂ.ಗಳನ್ನು ಕೇಳಿದರು, ನಾವು ಅವರಿಗೆ 7 ಲಕ್ಷ ರೂ.ಗಳನ್ನು ನೀಡಿದೆವು. ನಮ್ಮ ಮಗ ಅಮೆರಿಕ ತಲುಪಿದ ನಂತರ ಕರೆ ಮಾಡುತ್ತಾರೆ ಎಂದು ತಿಳಿಸಲಾಯಿತು. ಆದರೆ ಇಲ್ಲಿಯವರೆಗೆ ನಮ್ಮೊಂದಿಗೆ ನಮ್ಮ ಮಗ ಮಾತನಾಡಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಅಮೆರಿಕದಿಂದ ಕೈಕೋಳ ತೊಟ್ಟು ಬಂದ ಭಾರತೀಯರು ಬಿಚ್ಚಿಟ್ಟ ಮೂರು ಸಂಗತಿಗಳಿವು!

ಸದ್ಯ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಹಾಗೆಯೇ ಇಡಿ ಅಧಿಕಾರಿಗಳು ನಾಪತ್ತೆಯಾದ ಯುವಕರ ಕುಟುಂಬಸ್ಥರನ್ನು ಎರಡು ಬಾರಿ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಏಜೆಂಟರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಹೀಗೆ ‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ಹೋದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಇದು ದೂರು ದಾಖಲಾಗಿರುವ ಪ್ರಕರಣಗಳಾಗಿವೆ. ಇದನ್ನು ಹೊರತುಪಡಿಸಿ ದೂರು ದಾಖಲಾಗದ ಅದೆಷ್ಟೋ ನಾಪತ್ತೆ ಪ್ರಕರಣಗಳಿವೆ ಎಂದು ವರದಿಯಾಗಿದೆ. ಒಂದೆಡೆ ಹಣಕ್ಕಾಗಿ ಯುವಕರನ್ನು ಅಪಾಯಕಾರಿ, ಅಕ್ರಮ ದಾರಿಯಲ್ಲಿ ಇನ್ನೊಂದು ದೇಶಕ್ಕೆ ಏಜೆಂಟರು ಕರೆದೊಯ್ದರೆ, ಇನ್ನೊಂದೆಡೆ ದೇಶದಲ್ಲಿ ಉದ್ಯೋಗವಿಲ್ಲದೆ ಅಪಾಯ ಎದುರಿಸಿಯಾದರೂ ಉದ್ಯೋಗ ಪಡೆಯಲು ವಿದೇಶಕ್ಕೆ ಹೋಗುವ ಸಾಹಸಕ್ಕೆ ಯುವಕರು ಇಳಿಯುತ್ತಾರೆ.

ಭಾರತದಲ್ಲಿ ನಿರುದ್ಯೋಗ ಅಧಿಕವಾಗುತ್ತಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜೊತೆಗೆ ಮಾಡುವ ಉದ್ಯೋಗಕ್ಕೆ ಮತ್ತು ಅರ್ಹತೆಗೆ ತಕ್ಕುದಾದ ವೇತನವೂ ಭಾರತದಲ್ಲಿಲ್ಲ. ಇದರಿಂದಾಗಿ ಹಲವು ಯುವಕರು ವಿದೇಶದತ್ತ ಒಲವು ತೋರುತ್ತಿದ್ದಾರೆ. ಭಾರತದ ಪೌರತ್ವವನ್ನೇ ತ್ಯಜಿಸಿ ವಿದೇಶದಲ್ಲಿ ನೆಲೆಸುತ್ತಿದ್ದಾರೆ. ಇವೆಲ್ಲವುದರ ನಡುವೆ ಇತ್ತ ಉದ್ಯೋಗವೂ ಇಲ್ಲದೆ, ವಿದೇಶಕ್ಕೆ ತೆರಳಲು ವೀಸಾವೂ ಸಿಗದ ಹಲವು ಮಂದಿ ಈ ರೀತಿ ಅಕ್ರಮವಾಗಿ ಡಂಕಿ ಮಾರ್ಗ ಮೂಲಕ ವಿದೇಶಕ್ಕೆ ತೆರಳ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ನಾಪತ್ತೆಯಾಗುತ್ತಿದ್ದಾರೆ!

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...