ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇಂಧನ ಹರಿವನ್ನು ನಿಯಂತ್ರಿಸುವ ಸ್ವಿಚ್ಗಳನ್ನು ಕ್ಯಾಪ್ಟನ್ ಎಳೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್ಗಳು ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಧ್ಯಮಗಳ ವರದಿಯನ್ನು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ(NTSB) ಮುಖ್ಯಸ್ಥರು ಟೀಕಿಸಿದ್ದು, ‘ಆತುರದ, ಊಹಾಪೋಹ’ ವರದಿ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ NTSB ಅಧ್ಯಕ್ಷೆ ಜೆನ್ನಿಫರ್ ಹೋಮೆಂಡಿ ಪೋಸ್ಟ್ ಮಾಡಿದ್ದಾರೆ. “ಈ ರೀತಿಯ ತನಿಖೆ ಸಾಮಾನ್ಯವಾಗಿ ಸಮಯ ತೆಗೆದುಕೊಳ್ಳುತ್ತದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಲಾಗಿಲ್ಲ. ಈ ಬಗ್ಗೆ ಮಾಧ್ಯಮಗಳ ವರದಿಯು ಆತುರವಾಗಿ ಮಾಡಲಾಗಿದೆ ಮತ್ತು ಊಹಾತ್ಮಕವಾಗಿದೆ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ಎರಡೂ ಎಂಜಿನ್ಗಳು ಸ್ಥಗಿತ: ಏರ್ ಇಂಡಿಯಾ ದುರಂತದ ತನಿಖಾ ವರದಿ
ಜೂನ್ 12ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ಲೈನರ್ 787-8 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 242 ರಲ್ಲಿ 241 ಜನರು ಸೇರಿದಂತೆ ಕನಿಷ್ಠ 270 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯ ತನಿಖಾ ವರದಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ಎನ್ಟಿಎಸ್ಬಿ ನೆರವಿನೊಂದಿಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ನೇತೃತ್ವದ ತನಿಖಾಧಿಕಾರಿಗಳು ಪುರಾವೆಗಳನ್ನು ಒಟ್ಟುಗೂಡಿಸಿದ್ದಾರೆ.
Statement from NTSB Chairwoman Jennifer Homendy:
— NTSB Newsroom (@NTSB_Newsroom) July 18, 2025
“Recent media reports on the Air India 171 crash are premature and speculative. India’s Aircraft Accident Investigation Bureau just released its preliminary report. Investigations of this magnitude take time. We fully support the…
ಹಾಗೆಯೇ ತನಿಖೆ ನಡೆಯುತ್ತಿರುವಾಗ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದು ಎಎಐಬಿ ಮತ್ತು ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪ್ಬೆಲ್ ವಿಲ್ಸನ್ ಸಹ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇನ್ನು ಅಂತಿಮ ವರದಿ ಬಿಡುಗಡೆಗೆ ಒಂದು ವರ್ಷ ತೆಗೆದುಕೊಳ್ಳಬಹುದು ಅಥವಾ ಅದಕ್ಕೂ ಅಧಿಕ ಸಮಯ ತೆಗೆದುಕೊಳ್ಳಬಹುದು.
ಈ ದುರಂತದ ಪ್ರಾಥಮಿಕ ತನಿಖಾ ವರದಿ ಪ್ರಕಾರ ಟೇಕ್ ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡು ಇಂಧನ ನಿಯಂತ್ರಣ ಸ್ವಿಚ್ಗಳು ತ್ವರಿತವಾಗಿ ‘ಕಟ್ಆಫ್’ ಸ್ಥಾನಕ್ಕೆ ಮರಳಿದೆ. ಎಂಜಿನ್ಗಳಿಗೆ ಇಂಧನ ಪೂರೈಕೆ ಕಡಿಮೆಯಾಗಿದ್ದು, ವಿಮಾನವು ಸಂಪೂರ್ಣ ಒತ್ತಡವನ್ನೂ ಕಳೆದುಕೊಂಡಿತ್ತು. ಅಂದರೆ ಎರಡೂ ಇಂಜಿನ್ಗಳು ಸ್ಥಗಿತಗೊಂಡಿತ್ತು.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ದುರಂತ | ವಿಮಾನ ಅಪ್ಪಳಿಸಿದ ಮುನ್ನಿನ ಆ 32 ಸೆಕೆಂಡುಗಳು!
ವಿಮಾನದಿಂದ ಬಂದ ಕಾಕ್ಪಿಟ್ ಧ್ವನಿ ರೆಕಾರ್ಡಿಂಗ್ನಿಂದಾಗಿ ಪೈಲಟ್ ಕ್ಲೈವ್ ಕುಂದರ್ ಅವರು ಸಹ ಪೈಲಟ್ ಸುಮೀತ್ ಸಭರ್ವಾಲ್ ಅವರ ಬಳಿಕ ಸ್ವಿಚ್ಗಳನ್ನು ಏಕೆ ಸರಿಸಿದ್ದೀರಿ ಎಂದು ಕೇಳಿರುವುದು ತಿಳಿದುಬಂದಿದೆ. ಈ ವೇಳೆ ಸುಮೀತ್ ಸಭರ್ವಾಲ್ ತಾನು ಸ್ವಿಚ್ಗಳನ್ನು ಸರಿಸಿಲ್ಲ ಎಂದು ಉತ್ತರಿಸಿದ್ದಾರೆ.
ಇದೀಗ ಸ್ವಿಚ್ಗಳನ್ನು ಹೇಗೆ ಮತ್ತು ಏಕೆ ಆಫ್ ಮಾಡಲಾಗಿದೆ ಎಂಬುದು ತನಿಖಾಧಿಕಾರಿಗಳ ವಿಚಾರಣೆಯ ಪ್ರಮುಖ ವಿಷಯವಾಗಿದೆ. ಕೆಲವರು ಇದು ಪೈಲಟ್ನ ಅಜಾಗರೂಕತೆ ಎಂದು ಹೇಳಿದರೆ, ಇನ್ನು ಕೆಲವು ತಜ್ಞರು ಈ ರೀತಿ ಆಗಲು ಸಾಧ್ಯವೇ ಇಲ್ಲ, ಇದು ವಿಮಾನದ ಸಮಸ್ಯೆ ಎಂದು ಹೇಳಿದ್ದಾರೆ. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.





