‘ಬೆನಝೀರ್‌ ಭುಟ್ಟೋ’ ಮುಸ್ಲಿಂ ರಾಷ್ಟ್ರವೊಂದರ ಮೊದಲ ಮಹಿಳಾ ಪ್ರಧಾನಿಯಾದ ಗಟ್ಟಿಗಿತ್ತಿ

Date:

ಭಾರತದಲ್ಲಿ ಸುದೀರ್ಘ ಕಾಲ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮತ್ತು ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಝೀರ್‌ ಭುಟ್ಟೋ ಇಬ್ಬರ ಬದುಕು ಬಹಳ ಸಾಮ್ಯತೆಯಿಂದ ಕೂಡಿದೆ. ಇಬ್ಬರೂ ಶ್ರೀಮಂತ ರಾಜಕೀಯ ಕುಟುಂಬದ ಕುಡಿಗಳು. ಇಬ್ಬರೂ ಪ್ರಧಾನಿಯ ಮಕ್ಕಳಾಗಿ, ತಾವೂ ಪ್ರಧಾನಿಗಳಾಗಿ ದೇಶ ಆಳಿದವರು. ಕೊನೆಗೆ ಇಬ್ಬರೂ ಗುಂಡೇಟಿನಿಂದ ಅಂತ್ಯ ಕಂಡರು. ಇಂದು ಬೆನಝೀರ್‌ ಜನ್ಮದಿನ

ಮುಸ್ಲಿಂ ಬಹುಸಂಖ್ಯಾತ ದೇಶವೊಂದನ್ನು ಮಹಿಳೆಯೊಬ್ಬರು ಆಳುವುದು, ಮೂಲಭೂತವಾದಿ ಮನಸ್ಥಿತಿಯ ಜನ ಆಳಿಸಿಕೊಳ್ಳುವುದು ಕನಸಿನಷ್ಟೇ ಆಕಸ್ಮಿಕವೇನೋ! ಮುಂದೆ ಅಂತಹದೊಂದು ಚಾರಿತ್ರಿಕ ಘಟನೆ ನಡೆಯುವುದು ಅನುಮಾನ. ಆದರೆ 1988- 96ರ ಮಧ್ಯೆ ಎರಡು ಬಾರಿ ಪಾಕಿಸ್ತಾನವೆಂಬ ಮೂಲಭೂತವಾದಿ ದೇಶವನ್ನು ಬೆನಝೀರ್‌ ಭುಟ್ಟೋ ಎಂಬ ಗಟ್ಟಿಗಿತ್ತಿ ಆಳಿದ್ರು. ಅವರ ತಂದೆ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಸ್ಥಾಪಿಸಿದ್ದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯನ್ನು ವರ್ಷಗಳ ಕಾಲ ಮುನ್ನಡೆಸಿದ್ದರು.

ಭಾರತದಲ್ಲಿ ಸುದೀರ್ಘ ಕಾಲ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮತ್ತು ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಝೀರ್‌ ಭುಟ್ಟೋ ಇಬ್ಬರ ಬದುಕು ಬಹಳ ಸಾಮ್ಯತೆಯಿಂದ ಕೂಡಿದೆ. ಇಬ್ಬರೂ ಶ್ರೀಮಂತ ರಾಜಕೀಯ ಕುಟುಂಬದ ಕುಡಿಗಳು. ಇಬ್ಬರೂ ಪ್ರಧಾನಿಯ ಮಕ್ಕಳಾಗಿ, ತಾವೂ ಪ್ರಧಾನಿಗಳಾಗಿ ದೇಶ ಆಳಿದವರು. ಕೊನೆಗೆ ಇಬ್ಬರೂ ಗುಂಡೇಟಿನಿಂದ ಅಂತ್ಯ ಕಂಡರು. ಇಂದಿರಾಗಾಂಧಿ ತಮಗೆ ಸ್ಪೂರ್ತಿ ಎಂದು ಭುಟ್ಟೋ ಹೇಳಿಕೊಂಡಿದ್ದರು. ಜೂನ್‌ 21 ಬೆನಝೀರ್ ಜನ್ಮದಿನ. ಈಗ ಅವರಿದ್ದಿದ್ದರೆ 72 ವರ್ಷ ತುಂಬುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆನಝೀರ್ ಭುಟ್ಟೊ ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಮಾತ್ರವಲ್ಲ ಆಧುನಿಕ ಇತಿಹಾಸದಲ್ಲಿ ಮುಸ್ಲಿಂ ಬಹುಸಂಖ್ಯಾತ ದೇಶದ ಮೊದಲ ನಾಯಕಿ ಎಂದೇ ಪರಿಗಣಿಸಲಾಗಿದೆ. ಉದಾರವಾದಿ, ಜಾತ್ಯತೀತ ಮತ್ತು ವರ್ಚಸ್ವಿ ವ್ಯಕ್ತಿಯಾಗಿದ್ದ ಅವರ ಜೀವನ 1980ರ ದಶಕದ ಆರಂಭದಿಂದ 2007ರಲ್ಲಿ ಹತ್ಯೆಯಾಗುವವರೆಗೆ ರಾಜಕೀಯ ಗೆಲುವು, ವೈಯಕ್ತಿಕ ದುರಂತಗಳು ಮತ್ತು ನಿರಂತರ ವಿವಾದಗಳಿಂದ ಸದ್ದು ಮಾಡಿದ್ದವು.

4558356 1986164244

ಜುಲ್ಫಿಕರ್ ಅಲಿ ಭುಟ್ಟೊ ಅವರ ಇರಾನಿನ-ಕುರ್ದಿಶ್ ಮೂಲದ ನುಸ್ರತ್ ಭುಟ್ಟೊ ದಂಪತಿಗೆ ಜೂನ್ 21, 1953ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಬೆನಝೀರ್ ‌ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯರು. ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದಿದ ಚಿಕ್ಕಮ್ಮನ ಹೆಸರನ್ನು ಇವರಿಗೆ ಇಡಲಾಗಿತ್ತು. ಕರಾಚಿಯ ಜೀಸಸ್ ಮತ್ತು ಮೇರೀಸ್‌ ಕಾನ್ವೆಂಟ್ ಸೇರಿದಂತೆ ಪಾಕಿಸ್ತಾನದ ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿದರು. ರಾಡ್‌ಕ್ಲಿಫ್ ಕಾಲೇಜು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ, ಅಂತರರಾಷ್ಟ್ರೀಯ ಕಾನೂನಿನಲ್ಲಿ ಎಂ ಎ ಅಧ್ಯಯನ ಮಾಡಿದರು. 1976ರಲ್ಲಿ ಆಕ್ಸ್‌ಫರ್ಡ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಜಕೀಯ ಜೀವನ ಆರಂಭ : ಪ್ರಧಾನಿಯ ಮಗಳಾಗಿ ರಾಜಕೀಯವಾಗಿ ಪ್ರಭಾವಶಾಲಿ ಕುಟುಂಬದಲ್ಲಿ ಬೆಳೆದರು. ಚಿಕ್ಕ ವಯಸ್ಸಿನಲ್ಲಿಯೇ ಚೀನಾದ ಝೌ ಎನ್ಲೈ ಮತ್ತು ಅಮೆರಿಕದ ರಾಜತಾಂತ್ರಿಕ, ರಾಜಕೀಯ ವಿಜ್ಞಾನಿ ಹೆನ್ರಿ ಕಿಸ್ಸಿಂಜರ್ ಅವರಂತಹ ಜಾಗತಿಕ ನಾಯಕರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. 1972ರಲ್ಲಿ ಸಿಮ್ಲಾದಲ್ಲಿ ನಡೆದ ಭಾರತ-ಪಾಕಿಸ್ತಾನ ಶೃಂಗಸಭೆಗೆ ತನ್ನ ತಂದೆಯೊಂದಿಗೆ ಭಾಗವಹಿಸಿದ್ದರು.

indira gandhi and zulfikar ali bhutto in simla 1972 1687351507 2270
1972ರಲ್ಲಿ ಸಿಮ್ಲಾದಲ್ಲಿ ನಡೆದ ಭಾರತ-ಪಾಕಿಸ್ತಾನ ಶೃಂಗಸಭೆ ಸಮಯದ ಚಿತ್ರ. ಇಂದಿರಾಗಾಂಧಿ ಮತ್ತು ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ

ಜುಲ್ಫಿಕರ್ ಅಲಿ ಭುಟ್ಟೋ 1967ರಲ್ಲಿ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯನ್ನು ಸ್ಥಾಪಿಸಿದರು. ಸಮಾಜವಾದ, ಪ್ರಜಾಪ್ರಭುತ್ವ ಮತ್ತು ಜನತಾವಾದವನ್ನು ಪ್ರತಿಪಾದಿಸಿದರು. 1977ರಲ್ಲಿ ಜನರಲ್ ಜಿಯಾ-ಉಲ್-ಹಕ್ ನೇತೃತ್ವದ ಮಿಲಿಟರಿ ದಂಗೆಯಲ್ಲಿ ಪದಚ್ಯುತಗೊಳ್ಳುವವರೆಗೂ ಅವರು ಅಧ್ಯಕ್ಷರಾಗಿ (1971–1973) ಮತ್ತು ಪ್ರಧಾನ ಮಂತ್ರಿಯಾಗಿ (1973–1977) ಸೇವೆ ಸಲ್ಲಿಸಿದರು. 1977ರಲ್ಲಿ, ಬೆನಝೀರ್ ತನ್ನ ತಂದೆಗೆ ಸಲಹೆಗಾರಳಾಗಿ ಆಕ್ಸ್‌ಫರ್ಡ್‌ನಿಂದ ಹಿಂತಿರುಗಿದರು. ಆದರೆ ಶೀಘ್ರ ಉಂಟಾದ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಸಿಲುಕಿಕೊಂಡರು. ಜಿಯಾ ಅವರ ದಂಗೆಯ ನಂತರ, ರಾಜಕೀಯ ಎದುರಾಳಿಯ ಕೊಲೆಯ ಆರೋಪದ ಮೇಲೆ ಜುಲ್ಫಿಕರ್ ಅವರನ್ನು 1979ರಲ್ಲಿ ಬಂಧಿಸಿ ಗಲ್ಲಿಗೇರಿಸಲಾಯಿತು. ಬೆನಝೀರ್ ಮತ್ತು ಅವರ ತಾಯಿ ನುಸ್ರತ್ ಅವರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಯಿತು. ಅವರ ತಂದೆಯ ಮರಣದಂಡನೆಯ ನಂತರ, ಬೆನಝೀರ್ ಪಿಪಿಪಿಯ ಮುಖ್ಯಸ್ಥರಾದರು. ಜಿಯಾ ಆಡಳಿತದ ವಿರುದ್ಧ ಪ್ರಜಾಪ್ರಭುತ್ವದ ಪುನಃಸ್ಥಾಪನೆಗಾಗಿ ಚಳವಳಿಯನ್ನು ಮುನ್ನಡೆಸಿದರು. ಅವರು ಆಗಾಗ್ಗೆ ಗೃಹಬಂಧನಗಳನ್ನು (1979–1984) ಅನುಭವಿಸಿದರು.

1984ರಲ್ಲಿ ಬಿಡುಗಡೆಯಾದ ಬೆನಝೀರ್ ಲಂಡನ್‌ಗೆ ತೆರಳಿದರು. ಅಲ್ಲಿಂದಲೇ ಪಕ್ಷವನ್ನು ಮುನ್ನಡೆಸಿದರು. ಜಿಯಾ ಅವರ ರಾಜೀನಾಮೆಗೆ ಒತ್ತಾಯಿಸಿ ಅವರು ಏಪ್ರಿಲ್ 1986ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. ಆಗ ಅವರಿಗೆ ಬೆಂಬಲಿಗರು ಬೃಹತ್ ಸಾರ್ವಜನಿಕ ಸ್ವಾಗತವನ್ನು ನೀಡಿದರು.

1987ರಲ್ಲಿ, ಅವರು ಆಸಿಫ್ ಅಲಿ ಜರ್ದಾರಿ ಅವರನ್ನು ವಿವಾಹವಾದರು. ಅವರಿಗೆ ಬಿಲಾವಲ್, ಬಖ್ತಾವರ್ ಮತ್ತು ಅಸೀಫಾ ಎಂಬ ಮಕ್ಕಳಿದ್ದಾರೆ.

ಮಕ್ಕಳೊಂದಿಗೆ ಭುಟ್ಟೋ
ಮಕ್ಕಳೊಂದಿಗೆ ಬೆನಝೀರ್‌ ಭುಟ್ಟೋ

ಪ್ರಧಾನಮಂತ್ರಿಯಾಗಿ ಬೆನಝೀರ್: 1988ರ ವಿಮಾನ ಅಪಘಾತದಲ್ಲಿ ಜಿಯಾ ಅವರ ಮರಣದ ನಂತರ ನಡೆದ ಚುನಾವಣೆಯಲ್ಲಿ ಭುಟ್ಟೋ ಅವರ ಪಿಪಿಪಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಿತು. ಭುಟ್ಟೋ 35ನೇ ವಯಸ್ಸಿನಲ್ಲಿ, 1988 ಡಿಸೆಂಬರ್ 1ರಂದು ಪ್ರಧಾನಿಯಾದರು. 1977ರ ನಂತರ ಪಾಕಿಸ್ತಾನದ ಮೊದಲ ನಾಗರಿಕ ಸರ್ಕಾರವನ್ನು ಮುನ್ನಡೆಸಿದರು. ಅವರ ಸರ್ಕಾರವು ಸಿಂಧ್‌ನಲ್ಲಿ ಬಡತನ, ಭ್ರಷ್ಟಾಚಾರ ಮತ್ತು ಜನಾಂಗೀಯ ಉದ್ವಿಗ್ನತೆಗಳನ್ನು ಎದುರಿಸಬೇಕಾಯ್ತು.

ಎರಡನೇ ಅವಧಿಗೆ 1993ರಲ್ಲಿ ಮರು ಆಯ್ಕೆಯಾದ ಭುಟ್ಟೋ ಮುಕ್ತ ಮಾರುಕಟ್ಟೆ ನೀತಿಗಳು, ಖಾಸಗೀಕರಣವನ್ನು ಜಾರಿಗೆ ತಂದರು. ಪಾಕಿಸ್ತಾನದ ಪರಮಾಣು ಯೋಜನೆಗಳನ್ನು ಬೆಂಬಲಿಸಿದರು. ಅವರ ಕಾಲದಲ್ಲಿ ಭಾರತದೊಂದಿಗೆ ಸಂಬಂಧ ಸುಧಾರಿಸಿತ್ತು. ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಮತ್ತೆ ಸೇರಿದರು. ಆದಾಗ್ಯೂ, ಭ್ರಷ್ಟಾಚಾರದ ಆರೋಪದ ಮೇಲೆ 1996ರಲ್ಲಿ ಅಧ್ಯಕ್ಷ ಫಾರೂಕ್ ಲೆಘಾರಿ ಭುಟ್ಟೋ ಸರ್ಕಾರವನ್ನು ವಜಾಗೊಳಿಸಿದರು.

ಸಾಧನೆಗಳು: ಮಹಿಳಾ ಹಕ್ಕುಗಳು, ಶಿಕ್ಷಣ ಮತ್ತು ಬಡತನ ನಿರ್ಮೂಲನೆಗಾಗಿ ಶ್ರಮಿಸಿದರು. ಕಾರ್ಮಿಕ ಸಂಘಗಳ ಮೇಲಿನ ಅವರ ಕಠಿಣ ನಿಲುವಿಗಾಗಿ “ಐರನ್ ಲೇಡಿ” ಎಂದು ಕರೆಯಲ್ಪಡುವ ಅವರು ಆಧುನಿಕತೆ ಮತ್ತು ಪ್ರಜಾಪ್ರಭುತ್ವದ ಜಾಗತಿಕ ಸಂಕೇತವಾಗಿದ್ದರು.

ವಿವಾದಗಳು: ಸ್ವಿಸ್ ಬ್ಯಾಂಕ್‌ಗಳ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಗಳು ಸೇರಿದಂತೆ ಅವರ ಪತಿಯ ಜೊತೆಗೆ 90ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಿದರು.

ಗಡಿಪಾರು: 1996ರಲ್ಲಿ ಸರ್ಕಾರವನ್ನು ವಜಾಗೊಳಿಸಿದ ನಂತರ, ಭುಟ್ಟೋ 1999ರಲ್ಲಿ ಭ್ರಷ್ಟಾಚಾರಕ್ಕಾಗಿ ಶಿಕ್ಷೆಯನ್ನು ಎದುರಿಸಿದರು. ಲಂಡನ್ ಮತ್ತು ದುಬೈನಲ್ಲಿ ದೇಶಭ್ರಷ್ಟರಾಗಿದ್ದರು. ಅವರು ಪಿಪಿಪಿಯನ್ನು ಮುನ್ನಡೆಸುವುದನ್ನು ಮುಂದುವರೆಸಿದರು, 2002ರಲ್ಲಿ ಅದರ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾದರು.

29pakistan 600
ಬೆನಝೀರ್‌ ಅಂತಿಮಯಾತ್ರೆ

ಅಕ್ಟೋಬರ್ 2007ರಲ್ಲಿ, ಅಧ್ಯಕ್ಷ ಪರ್ವೇಜ್ ಮುಷರಫ್ ಕ್ಷಮಾದಾನ ನೀಡಿದರು. ಕರಾಚಿಯಲ್ಲಿ 136 ಬೆಂಬಲಿಗರನ್ನು ಕೊಂದ ಆತ್ಮಹತ್ಯಾ ಬಾಂಬ್ ದಾಳಿಯಿಂದ ಬದುಕುಳಿದ ಭುಟ್ಟೋ 2008ರ ಚುನಾವಣೆಯ ಪ್ರಚಾರಕ್ಕೆ ಮರಳಿದರು. ಡಿಸೆಂಬರ್ 27, 2007ರಂದು, ಪಿಪಿಪಿ ರ್ಯಾಲಿಯ ಸಮಯದಲ್ಲಿ ಭುಟ್ಟೋ ಅವರನ್ನು ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆಗೈದರು. ಪಾಕಿಸ್ತಾನಿ ತಾಲಿಬಾನ್ ಮತ್ತು ಅಲ್-ಖೈದಾಗೆ ಸಂಬಂಧಿಸಿದ ಈ ದಾಳಿಯು ರಾಷ್ಟ್ರವ್ಯಾಪಿ ಅಶಾಂತಿಯನ್ನು ಹುಟ್ಟುಹಾಕಿತು.

ರಾಜಕೀಯ ಪರಿಣಾಮ: ಭುಟ್ಟೋ ಅವರ ಸಾವು ಪಾಕಿಸ್ತಾನವನ್ನು ಅಸ್ಥಿರಗೊಳಿಸಿತು, ಆದರೆ ಅವರ ಪಿಪಿಪಿ 2008 ರ ಚುನಾವಣೆಗಳನ್ನು ಗೆದ್ದುಕೊಂಡಿತು. ಅವರ ಪತಿ ಆಸಿಫ್ ಜರ್ದಾರಿ ಅಧ್ಯಕ್ಷರಾದರು (2008–2013),ಮತ್ತು ಅವರ ಮಗ ಬಿಲಾವಲ್ ಭುಟ್ಟೋ ಜರ್ದಾರಿ ಈಗ ಪಿಪಿಪಿಯನ್ನು ಮುನ್ನಡೆಸುತ್ತಿದ್ದಾರೆ.

ಜಾಗತಿಕ ಮನ್ನಣೆ: 1988ರ ಸ್ವಾತಂತ್ರ್ಯ ಪ್ರಶಸ್ತಿ, ಬ್ರೂನೋ ಕ್ರೈಸ್ಕಿ ಪ್ರಶಸ್ತಿ ಮತ್ತು ಯುಎನ್ ಮಾನವ ಹಕ್ಕುಗಳ ಪ್ರಶಸ್ತಿ (2008) ಮತ್ತು ಟಿಪ್ಪರರಿ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ (2008) ನಂತಹ ಮರಣೋತ್ತರ ಗೌರವಗಳನ್ನು ನೀಡಲಾಗಿದೆ. ಡಾಟರ್ ಆಫ್ ದಿ ಈಸ್ಟ್ (1988) ಮತ್ತು ರಿಕನ್ಸಿಲಿಯೇಶನ್: ಇಸ್ಲಾಂ, ಡೆಮಾಕ್ರಸಿ, ಮತ್ತು ದಿ ವೆಸ್ಟ್ (2008).

ಇದನ್ನೂ ಓದಿ ಕಾಲ್ತುಳಿತ ತಡೆಗೆ ಸರ್ಕಾರದಿಂದ ಹೊಸ ಕಾನೂನು: ಜೈಲು ಶಿಕ್ಷೆ ಜೊತೆ ದಂಡ, ಆಸ್ತಿ ಹರಾಜು

ಬೆನಜೀರ್ ಭುಟ್ಟೋ ಅವರ ಜೀವನವು ಶ್ರೀಮಂತ, ಆದರೆ ಅಷ್ಟೇ ಅತಂತ್ರ ಮತ್ತು ದುರಂತಗಳ ಸಮ್ಮಿಲನವಾಗಿತ್ತು. ಅವರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಇದ್ದ ಅಡೆತಡೆಗಳನ್ನು ಮುರಿದರು. ಮಿಲಿಟರಿ ಆಡಳಿತದ ವಿರುದ್ಧ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದರು. ಆದರೆ ನಿರಂತರ ವಿರೋಧ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...