ಭಾರತ ಮೂಲದ ಪಂಜಾಬ್ ಲೂಧಿಯಾನದ ಯುವಕನೊಬ್ಬನನ್ನು ಕೆನಡಾ ದ ಸರ್ರೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ ಯುವಕನನ್ನು 28 ವರ್ಷದ ಯುವರಾಜ್ ಗೋಯಲ್ ಎಂದು ಗುರುತಿಸಲಾಗಿದೆ.
ಯುವರಾಜ್ ಗೋಯಲ್ 2019ರಲ್ಲಿ ವಿದ್ಯಾರ್ಥಿ ವಿಸಾ ಪಡೆದು ಕೆನಡಾಕ್ಕೆ ಆಗಮಿಸಿದ್ದು, ಸದ್ಯ ಕೆನಡಾದ ಶಾಶ್ವತ ಸದಸ್ಯತ್ವ ಪಡಿದಿದ್ದರು.
ಯುವರಾಜ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈತನ ಹಿನ್ನೆಲೆಯಲ್ಲಿ ಯಾವುದೇ ಅಪರಾಧ ದಾಖಲೆಗಳಿರಲಿಲ್ಲ. ಈತನ ಕೊಲೆಗೆ ಏನು ಉದ್ದೇಶವೆಂಬುದು ತಿಳಿದು ಬಂದಿಲ್ಲ. ವಿಚಾರಣೆ ನಂತರ ತಿಳಿದು ಬರಲಿದೆ ಎಂದು ರಾಯಲ್ ಕೆನಡಾ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಮಂತ್ರಿಮಂಡಲದಲ್ಲಿ 71 ಸಚಿವರ ಪ್ರಮಾಣ ವಚನ: 24 ರಾಜ್ಯಗಳಿಗೆ, ಮಿತ್ರಪಕ್ಷಗಳ 11 ಮಂದಿಗೆ ಸ್ಥಾನ
ಜೂನ್ 7 ರಂದು ಬೆಳಿಗ್ಗೆ 8.46ಕ್ಕೆ ಸರ್ರೆಯ ಬ್ರಿಟಿಷ್ ಕೊಲಂಬಿಯಾದಲ್ಲಿ ಘಟನೆ ನಡೆದಿದ್ದು, ಶಂಕಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಗೋಯಲ್ ಅವರನ್ನು ಯಾವ ಉದ್ದೇಶಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಪ್ರಾಥಮಿಕ ವಿಚಾರಣೆಗಳಿಂದ ಸಂತ್ರಸ್ತನನ್ನು ಕೊಲೆ ಮಾಡುವ ಉದ್ದೇಶ ಸ್ಪಷ್ಟವಾಗಿದೆ. ಆದಾಗ್ಯೂ ನಮ್ಮ ಪೊಲೀಸರು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.





