ಪಶ್ಚಿಮ ಆಫ್ರಿಕಾದಲ್ಲಿ ಹಣದುಬ್ಬರ; ಸಾಮಾನ್ಯರ ಜೋಲೋಫ್‌ ಅನ್ನ ಈಗ ದುಬಾರಿ ಅಡುಗೆ

Date:

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಅನ್ನದ ಜೊತೆಗೆ ಮಾಂಸ ಸೇರಿಸಿ ಮಾಡುವ ಜೋಲೋಫ್ ಈಗ ದುಬಾರಿಯಾಗಿದೆ. ಕಾಡುತ್ತಿರುವ ಹಣದುಬ್ಬರ ಇಲ್ಲಿನ ಜನರ ನೆಮ್ಮದಿಯ ಊಟವನ್ನೂ ಕಸಿದಿದೆ.

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಇದರಿಂದ ಸಾಮಾನ್ಯರ ಬದುಕೂ ಮೂರಾಬಟ್ಟೆಯಾಗಿದೆ. ಸಾಮಾನ್ಯ ಆಹಾರಕ್ಕೂ ಖಂಡದ ದೇಶಗಳ ಜನತೆ ಚಿನ್ನದ ಬೆಲೆ ತೆರುವಂತಾಗಿದೆ. ಬಡ, ಮಧ್ಯಮ ವರ್ಗದ ಜನತೆಗೆ ಅಗ್ಗದ ಬೆಲೆಯಲ್ಲಿ ದೊರೆಯುತ್ತಿದ್ದ ಮಾಂಸ ಖಾದ್ಯಗಳು ಈಗ ದುಬಾರಿಯೆನಿಸಿದೆ. ಜನರು ಸಂಕಷ್ಟದಿಂದ ದಿನ ದೂಡುವಂತಾಗಿದೆ.

ಖಂಡದ ಘಾನಾ ದೇಶದ ಅಕ್ರಾ ನಗರದಲ್ಲಿ ವಾಸಿಸುತ್ತಿರುವ ನಶಿರತಾ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ. ಕುಟುಂಬಕ್ಕೆ ಈಕೆಯೇ ಜೀವನಾಧಾರ. ಅಕ್ರಾದಲ್ಲಿ ಕೆಲಸಗಳು ದೊರೆಯುವುದು ವಿರಳ. ಇಂತಹ ಸ್ಥಿತಿಯಲ್ಲಿ ನಶಿರತಾ ತನ್ನ ಉನ್ನತ ಪದವಿ ಅರ್ಹತೆಯಿಂದ ಕೆಲಸ ಪಡೆದು ಜೀವನ ನಿರ್ವಹಿಸುತ್ತಾರೆ. ಹಾಗಿದ್ದರೂ, ಕುಟುಂಬದ ಪ್ರಿಯವಾದ ಖಾದ್ಯ ಜೋಲೋಫ್‌ ಅನ್ನು ಬರಡಾಗಿ ಉಣ್ಣಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಶ್ಚಿಮ ಆಫ್ರಿಕಾದ ಪ್ರಧಾನ ಖಾದ್ಯ ಜೋಲೋಫ್‌ ಅನ್ನ. ಜೋಲೋಫ್‌ ಎಂದರೆ ಅನ್ನದ ಜೊತೆಗೆ ಮಾಂಸ ಅಥವಾ ಮೀನು ಹೊಂದಿದ ಬಿರಿಯಾನಿ ರೂಪದ ಖಾದ್ಯ. ಜೋಲೋಫ್‌ ಅನ್ನದ ಖಾದ್ಯ ನಶಿರತಾ ಕುಟುಂಬದ ಆಧಾರವಾಗಿತ್ತು. ಏಕೆಂದರೆ ಖಂಡದಲ್ಲಿ ಅಕ್ಕಿ ಮತ್ತು ಮಾಂಸ ಅಗ್ಗದ ದರದಲ್ಲಿ ದೊರೆಯುತ್ತಿತ್ತು. ಆದರೆ ಈಗ ನಶಿರತಾ ಅವರು ಜೋಲೋಫ್ ಅನ್ನವನ್ನು ಮಾತ್ರ ಬಡಿಸಿ ಕುಟುಂಬ ಪೊರೆಯುತ್ತಿದ್ದಾರೆ. ಅನ್ನದ ಜೊತೆಗೆ ಮಾಂಸ ಸೇರಿಸುವುದು ಈಗ ಖಂಡದಲ್ಲಿ ದುಬಾರಿಯಾಗಿದೆ. ಖಂಡದಲ್ಲಿ ಕಾಡುತ್ತಿರುವ ಹಣದುಬ್ಬರ ಇಲ್ಲಿನ ಜನರ ನೆಮ್ಮದಿಯ ಊಟವನ್ನೂ ಕಸಿದಿದೆ.

ಜೋಲೋಫ್‌ ಖಾದ್ಯ ತಯಾರಿಸುವಾಗ ಅನ್ನದ ಜೊತೆಗೆ ಟೊಮೆಟೊ, ಮಸಾಲೆ, ಮೀನು/ ಮಾಂಸದ ಅಡುಗೆ ಸಿದ್ಧವಾಗುತ್ತದೆ. ಒಂದು ಕಾಲದಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಇದು ಅಗ್ಗದ ದರದಲ್ಲಿ ಸಾಮಾನ್ಯರಿಗೆ ದೊರೆಯುತ್ತಿದ್ದ ಮೃಷ್ಟಾನ್ನವಾಗಿತ್ತು.

ಆದರೆ ಈಗ ಹಣದುಬ್ಬರ ಬಡ ಹಾಗೂ ಮಧ್ಯಮ ವರ್ಗದವರನ್ನು ಬಾಣಲೆಯಿಂದ ಬೆಂಕಿಗೆ ಹಾಕಿದೆ. ಮೇ ತಿಂಗಳಿಗೂ ಮುನ್ನ ಜೋಲೋಫ್‌ ಖಾದ್ಯವು 7.40 ಅಮೆರಿಕನ್‌ ಡಾಲರ್‌ ಆಗಿದೆ. ಇದು ದೇಶದಲ್ಲಿ ಈ ಹಿಂದೆ ದೊರೆಯುತ್ತಿದ್ದ ಬೆಲೆಗಿಂತ ಎರಡುಪಟ್ಟು ಹೆಚ್ಚಾಗಿದೆ.

ಪಶ್ಚಿಮ ಆಫ್ರಿಕಾ ಹಣದುಬ್ಬರದ ಪರಿಣಾಮ ಬೆಲೆ ಏರಿಕೆಯಿಂದ ಈಗ ನಶಿರತಾ ಮತ್ತು ಅವರಂತಹ ಇತರ ವೃತ್ತಿಪರ ಮಹಿಳೆಯರು ಕೇವಲ ಅಕ್ಕಿಯನ್ನು ಮಾತ್ರ ಬೇಯಿಸುತ್ತಾರೆ. ಈಗಿನ ದರದಲ್ಲಿ ಮಾಂಸ ಹಾಗೂ ಇತರ ವಸ್ತುಗಳ ಬೆಲೆ ಗಗನಮುಖಿಯಾಗಿದೆ.

“ನಾನು ಎಣಿಸಿದ್ದಕ್ಕಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ. ಜೋಲೋಫ್‌ ಖಾದ್ಯ ತಯಾರಿಗೆ ಇತರ ಪದಾರ್ಥಗಳನ್ನು ಕೊಳ್ಳಲು ಆಗುತ್ತಿಲ್ಲ. ಕೇವಲ ಅನ್ನವನ್ನು ಮಾತ್ರ ಉಣ್ಣುವಂತಾಗಿದೆ” ಎಂದು ತಿಳಿಸಿದ್ದಾರೆ ಎಂದು ‘ಅಲ್‌ ಜಜೀರಾ’ ಸುದ್ದಿವಾಹಿನಿ ವರದಿ ಮಾಡಿದೆ.

ಪಶ್ಚಿಮ ಆಫ್ರಿಕಾ ಖಂಡದ ನೈಜೀರಿಯಾ ದೇಶದ ವಾಣಿಜ್ಯ ರಾಜಧಾನಿ ಲಾಗೋಸ್‌ನಲ್ಲಿ ಕಳೆದ ವರ್ಷ 86.80 ಅಮೆರಿಕ ಡಾಲರ್‌ ಇದ್ದ ದಿನಸಿ ಪದಾರ್ಥಗಳ ಬೆಲೆ ಈಗ 173.61 ಅಮೆರಿಕ ಡಾಲರ್‌ ಆಗಿದೆ. ಇದು ಸಾಮಾನ್ಯ ಜನರ ನಿತ್ಯದ ಬದುಕನ್ನು ಬಿಗಡಾಯಿಸುವಂತೆ ಮಾಡಿದೆ.

2020ರಿಂದ ಪಶ್ಚಿಮ ಆಫ್ರಿಕಾದ ದೇಶಗಳ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಪರಿಣಾಮವಾಗಿ ಬಡ, ಮಧ್ಯಮ ವರ್ಗದ ಹೊಟ್ಟೆ ತುಂಬಿಸುತ್ತಿದ್ದ ಆಹಾರ ಪದಾರ್ಥಗಳು ಈಗ ಕೈಗೆಟುಕದಂತಾಗಿವೆ.

ಈ ಸುದ್ದಿ ಓದಿದ್ದೀರಾ? ಚಂಡೀಗಢಕ್ಕೆ ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ | ಚಾಲಕರೊಡನೆ ಮಾತುಕತೆ

ಮಾರ್ಚ್‌ನಲ್ಲಿ ಆಹಾರ ಹಣದುಬ್ಬರ ಶೇಕಡಾ 50.8 ರಷ್ಟಿತ್ತು. ನೈಜೀರಿಯಾ ಮತ್ತು ಸೆನೆಗಲ್‌ನಲ್ಲಿ ಕ್ರಮವಾಗಿ ದರಗಳು ಶೇ. 24.61 ಮತ್ತು ಶೇ 11.90 ಕಡಿಮೆಯಾಗಿದೆ ಎಂದು ಘಾನಾ ಅಂಕಿ ಅಂಶಗಳ ಸೇವಾ ಸಂಸ್ಥೆ ಹೇಳಿದೆ.

ಬಿಕ್ಕಟ್ಟಿನ ಪರಿಣಾಮ ಬುರ್ಕಿನಾ ಫಾಸೊ ದೇಶದಲ್ಲಿ ಈ ವರ್ಷ ಆಹಾರದ ಬೆಲೆಗಳು ಶೇ 30ರಷ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ರಕ್ಷಣಾ ಸಮಿತಿ ಹೇಳಿದೆ. ಹಣದುಬ್ಬರದ ಪರಿಣಾಮ ಮಾಲಿ ದೇಶದಲ್ಲಿ ಜೂನ್ ಮತ್ತು ಆಗಸ್ಟ್ ನಡುವೆ ತೀವ್ರ ಆಹಾರ ಅಭದ್ರತೆ ಶೇ 30ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...