ಶನಿವಾರ ಮುಂಜಾನೆ ಇರಾನ್ ಮೇಲೆ ಇಸ್ರೇಲ್ ‘ಮುನ್ನೆಚ್ಚರಿಕಾ ದಾಳಿ’ ನಡೆಸಿದೆ. ಇದರ ಬೆನ್ನಲ್ಲೇ ಇಸ್ರೇಲ್ನಾದ್ಯಂತ ‘ವಿಶೇಷ ಮತ್ತು ಶಾಶ್ವತ ತುರ್ತು ಪರಿಸ್ಥಿತಿ’ಯನ್ನು ಘೋಷಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಇಸ್ರೇಲ್ನ ಈ ದಾಳಿಯ ಬೆನ್ನಲ್ಲೇ, ಇರಾನ್ ಕಡೆಯಿಂದ ಡ್ರೋನ್ಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಭಾರಿ ಪ್ರತಿದಾಳಿ ನಡೆಯುವ ನಿರೀಕ್ಷೆಯಿದೆ. ಈ ಭೀತಿಯ ಹಿನ್ನೆಲೆಯಲ್ಲಿ ನಾಗರಿಕರ ರಕ್ಷಣೆಗಾಗಿ ಇಸ್ರೇಲ್ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ.
ಇದನ್ನು ಓದಿದ್ದೀರಾ? ರಣಜಿ ಟ್ರೋಫಿ ಫೈನಲ್: ಮೈದಾನದಲ್ಲಿ ಜಗಳವಾಡಿದ ಕರ್ನಾಟಕ – ಜಮ್ಮು ಕಾಶ್ಮೀರದ ಆಟಗಾರರು
ಇತ್ತ, ದಾಳಿಯ ಪರಿಣಾಮವಾಗಿ ಇರಾನ್ನ ರಾಜಧಾನಿ ಟೆಹ್ರಾನ್ನ ಮಧ್ಯಭಾಗದಲ್ಲಿ (ಡೌನ್ಟೌನ್) ಮೂರು ಪ್ರಬಲ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ರಾಜಧಾನಿಯ ‘ರಿಪಬ್ಲಿಕ್’ ಪ್ರದೇಶಕ್ಕೆ ಹಲವು ಕ್ಷಿಪಣಿಗಳು ಅಪ್ಪಳಿಸಿರುವ ಕುರಿತು ತಮಗೆ ವರದಿಗಳು ಲಭ್ಯವಾಗಿವೆ ಎಂದು ಇರಾನ್ನ ‘ಫಾರ್ಸ್ ನ್ಯೂಸ್ ಏಜೆನ್ಸಿ’ ಮಾಹಿತಿ ನೀಡಿದೆ.





