ʼಟ್ರಂಪ್‌ ಅವರನ್ನು ನೆತನ್ಯಾಹು ವಂಚಿಸಿದರುʼ: ಘಾಲಿಬಾಫ್‌

Date:

ಇರಾನ್‌- ಇಸ್ರೇಲ್‌-ಅಮೆರಿಕ ನಡುವಿn ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ನಡೆದ ಗಂಭೀರ ಬಿಕ್ಕಟ್ಟುಗಳಲ್ಲಿಒಂದಾಗಿ ಪರಿಣಮಿಸಿದೆ. ತೀವ್ರತರವಾಗಿ ಹರಡುತ್ತಿರುವ ಯುದ್ಧ ಜ್ವಾಲೆಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಜೊತೆಗೆ, ಜಗತ್ತಿನಾದಂತ್ಯ ಇಂಧನ ಅಭಾವ ಸೃಷ್ಟಿಯಾಗಿದೆ. ಫೆಬ್ರವರಿ 28 ರಂದು ಶುರುವಾದ ಈ ಯುದ್ಧ ಇಸ್ರೇಲ್‌ ಮತ್ತು ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಿಂದ ಪ್ರಾರಂಭವಾಯಿತು.ಇರಾನಿನ ಪರಮೋಚ್ಚ ನಾಯಕ ಅಲಿ ಖಮೇನಿಯನ್ನು ಕೊಂದು ಇರಾನಿನ ವ್ಯಾಪಕ ಸೇಡಿನ ಪ್ರತಿಕ್ರಿಯೆಗೆ ಕಾರಣವಾಯಿತು.

ಈ ಸಂಘರ್ಷವು ಜಾಗತಿಕ ಆರ್ಥಿಕತೆಗೆ ತೀವ್ರ ಹಾನಿ ಉಂಟು ಮಾಡುತ್ತದೆ ಎಂದು ಇರಾನ್‌ ಎಚ್ಚರಿಸಿದೆ. ಹಾರ್ಮುಜ್‌ ಜಲಸಂಧಿಯ ಮೇಲೆ ಸತತ ಹಿಡಿತ ಸಾಧಿಸಿಕೊಂಡಿರುವ ಇರಾನ್, ಇಸ್ರೇಲ್‌ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಪಡಿಸುವ ಬೆದರಿಕೆ ಒಡ್ಡಿದೆ. ಈ ಮಧ್ಯೆ ಇರಾನ್‌ ಸಂಸತ್ತಿನ ಸಭಾಪತಿ ಮೊಹಮ್ಮದ್‌ ಘಾಲಿಬಾಫ್‌ ಅವರ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ಇರಾನ್‌ ಮೇಲೆ ನಡೆಯುತ್ತಿರುವ ದಾಳೀಗಳ ತೀವ್ರತೆಯನ್ನು ಪ್ರಸ್ತಾಪಿಸಿದ ಅವರು, ‘ಇನ್ನು ಮುಂದೆ ಅಮೆರಿಕ-ಇಸ್ರೇಲ್‌ ನಡುವೆ ಇರಾನಿನ ಇಸ್ಲಾಮಿಕ್‌ ರಿಪಬ್ಲಿಕ್‌ ಯಾವುದೇ ಭೇದವನ್ನು ಕಾಣುವುದಿಲ್ಲ’ ಎಂದು ಹೇಳಿದ್ದಾರೆ.  

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ವಂಚಿಸಿದ್ದಾರೆ ಎಂದ ಅವರು, “ಇಸ್ರೇಲ್‌ ತನ್ನ ಲಾಭಕ್ಕಾಗಿ ಟ್ರಂಪ್‌ರನ್ನು ಬಳಸಿಕೊಂಡಿದೆ. ಟ್ರಂಪ್ ಅವರ ದಾರಿ ತಪ್ಪಪಿಸಿದ ಇಸ್ರೇಲ್‌ ಯುದ್ದಕ್ಕೆ ಪ್ರಚೋದನೆ ನೀಡಿದೆ. ಟ್ರಂಪ್‌ ಈಗ ನೆತನ್ಯಾಹು ನಿಯಂತ್ರಣದಲ್ಲಿ ಇದ್ದಾರೆ” ಎಂದು ಘಾಲಿಬಾಪ್‌ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಾನಿನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾಪ್ಸ್‌, ಇಸ್ರೇಲ್‌ ಮತ್ತು ಅಮೆರಿಕದ ನೆಲೆಗಳ ಮೇಲೆ ಸರಣಿ ಪ್ರತಿ ದಾಳಿಗಳನ್ನು ನಡೆಸಿದೆ. ಎದುರಾಳಿಗಳ ಆಲೋಚನಾ ಶೈಲಿ ಬದಲಾಗುವವರೆಗೂ ಈ ಯದ್ಧ ಮುಂದುವರೆಯುತ್ತದೆ ಎಂದು ಇರಾನ್‌ ಹೇಳಿದೆ.

ಇಸ್ರೇಲ್‌ ಪ್ರಧಾನಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್‌ ನಡೆಸಿದ ದಾಳಿಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಹತ್ಯೆಯಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದಾಗ್ಯೂ, ಈ ಕುರಿತ ಅಧಿಕೃತ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬೆಂಜಮಿನ್‌ ನೆತನ್ಯಾಹು ಮಾತನಾಡಿರುವ ವಿಡಿಯೋ ತುಣುಕುಗಳಿದ್ದು, ಅವುಗಳನ್ನು ಎಐ ಮೂಲಕ ಸೃಷ್ಟಿಸಲಾಗಿದೆ ಎಂಬ ಗುಮಾನಿಯೂ ಸುದ್ದಿಯಲ್ಲಿದೆ‌. ನೆತನ್ಯಾಹು ಆರು ಬೆರಳುಗಳನ್ನು ಹೊಂದಿದ್ದು, ಈ ವಿಡಿಯೊದಲ್ಲಿ ಐದು ಬೆರಳುಗಳಷ್ಟೆ ಇರುವುದು ಇಸ್ರೇಲ್‌ ಪ್ರಧಾನಿ ಹತ್ಯೆಯಾಗಿರಬಹುದು ಮತ್ತು ಅದನ್ನು ಮರೆಮಾಚಲು ಇಸ್ರೇಲ್‌ ಈ ಕಸರತ್ತು ಮಾಡುತ್ತಿದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...