ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ, ಜಾರಿಗೆಬೈಲು ಗಲ್ಫ್ ಸಮಿತಿಯ 2025-26ನೇ ಮಹಾಸಭೆಯು ಅ.20,202ರಂದು ಅಬುಧಾಬಿಯಲ್ಲಿರುವ ಖಾಲಿದಿಯ್ಯಾ ಇಮ್ರಾನ್ ಎನ್ಪಿ ನಾಳ ಅವರ ಮನೆಯಲ್ಲಿ ನಡೆಯಿತು.
ಮಹಾಸಭೆಗೆ ಗಲ್ಫ್ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಉಸ್ತಾದ್ ಹಸನ್ ದಾರಿಮಿ ಕಬಕ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಹಸನ್ ದಾರಿಮಿ ಉಸ್ತಾದರು ಒಂದು ಸಂಸ್ಥೆಯೊಂದಿಗೆ ತನ್ನನ್ನು ಯಾವ ರೀತಿಯಲ್ಲಿ ಸಮರ್ಪಿಸಿಕೊಳ್ಳಬೇಕು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಮಾಡುವ ಸಹಾಯವೂ ಅದು ಯಾವುದೇ ರೀತಿಯಲ್ಲೂ ಸೃಷ್ಟಿಕರ್ತನು ಅದರ ಪ್ರತಿಫಲವನ್ನು ನೀಡುತ್ತಾನೆ, ಸಮಸ್ತದ ಅಧೀನದಲ್ಲಿರುವ ಮದರಸದ ಅಭಿವೃದ್ಧಿಗೆ ತಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕು ಎಂದರು.
ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ ಜಾರಿಗೆಬೈಲು ಗಲ್ಫ್ ಕಮಿಟಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿ ಗಲ್ಫ್ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.

ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಪರಿಮ ಜಾರಿಗೆಬೈಲು ಗಲ್ಫ್ ಸಮಿತಿಯ 2024-25ನೇ ಸಾಲಿನ ಒಂದು ವರ್ಷದ ಎಲ್ಲಾ ದಾಖಲೆಗಳನ್ನು ಮಹಾ ಸಭೆಯಲ್ಲಿ ಅಧ್ಯಕ್ಷರಾಗಿದ್ದ ಇಮ್ರಾನ್ ಎನ್ ಪಿ ನಾಳರವರು ಸದಸ್ಯರೆಲ್ಲರ ಗಮನಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು.
ನೂತನ ಗಲ್ಫ್ ಸಮಿತಿಯ ಗೌರವಾಧ್ಯಕ್ಷರಾಗಿ ಮಜೀದ್ ಪರಿಮ ಅವರನ್ನು ಆಯ್ಕೆ ಮಾಡಿ ಘೋಷಿಸಲಾಯಿತು. ನೂತನ ಅಧ್ಯಕ್ಷರಾಗಿ ಇಮ್ರಾನ್ ಎನ್ಪಿ ನಾಳ, ಉಪಾಧ್ಯಕ್ಷರಾಗಿ ಮುಸ್ತಫಾ ಅಚಾರಿಬೊಟ್ಟು ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಹಂಝತ್ ಅಲಿ ಕೆಪಿ ನಾಳ, ಜೊತೆ ಕಾರ್ಯದರ್ಶಿಯಾಗಿ ನಿಯಾಝ್ ಜಾರಿಗೆಬೈಲು, ಕೋಶಾಧಿಕಾರಿಯಾಗಿ ಅಶ್ರಫ್ ಪರಿಮ ಮತ್ತು ಹಮೀದ್ ಕುಕ್ಕುಡಿ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಸಮಿತಿಯ ಸದಸ್ಯರನ್ನಾಗಿ ಝಾಯಿದ್ ಪರಿಮ, ಫಯಾಝ್, ಶಾಹಿದ್ ಅಲಿ ಕೆಪಿ, ಜುನೈದ್ ಎನ್ ಪಿ, ಸಮದ್, ನೌಫಲ್ ಪರಿಮ, ನವಾಝ್, ಬಾಸಿತ್ ಅಲಿ ಕೆಪಿ ಆಯ್ಕೆ ಮಾಡಲಾಯಿತು.
ಇದನ್ನು ಓದಿದ್ದೀರಾ? ಅಮೆರಿಕ | 88 ಲಕ್ಷ ರೂ. H-1B ವೀಸಾ ಶುಲ್ಕ: ಯಾರಿಗೆ ವಿನಾಯಿತಿ, ಅನ್ವಯ?
ಮಹಾಸಭೆಯ ಅಧ್ಯಕ್ಷತೆಯನ್ನು ಇಮ್ರಾನ್ ಎನ್ ಪಿಯವರು ವಹಿಸಿ ನೂತನ ಸಾರಥಿಗಳು ಉತ್ತಮ ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಇದರ ಅಭಿವೃದ್ಧಿ ಕೆಲಸಗಳಲ್ಲಿ ಗಲ್ಫ್ ಸಮಿಯು ಸಂಪೂರ್ಣ ಸಹಕಾರ ಕೊಡಬೇಕೆಂದು ತಿಳಿಸಿ ನೂತನ ಸಾರಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸಭೆಯಲ್ಲಿ ಹಂಝತ್ ಕೆಪಿಯವರು ಹಸನ್ ದಾರಿಮಿ ಉಸ್ತಾದ್ ಮತ್ತು ನೂತನ ಸಾರಥಿಗಳನ್ನು ಅಭಿನಂದಿಸಿ ಧನ್ಯವಾದ ತಿಳಿಸಿದರು.





