ಪರ್ವತದಲ್ಲಿ ನಾಪತ್ತೆ | ಟೂತ್‌ಪೇಸ್ಟ್‌ ತಿಂದು 10 ದಿನಗಳ ಕಾಲ ಬದುಕಿ ಬಂದ ಯಾತ್ರಿಕ

Date:

ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್‌ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ.

ಶಾಂಕ್ಸಿ ಪ್ರಾಂತ್ಯದ ಸನ್ ಲಿಯಾಂಗ್ ಎಂಬ 17 ವರ್ಷದ ಬಾಲಕ ಫೆಬ್ರವರಿ 8 ರಂದು ಕ್ವಿನ್ಲಿಂಗ್ ಪರ್ವತ ಶ್ರೇಣಿಯಲ್ಲಿ ಏಕಾಂಗಿ ಚಾರಣಕ್ಕಾಗಿ ತೆರಳಿದ್ದ. ಬಾಲಕನ ಚಾರಣ ಆರಂಭವಾದ ಎರಡು ದಿನಗಳ ಬಳಿಕ, ಆತನ ಬಳಿ ಇದ್ದ ಬ್ಯಾಟರಿಗಳು ಖಾಲಿಯಾದ ಕಾರಣ ಬಾಲಕ ತನ್ನ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಎಂದು ಹೇಳಲಾಗಿದೆ.

ಏಕಾಂಗಿಯಾಗಿದ್ದ ತೆರಳಿದ್ದ ಬಾಲಕ ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಬೇರೆ ಯಾವುದೇ ಮಾರ್ಗಗಳಿಲ್ಲದೆ ಕಂಗಾಲಾಗಿದ್ದ. ತೊರೆಯೊಂದರ ಅಂಚಿನಲ್ಲಿ ನಡೆಯಲು ಪ್ರಾರಂಭಿಸಿದ್ದ. ಈ ವೇಳೆ, ಹಲವು ಬಾರಿ ಬಿದ್ದು, ಆತನಿಗೆ ಬಲಗೈ ಕೂಡ ಮುರಿದುಹೋಗಿದೆ ಎಂದು ತಿಳಿದುಬಂದಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಂದಿರುಗಲು ನಿರ್ದಿಷ್ಟ ದಾರಿಯೂ ಸಿಗದೆ, ತಿನ್ನಲು ಆಹಾರವೂ ಇಲ್ಲದೆ ವಿಶಾಲ ಪರ್ವತದಲ್ಲಿ ಏಕಾಂಗಿಯಾಗಿದ್ದ ಲಿಯಾಂಗ್, ನದಿ ನೀರು, ಹಿಮ ಹಾಗೂ ಟೂತ್‌ಪೇಸ್ಟ್‌ ಸೇವಿಸಿ ಬದುಕುಳಿದ್ದಿದ್ದಾನೆ. ಚಳಿಯಿಂದ ರಕ್ಷಣೆ ಪಡೆಯಲು ದೊಡ್ಡ ಬಂಡೆಯ ಹಿಂಭಾಗದಲ್ಲಿ ಒಣ ಹುಲ್ಲು ಮತ್ತು ಎಲೆಗಳನ್ನು ಬಳಸಿ ತಾತ್ಕಾಲಿಕ ಹಾಸಿಗೆಯನ್ನು ನಿರ್ಮಿಸಿಕೊಂಡಿದ್ದ ಎಂದು ವರದಿಯಾಗಿದೆ.

ಸಂಪರ್ಕಕ್ಕೆ ದೊರೆಯದ ಮಗನನ್ನು ಹುಡುಕಲು ಆತನ ಕುಟುಂಬವು ರಕ್ಷಣಾ ತಂಡದ ಮೊರೆಹೋಗಿತ್ತು. ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ ರಕ್ಷಣಾ ತಂಡವು ಫೆಬ್ರವರಿ 17ರಂದು ಆತನನ್ನು ಪತ್ತೆ ಮಾಡಿದೆ. ಬಾಲಕನನ್ನು ರಕ್ಷಿಸಿದೆ.

“ಘಟನೆಯ ನಂತರ ನನಗೆ ಭಯವಾಗುತ್ತಿದೆ. ಈ ಪ್ರದೇಶ ಚಾರಣಕ್ಕೆ ಸೂಕ್ತವಲ್ಲ. ಜೋರಾಗಿ ಗಾಳಿ ಬೀಸುತ್ತದೆ. ನನ್ನೊಂದಿಗೆ ಎರಡು ಆಲ್ಪೆನ್‌ಸ್ಟಾಕ್‌ಗಳನ್ನು ಕೊಂಡೊಯ್ದಿದ್ದೆ. ಆದರೂ, ಚಾರಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹಿಮ ಎಷ್ಟು ದಟ್ಟವಾಗಿತ್ತೆಂದರೆ, ಕಣ್ಣುಗಳನ್ನು ತೆರೆಯುವುದೂ ಕಷ್ಟವಾಗಿತ್ತು” ಎಂದು ಲಿಯಾಂಗ್ ಹೇಳಿಕೊಂಡಿದ್ದಾನೆ.

ಕಳೆದ 20 ವರ್ಷಗಳಲ್ಲಿ ಈ ಅಪಾಯಕಾರಿ ಹಾದಿಯಲ್ಲಿ 50ಕ್ಕೂ ಹೆಚ್ಚು ಪಾದಯಾತ್ರಿಕರು ಕಾಣೆಯಾಗಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...