ಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ಸ್ಟರ್ ರೋಹಿತ್ ಗೋದಾರಾ ತಂಡವು ಈ ದಾಳಿಯ ಹೊಣೆಯನ್ನು ಹೊತ್ತಿದೆ. ಸದ್ಯ ಈ ದಾಳಿ ಬಗ್ಗೆ ಕೆನಡಾದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಗ್ಯಾಂಗ್ಸ್ಟರ್ ರೋಹಿತ್ ಗೋದಾರಾ ತಂಡದ ಭಾಗವಾಗಿರುವ ಮಹೇಂದರ್ ಸರನ್ ದಿಲಾನಾ ಪೋಸ್ಟ್ ಮಾಡಿದ್ದು, “ರಾಹುಲ್ ರಿನೌ ಮತ್ತು ವಿಕಿ ಫಲ್ವಾನ್ ಎಂಬವರು ಕೆನಡಾದಲ್ಲಿ ಕಹ್ಲೋನ್ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರಿಂದ ಗುಂಡಿನ ದಾಳಿ
ಇನ್ನು ಪ್ರತಿಸ್ಪರ್ಧಿ ಗ್ಯಾಂಗ್ಗಳಿಗೆ ಶಸ್ತ್ರಾಸ್ತ್ರ, ಹಣವನ್ನು ಪೂರೈಸಿದ್ದಕ್ಕೆ ಮತ್ತು ಅವರ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಕಹ್ಲೋನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
“ನಾವು ಕೆನಡಾದಲ್ಲಿ ತೇಜಿ ಕಹ್ಲೋನ್ ಮೇಲೆ ಗುಂಡು ಹಾರಿಸಿದೆವು. ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಆತ ಅರ್ಥಮಾಡಿಕೊಂಡರೆ ಸರಿ. ಇಲ್ಲದಿದ್ದರೆ, ಮುಂದಿನ ಬಾರಿ ನಾವು ಆತನ ಕತೆ ಮುಗಿಸುತ್ತೇವೆ” ಎಂದೂ ಪೋಸ್ಟ್ನಲ್ಲಿ ಬೆದರಿಕೆ ಹಾಕಲಾಗಿದೆ.
ಹಾಗೆಯೇ, ಉದ್ಯಮಿಗಳು, ಬಿಲ್ಡರ್ಗಳು ಮತ್ತು ಹಣಕಾಸು ಮಧ್ಯವರ್ತಿಗಳು ಸೇರಿದಂತೆ ಇತರರಿಗೆ ಪ್ರತಿಸ್ಪರ್ಧಿ ಗ್ಯಾಂಗ್ಗಳಿಗೆ ಸಹಾಯ ಮಾಡದಂತೆ ಈ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಸಹಾಯ ಮಾಡಿದರೆ ಇದೇ ಗತಿ ಬರುತ್ತದೆ ಎಂದು ಗ್ಯಾಂಗ್ ಬೆದರಿಕೆ ಹಾಕಿದೆ.
ಇದನ್ನು ಓದಿದ್ದೀರಾ? ಸರ್ಬಿಯಾ | ಮತ್ತೊಂದು ಗುಂಡಿನ ದಾಳಿಗೆ 8 ಮಂದಿ ಸಾವು
“ಯಾರಾದರೂ ತಪ್ಪಿ ನಮ್ಮ ಶತ್ರುಗಳನ್ನು ಬೆಂಬಲಿಸಿದರೂ ಅಥವಾ ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದರೂ ನಾವು ಅವರ ಕುಟುಂಬವನ್ನು ಬಿಡಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಾವು ಅವರನ್ನು ನಾಶಪಡಿಸುತ್ತೇವೆ. ಈ ಘಟನೆಯು ಎಲ್ಲಾ ಸಹೋದರರು, ಉದ್ಯಮಿಗಳು, ಬಿಲ್ಡರ್ಗಳು, ಹವಾಲಾ ನಿರ್ವಾಹಕರು ಮತ್ತು ಬೇರೆಯವರಿಗೆ ನೀಡುವ ಎಚ್ಚರಿಕೆ. ಯಾರಾದರೂ ಸಹಾಯ ಮಾಡಿದರೆ, ಅವರೂ ನಮ್ಮ ಶತ್ರುಗಳಾಗುತ್ತಾರೆ. ಇದು ಕೇವಲ ಆರಂಭ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ರಾವತ್ರಮ್ ಸ್ವಾಮಿ ಎಂದೂ ಕರೆಯಲ್ಪಡುವ ರೋಹಿತ್ ಗೋದಾರ, ರಾಜಸ್ಥಾನದ ಬಿಕಾನೇರ್ನಲ್ಲಿರುವ ಲುಂಕರಾನ್ಸರ್ನ ಕುಖ್ಯಾತ ದರೋಡೆಕೋರ. ಇತ್ತೀಚೆಗೆ, ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕ ಹರಿ ಬಾಕ್ಸರ್ ಮೇಲೆ ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದೆ. ಆ ದಾಳಿಯ ಹೊಣೆಯನ್ನೂ ಗ್ಯಾಂಗ್ಸ್ಟರ್ ರೋಹಿತ್ ಗೋದಾರ ಗ್ಯಾಂಗ್ ಹೊತ್ತುಕೊಂಡಿದೆ.





