ಸೌದಿ ಅರೇಬಿಯಾ | 50 ವರ್ಷಗಳ ಬಳಿಕ ಕಫಲಾ ವ್ಯವಸ್ಥೆ ರದ್ದು: ವಲಸಿಗರ ಹೊಸ ಹಕ್ಕುಗಳು ಜಾರಿ

Date:

ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ಕಫಲಾ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ಕೊನೆಗೊಳಿಸಿದೆ. ಹಾಗೆಯೇ ವಲಸೆ ಕಾರ್ಮಿಕರಿಗೆ ಹೊಸದಾಗಿ ಹಕ್ಕುಗಳನ್ನು ಜಾರಿ ಮಾಡಿದೆ.

2025ರ ಜೂನ್‌ನಲ್ಲಿಯೇ ಈ ಸುಧಾರಣೆಯನ್ನು ತರಲಾಗಿದ್ದು, ಸುಮಾರು 13 ಮಿಲಿಯನ್ ವಿದೇಶಿ ಕಾರ್ಮಿಕರಿಗೆ ಹೊಸದಾಗಿ ನಿಯಮ, ಹಕ್ಕುಗಳನ್ನು ಜಾರಿ ಮಾಡಲಾಗಿದೆ. ಈವರೆಗೆ ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ವಲಸೆ ಕಾರ್ಮಿಕರಿಗೆ ಕಾರ್ಮಿಕ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಇದನ್ನು ಓದಿದ್ದೀರಾ? ʼವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏನಿದು ಕಫಲಾ ವ್ಯವಸ್ಥೆ, ಸುಧಾರಣೆಯೇನು?

ಅರೇಬಿಕ್ ಭಾಷೆಯಲ್ಲಿ ‘ಪ್ರಾಯೋಜಕತ್ವ’ ಎಂಬ ಅರ್ಥವನ್ನು ಹೊಂದಿರುವ ಕಫಲಾ ವ್ಯವಸ್ಥೆಯನ್ನು 1950ರ ದಶಕದಲ್ಲಿ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲಿ ಪರಿಚಯಿಸಲಾಗಿದೆ. ಈ ಚೌಕಟ್ಟಿನಡಿಯಲ್ಲಿ, ಕಾರ್ಮಿಕರ ಕಾನೂನು ಸ್ಥಾನಮಾನವನ್ನು ಕಫೀಲ್ ಎಂದು ಕರೆಯಲ್ಪಡುವ ಅವರ ಉದ್ಯೋಗದಾತರು ನಿರ್ವಹಿಸುತ್ತಾರೆ. ಈ ಕಫೀಲ್‌ ಎಂಬವರು ಉದ್ಯೋಗಗಳನ್ನು ಬದಲಾಯಿಸುವ, ದೇಶವನ್ನು ತೊರೆಯುವ ಅಥವಾ ಕಾನೂನು ಸಹಾಯವನ್ನು ಪಡೆಯುವ ವಿಚಾರದಲ್ಲಿ ನಿಯಂತ್ರಣವನ್ನು ಹೊಂದಿರುತ್ತದೆ. ಮಾನವ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯನ್ನು ಶೋಷಣೆ, ನಿಂದನೆ ಮತ್ತು ಬಲವಂತದ ಕಾರ್ಮಿಕ ಪದ್ಧತಿ ಎಂದು ಟೀಕಿಸಿವೆ.

ವೀಸಾ ಮತ್ತು ನಿವಾಸದಂತಹ ಆಡಳಿತಾತ್ಮಕ ಜವಾಬ್ದಾರಿಗಳನ್ನೂ ಸ್ಥಳೀಯ ಉದ್ಯೋಗದಾತರಿಗೆ ನೀಡುವ ಈ ವ್ಯವಸ್ಥೆಯು ಕಾಲಾನಂತರದಲ್ಲಿ ಕಾರ್ಮಿಕರ ಸ್ವಾಯತ್ತತೆ ಮತ್ತು ರಕ್ಷಣೆಗಳನ್ನು ಸೀಮಿತಗೊಳಿಸಿತು. ಗೃಹ ಕಾರ್ಮಿಕರು ಮತ್ತು ನಿರ್ಮಾಣ, ಆತಿಥ್ಯ ಮತ್ತು ಕೃಷಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಲಕ್ಷಾಂತರ ವಲಸೆ ಕಾರ್ಮಿಕರು ಈ ನಿರ್ಬಂಧಗಳಿಂದ ಅತಿ ಕೆಟ್ಟ ಪ್ರಭಾವಕ್ಕೆ ಒಳಗಾದರು.

ಸೌದಿ ಅರೇಬಿಯಾದ ಹೊಸ ಕಾರ್ಮಿಕ ಚೌಕಟ್ಟು ಕಫಲಾದ ಬದಲಾಗಿ ಗುತ್ತಿಗೆ ಉದ್ಯೋಗ ಮಾದರಿಯನ್ನು(contractual employment model) ಜಾರಿಗೆ ತಂದಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ಪ್ರಕಾರ, ಕಾರ್ಮಿಕರು ಈಗ ತಮ್ಮ ಪ್ರಸ್ತುತ ಪ್ರಾಯೋಜಕರ ಅನುಮೋದನೆಯ ಅಗತ್ಯವಿಲ್ಲದೆಯೇ ಉದ್ಯೋಗ ಬದಲಾಯಿಸಬಹುದು. ನಿರ್ಗಮನ ವೀಸಾ ಇಲ್ಲದೆ ದೇಶವನ್ನು ತೊರೆಯಬಹುದು. ಈ ಹಿಂದೆ ಇಲ್ಲದ ಕಾನೂನು ರಕ್ಷಣೆಗಳನ್ನು ಪಡೆಯಬಹುದು.

ಇದನ್ನು ಓದಿದ್ದೀರಾ? ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು

ಸೌದಿ ಅರೇಬಿಯಾದ ವಿಷನ್ 2030 ಭಾಗವಾಗಿ ಈ ಸುಧಾರಣೆ ಮಾಡಲಾಗಿದೆ. ಇದು ಆರ್ಥಿಕತೆಯನ್ನು ಹೆಚ್ಚಿಸುವ, ವಿದೇಶಿ ಕಾರ್ಮಿಕರ ಕಲ್ಯಾಣದ ಗುರಿಯನ್ನು ಹೊಂದಿದೆ. ಅಧಿಕಾರಿಗಳು ಈ ಬದಲಾವಣೆಯನ್ನು ಪ್ರಮುಖ ಪ್ರಗತಿ ಎಂದು ಶ್ಲಾಘಿಸಿದ್ದಾರೆ. ಆದರೆ ಮಾನವ ಹಕ್ಕುಗಳ ಗುಂಪುಗಳು ನಿಜವಾದ ಸುಧಾರಣೆ ತರಲು ಹೊಸ ನಿಯಮವನ್ನು ಎಚ್ಚರಿಕೆಯಿಂದ ಅನುಷ್ಠಾನಗೊಳಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿವೆ.

ಸೌದಿ ಅರೇಬಿಯಾವು ಸುಮಾರು 13.4 ಮಿಲಿಯನ್ ವಲಸೆ ಕಾರ್ಮಿಕರನ್ನು ಹೊಂದಿದೆ. ಅಂದರೆ ಒಟ್ಟು ಜನಸಂಖ್ಯೆ ಶೇಕಡ 42ರಷ್ಟು. ಪ್ರಮುಖವಾಗಿ ಬಾಂಗ್ಲಾದೇಶ ಮತ್ತು ಭಾರತದಿಂದ ಸೌದಿ ಅರೇಬಿಯಾಕ್ಕೆ ಹೋಗಿ ದುಡಿಯುತ್ತಾರೆ. 2023ರಲ್ಲಿ 498,000 ಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಮತ್ತು 426,951 ಇತರ ನೆರೆಯ ದೇಶದ ಪ್ರಜೆಗಳು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಮನೆಕೆಲಸಗಾರರೇ 4 ಮಿಲಿಯನ್‌ರಷ್ಟಿದ್ದು, ಎಲ್ಲರೂ ವಿದೇಶಿ ಪ್ರಜೆಗಳಾಗಿದ್ದಾರೆ. ವಲಸೆ ಕಾರ್ಮಿಕರು ನಿರ್ಮಾಣ, ಮನೆಕೆಲಸ, ಆತಿಥ್ಯ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರಿದ್ದಾರೆ. ಕಫಲಾ ರದ್ದತಿಯು ಶೋಷಣೆಯನ್ನು ಕಡಿಮೆ ಮಾಡುತ್ತದೆ. ಕಾರ್ಮಿಕರಿಗೆ ಹೆಚ್ಚಿನ ಘನತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...