ಯುದ್ಧದ ಜಾಗತೀಕರಣ: ಅಂತಾರಾಷ್ಟ್ರೀಯ ಸಂಘರ್ಷಗಳಲ್ಲಿ ಶಸ್ತ್ರಾಸ್ತ್ರ ವ್ಯಾಪಾರದ ಪಾತ್ರ

Date:

ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ವಾದದ ಅಡಿಯಲ್ಲಿ, ವಸಾಹತುಶಾಹಿ ಧೋರಣೆಯ ಶಕ್ತಿಗಳು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಮೂಲಕ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸಾಧಿಸುತ್ತಿವೆ.

ಆಧುನಿಕೋತ್ತರದ ಎಐ ಕಾಲಘಟ್ಟದಲ್ಲಿ ಯುದ್ಧ ಎಂಬುದು ಕೇವಲ ಎರಡು ಭೂಪ್ರದೇಶಗಳ ನಡುವಿನ ಭೌತಿಕ ಸಂಘರ್ಷವಾಗಿ ಉಳಿದಿಲ್ಲ; ಬದಲಿಗೆ ಅದು ಜಾಗತೀಕರಣದ ಪ್ರಕ್ರಿಯೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಒಂದು ಸಂಕೀರ್ಣ ತಾತ್ವಿಕ ರೂಪಕವಾಗಿ ಮಾರ್ಪಟ್ಟಿದೆ.

ಜಾಗತೀಕರಣವು ಮಾರುಕಟ್ಟೆ ಮತ್ತು ಸಂಸ್ಕೃತಿಗಳನ್ನು ಪರಸ್ಪರ ಬೆಸೆಯುವ ಕಾರ್ಯವನ್ನು ಮಾಡುತ್ತಿದ್ದರೂ, ಅದರ ಬೆನ್ನಲ್ಲೇ ಯುದ್ಧದ ಭೀತಿಯನ್ನು ಜಾಗತಿಕವಾಗಿ ಪಸರಿಸುತ್ತಿದೆ. ಇಲ್ಲಿ ವಿನಾಶ ಮತ್ತು ಅಭಿವೃದ್ಧಿ ಎಂಬ ಎರಡು ಭಿನ್ನ ಪ್ರಕ್ರಿಯೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡುತ್ತಿವೆ.

ಜಾಗತೀಕರಣವು ಜಗತ್ತನ್ನು ಒಂದುಗೂಡಿಸುವ ಶಕ್ತಿಯಾಗಿ ಕಂಡುಬಂದರೂ, ಯುದ್ಧದ ಮೂಲಕ ಅದು ರಾಷ್ಟ್ರಗಳನ್ನು ವಿಘಟಿಸುವ ಮತ್ತು ಮರುಸಂಘಟಿಸುವ ಅಧಿಕಾರವನ್ನು ಚಲಾಯಿಸುತ್ತಿದೆ. ಹೀಗಾಗಿ, ಯುದ್ಧವು ಜಾಗತೀಕರಣದ ಬಾಹ್ಯ ಪರಿಣಾಮವಲ್ಲ, ಬದಲಿಗೆ ಅದರ ಆಂತರಿಕ ಕಾರ್ಯವಿಧಾನ ಮತ್ತು ತತ್ವವಾಗಿ ರೂಪಾಂತರಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಸ್ತುತ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಸಾರ್ವಭೌಮತ್ವದ ವ್ಯಾಖ್ಯಾನವೇ ಬದಲಾಗುತ್ತಿದೆ. ಹಿಂದೆ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಂಸ್ಕೃತಿಕ ಅಥವಾ ರಾಜತಾಂತ್ರಿಕ ಮೌಲ್ಯಗಳು ನಿರ್ಧರಿಸುತ್ತಿದ್ದವು. ಆದರೆ ಇಂದು ಮಿಲಿಟರಿ ತಂತ್ರಜ್ಞಾನದ ವಿನಿಮಯ ಮತ್ತು ಶಸ್ತ್ರಾಸ್ತ್ರಗಳ ವ್ಯಾಪಾರವೇ ಜಾಗತಿಕ ಸ್ಥಾನಮಾನದ ಮಾನದಂಡಗಳಾಗಿವೆ.

ರಷ್ಯಾ-ಉಕ್ರೇನ್, ಅಮೆರಿಕ-ವೆನಿಜುವೇಲಾ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳ ಹಿನ್ನೆಲೆಯಲ್ಲಿ ಗಮನಿಸಿದಾಗ, ಯುದ್ಧವು ರಾಷ್ಟ್ರಗಳ ಹಸ್ತಕ್ಷೇಪಕ್ಕೆ ಹೊಸ ನೈತಿಕತೆಯನ್ನು ಒದಗಿಸುತ್ತಿರುವುದು ಕಂಡುಬರುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಇಂತಹ ಮಿಲಿಟರಿ ಸಂಬಂಧಗಳಿಗಾಗಿ ಹಾತೊರೆಯುವುದು ಜಾಗತಿಕ ಅಧಿಕಾರ ರಾಜಕಾರಣದಲ್ಲಿ ಅನಿವಾರ್ಯತೆಯಾಗಿ ಬಿಂಬಿತವಾಗುತ್ತಿದೆ. ಇದು ರಾಷ್ಟ್ರೀಯ ಸ್ವಾಯತ್ತತೆಯನ್ನು ದುರ್ಬಲಗೊಳಿಸಿ, ಜಾಗತಿಕ ರಕ್ಷಣಾ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತಿದೆ.

ಯುದ್ಧದ ಇತಿಹಾಸವು ಸ್ಥೂಲವಾಗಿ ರಾಷ್ಟ್ರಗಳ ನಡುವಿನ ಗಡಿ ಸಂಘರ್ಷಗಳಿಗೆ ಸೀಮಿತವಾಗಿತ್ತು. ಆದರೆ ಜಾಗತೀಕರಣದ ತೀವ್ರತೆಯು ಯುದ್ಧವನ್ನು ಆಂತರಿಕ ಅಥವಾ ದೇಶೀಯ ನೆಲೆಗಳಿಗೆ ವರ್ಗಾಯಿಸಿದೆ. ಸ್ಥಳೀಯ ಜನಾಂಗೀಯ ಬಿಕ್ಕಟ್ಟುಗಳು ಅಥವಾ ಆಡಳಿತಾತ್ಮಕ ದಬ್ಬಾಳಿಕೆಗಳನ್ನು ತಡೆಯುವ, ಭಯೋತ್ಪಾದನೆ ನಿಗ್ರಹಗಳ ನೆಪದಲ್ಲಿ ನಡೆಯುವ ಮಿಲಿಟರಿ ಹಸ್ತಕ್ಷೇಪವು ಇಂದು ‘ಜಾಗತಿಕ ನೈತಿಕ ಕರ್ತವ್ಯ’ ಎಂಬ ಮುಖವಾಡ ಧರಿಸಿದೆ.

ಇದನ್ನೂ ಓದಿದ್ದೀರಾ? ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ: ಶೋಕದಲ್ಲಿ ಮುಳುಗಿದ ಅಲಿಪುರ, ಅಮೆರಿಕಕ್ಕೆ ಧಿಕ್ಕಾರ ಘೋಷಣೆ

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಡೆಯುವ ಈ ಹತ್ತಿಕ್ಕುವಿಕೆಗಳು ವಾಸ್ತವವಾಗಿ ಶಸ್ತ್ರಾಸ್ತ್ರ ಪೂರೈಸುವ ವಸಾಹತುಶಾಹಿ ಶಕ್ತಿಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುತ್ತಿವೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ವಾದದ ಅಡಿಯಲ್ಲಿ, ವಸಾಹತುಶಾಹಿ ಧೋರಣೆಯ ಶಕ್ತಿಗಳು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಮೂಲಕ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸಾಧಿಸುತ್ತಿವೆ. ಈ ಮೂಲಕ ಯುದ್ಧವು ಜಾಗತೀಕರಣದ ಅಡಿಯಲ್ಲಿ ಹೊಸ ರೂಪದ ಬಂಡವಾಳಶಾಹಿ ಹಿತಾಸಕ್ತಿಯನ್ನು ಸಂರಕ್ಷಿಸುವ ಸಾಧನವಾಗಿ ಪರಿಣಮಿಸಿದೆ.

ಡಾ ರವಿ ಎಂ ಸಿದ್ಲಿಪುರ

ಬರಹ : ಡಾ. ರವಿ ಎಂ ಸಿದ್ಲಿಪುರ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....