ಇರಾನ್ ವಿರುದ್ಧದ ಯುದ್ಧದ ವಾದ ಮತ್ತು ವಾಸ್ತವ: ಒಂದು ವಿಶ್ಲೇಷಣೆ

Date:

ಅಮೆರಿಕದ ಗುಪ್ತಚರ ಸಂಸ್ಥೆಯಾದ CIA ನಲ್ಲಿ ವಿಶ್ಲೇಷಕ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಭಯೋತ್ಪಾದನಾ ನಿರೋಧಕ ಯೋಜನಾಧಿಕಾರಿ ಮತ್ತು ಸಲಹೆಗಾರರಾದ ಲ್ಯಾರಿ ಸಿ. ಜಾನ್ಸನ್ ಇರಾನ್ ವಿರುದ್ಧದ ವಾಸ್ತವದ ವಿಶ್ಲೇಷಣೆ ಮಾಡಿದ್ದು, ಅದರ ಕನ್ನಡ ಅನುವಾದವಿದು.

ಇಂದು ನಡೆದ ಜೂಮ್ (Zoom) ಸಭೆಯೊಂದರಲ್ಲಿ, ಅಮೆರಿಕದ ನಿವೃತ್ತ ಜನರಲ್ ಒಬ್ಬರು ಇರಾನ್ ವಿರುದ್ಧ ಯುದ್ಧ ಘೋಷಿಸುವ ಪರವಾಗಿ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡೆ. ಅವರು ಟ್ರಂಪ್ ಹಾಗೆ ಮಾಡಬೇಕೆಂದು ಒತ್ತಾಯಿಸುತ್ತಿರಲಿಲ್ಲ, ಬದಲಾಗಿ ಅವರು ಮತ್ತು ಹೆಚ್ಚಿನ ಅಮೆರಿಕನ್ನರು ಇರಾನ್ ಅನ್ನು ಹೇಗೆ ನಾಶಪಡಿಸಲೇಬೇಕಾದ ಒಂದು ಅಪಾಯಕಾರಿ ರಾಷ್ಟ್ರವೆಂದು ಪರಿಗಣಿಸುತ್ತಾರೆ ಎಂಬುದನ್ನು ಆಕರ್ಷಕವಾಗಿ ವಿವರಿಸಿದರು. ಅವರ ಮುಖ್ಯ ಆರೋಪವೇನೆಂದರೆ, ಇರಾನ್ ಸಾವಿರಾರು ಅಮೆರಿಕನ್ನರನ್ನು, ವಿಶೇಷವಾಗಿ ಮಿಲಿಟರಿ ಸಿಬ್ಬಂದಿಯನ್ನು ಕೊಂದಿದೆ ಮತ್ತು ಅದೊಂದು ಸುಧಾರಿಸಲಾಗದ ಭಯೋತ್ಪಾದಕ ರಾಷ್ಟ್ರ ಎಂಬುದು. ಆದರೆ, ಆ ಸಜ್ಜನರು ಎಷ್ಟು ತಪ್ಪಾಗಿದ್ದಾರೆ ಎಂಬುದನ್ನು ನಾನು ಈಗ ನಿಮಗೆ ತೋರಿಸಿಕೊಡಲಿದ್ದೇನೆ.

ಅವರ ಮಾತು ಮುಗಿದ ತಕ್ಷಣ, ನಾನು ಮಾತನಾಡಲು ಅವಕಾಶ ಪಡೆದು, ಕಳೆದ 45 ವರ್ಷಗಳಲ್ಲಿ ಅಮೆರಿಕದ ಸಿಬ್ಬಂದಿಯ ಮೇಲೆ ಇರಾನ್ ನಡೆಸಿದ ದಾಳಿಗಳು ಹೆಚ್ಚಾಗಿ ಅಮೆರಿಕದ ಕ್ರಮಗಳಿಗೆ ನೀಡಿದ ಪ್ರತಿಕ್ರಿಯೆಗಳಾಗಿದ್ದವು ಎಂದು ಹೇಳಿದೆ. ಅವರ ವಾದದೊಂದಿಗೆ ನನಗಿರುವ ಭಿನ್ನಾಭಿಪ್ರಾಯದ ಪೂರ್ಣ ವಿವರಣೆ ಇಲ್ಲಿದೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಇರಾನ್‌ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ!

ಐತಿಹಾಸಿಕ ಹಿನ್ನೆಲೆ: 1953ರ ದಂಗೆ ಮತ್ತು 1979ರ ಕ್ರಾಂತಿ

ಅಮೆರಿಕದ ಮೇಲಿನ ಇರಾನ್‌ನ ಕೋಪವು 1953ರಲ್ಲಿ ಪ್ರಾರಂಭವಾಯಿತು. ಅಂದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಅಧ್ಯಕ್ಷ ಮೊಹಮ್ಮದ್ ಮೊಸದ್ದೆಕ್ ಅವರನ್ನು CIA ಮತ್ತು MI6 ಬೆಂಬಲಿತ ಸಂಚಿನ ಮೂಲಕ ಅಧಿಕಾರದಿಂದ ಕೆಳಗಿಳಿಸಲಾಯಿತು. ಇರಾನ್‌ನಲ್ಲಿ ಇದನ್ನು “28 ಮೊರ್ದಾದ್” ದಂಗೆ ಎಂದು ಕರೆಯಲಾಗುತ್ತದೆ.

ನಂತರ 1979ರಲ್ಲಿ ನಡೆದ ಇರಾನ್ ಕ್ರಾಂತಿಯು ಅಮೆರಿಕ ಬೆಂಬಲಿತ ಷಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ, ಅಯತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿತು. ಈ ಕ್ರಾಂತಿಗೆ ಪ್ರಮುಖ ಕಾರಣಗಳು:

ದಮನಕಾರಿ ಆಡಳಿತ: ಷಾ ಅವರ ಗುಪ್ತಚರ ದಳ (SAVAK) ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಹಿಂಸೆ ಬಳಸುತ್ತಿತ್ತು.

ವೇಗದ ಪಾಶ್ಚಿಮಾತ್ಯೀಕರಣ: ಇಸ್ಲಾಮಿಕ್ ಮೌಲ್ಯಗಳನ್ನು ನಾಶಪಡಿಸಲಾಗುತ್ತಿದೆ ಎಂದು ಸಂಪ್ರದಾಯವಾದಿಗಳು ಭಾವಿಸಿದರು.

ಆರ್ಥಿಕ ಅಸಮಾನತೆ: ತೈಲ ಸಂಪತ್ತು ಹೆಚ್ಚಾದರೂ ಸಾಮಾನ್ಯ ಜನರಿಗೆ ಅದರ ಲಾಭ ಸಿಗುತ್ತಿರಲಿಲ್ಲ.

ವಿದೇಶಿ ಹಸ್ತಕ್ಷೇಪ: 1953ರ CIA ದಂಗೆಯ ನೆನಪು ಜನರ ಮನಸ್ಸಿನಲ್ಲಿ ಹಸಿಯಾಗಿತ್ತು.

ಧಾರ್ಮಿಕ ಪುನರುತ್ಥಾನ — ಶಿಯಾ ಇಸ್ಲಾಂ ಧರ್ಮವು ಅಂದು ಕಂಡುಬಂದ ಜಾತ್ಯತೀತತೆ ಮತ್ತು ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಜನರನ್ನು ಒಗ್ಗೂಡಿಸುವ ಒಂದು ಶಕ್ತಿಯಾಗಿ ಕೆಲಸ ಮಾಡಿತು.

ಈ ಬದಲಾವಣೆಯು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಹಾಕಿತು. 1979ರ ಇರಾನ್ ಒತ್ತೆಯಾಳು ಬಿಕ್ಕಟ್ಟಿನ ಸಮಯದಲ್ಲಿ 52 ಅಮೆರಿಕನ್ನರನ್ನು 444 ದಿನಗಳ ಕಾಲ ಬಂಧಿಸಿಡಲಾಗಿತ್ತು. ಇದು ಷಾ ಅವರಿಗೆ ಅಮೆರಿಕ ನೀಡಿದ ಬೆಂಬಲಕ್ಕೆ ಇರಾನ್ ನೀಡಿದ ನೇರ ಪ್ರತಿಕ್ರಿಯೆಯಾಗಿತ್ತು.

ಇರಾನ್-ಇರಾಕ್ ಯುದ್ಧ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳು

ಇರಾನ್ ಕ್ರಾಂತಿಯ ನಂತರ ಆ ದೇಶ ದುರ್ಬಲವಾಗಿದೆ ಎಂದು ಭಾವಿಸಿದ ಇರಾಕ್ ನಾಯಕ ಸದ್ದಾಂ ಹುಸೇನ್, ಅಮೆರಿಕದ ಪ್ರೋತ್ಸಾಹದೊಂದಿಗೆ ಇರಾನ್ ಮೇಲೆ ಆಕ್ರಮಣ ಮಾಡಿದರು. ಅಮೆರಿಕ ನೇರವಾಗಿ ಯುದ್ಧ ಮಾಡದಿದ್ದರೂ, ಇರಾನ್ ಜಯಗಳಿಸಬಾರದೆಂಬ ಕಾರಣಕ್ಕೆ ಇರಾಕ್‌ಗೆ ಮಿಲಿಟರಿ ಮತ್ತು ಗುಪ್ತಚರ ನೆರವು ನೀಡಿತು.

1980ರ ದಶಕದಲ್ಲಿ ಇರಾಕ್ ಇರಾನ್ ಸೈನಿಕರ ಮೇಲೆ ಮಸ್ಟರ್ಡ್ ಗ್ಯಾಸ್‌ನಂತಹ ಭೀಕರ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿತು. ಅಮೆರಿಕದ ಕಂಪನಿಗಳು ಇರಾಕ್‌ಗೆ ಈ ರಾಸಾಯನಿಕಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು (TDG) ಪೂರೈಸಿದವು. ಈ ಯುದ್ಧದಲ್ಲಿ ಸುಮಾರು 5 ಲಕ್ಷ ಇರಾನಿಯನ್ನರು ಪ್ರಾಣ ಕಳೆದುಕೊಂಡರು. ಇಷ್ಟೆಲ್ಲಾ ಆದ ಮೇಲೆಯೂ ಇರಾನ್ ಯಾಕೆ ‘ಅಮೆರಿಕಕ್ಕೆ ಸಾವು’ (Death to America) ಎಂದು ಘೋಷಣೆ ಕೂಗುತ್ತದೆ ಎಂದು ಅಮೆರಿಕದ ಜನ ಇಂದಿಗೂ ಆಶ್ಚರ್ಯ ಪಡುತ್ತಾರೆ!

ಲೆಬನಾನ್ ಮತ್ತು ಹಿಜ್ಬುಲ್ಲಾ

1982ರಲ್ಲಿ ಇಸ್ರೇಲ್ ಲೆಬನಾನ್ ಮೇಲೆ ಆಕ್ರಮಣ ಮಾಡಿದಾಗ ಹಿಜ್ಬುಲ್ಲಾ ಎಂಬ ಪ್ರತಿರೋಧ ಗುಂಪು ಅಸ್ತಿತ್ವಕ್ಕೆ ಬಂದಿತು. ಅಮೆರಿಕದ ನೌಕಾಪಡೆಗಳು ಲೆಬನಾನ್‌ನಲ್ಲಿ ಮಧ್ಯಪ್ರವೇಶಿಸಿ ಇರಾನ್ ಪರ ಗುಂಪುಗಳ ಮೇಲೆ ದಾಳಿ ಮಾಡಿದಾಗ, ಪ್ರತಿ ದಾಳಿಯಾಗಿ 1983ರಲ್ಲಿ ಅಮೆರಿಕದ ಮೆರೈನ್ ಬ್ಯಾರಕ್ ಮೇಲೆ ಬಾಂಬ್ ದಾಳಿ ನಡೆಯಿತು. ಇದರಲ್ಲಿ 241 ಅಮೆರಿಕನ್ ಸೈನಿಕರು ಸಾವನ್ನಪ್ಪಿದರು.

ಇದನ್ನು ಓದಿದ್ದೀರಾ? ಕರ್ನಾಟಕದಲ್ಲೊಂದು ‘ಮಿನಿ ಇರಾನ್‌’- ಖೊಮೈನಿ ಜೊತೆ ಅಲಿಪುರಕ್ಕಿರುವ ನಂಟೇನು?

ಭಯೋತ್ಪಾದನೆಯ ಅಂಕಿಅಂಶಗಳು

ಬಿಬಿ ನೆತನ್ಯಾಹು ಅವರ ವ್ಯಾಖ್ಯಾನದಂತೆ—”ರಾಜಕೀಯ ಉದ್ದೇಶಗಳಿಗಾಗಿ ನಾಗರಿಕರ ಮೇಲೆ ನಡೆಸುವ ಹಿಂಸೆಯೇ ಭಯೋತ್ಪಾದನೆ.” ಈ ವ್ಯಾಖ್ಯಾನದಂತೆ ನೋಡಿದರೆ:

ನೇರ ದಾಳಿ: 1979ರ ನಂತರ ಇರಾನ್‌ನ ಅಧಿಕೃತ ಸೇನೆಯು ನೇರವಾಗಿ ದಾಳಿ ಮಾಡಿ ಕೊಂದ ಅಮೆರಿಕನ್ ನಾಗರಿಕರ ಸಂಖ್ಯೆ ಬಹುತೇಕ ಶೂನ್ಯ.

ಪ್ರಾಕ್ಸಿ (Proxy) ದಾಳಿಗಳು: ಹಿಜ್ಬುಲ್ಲಾ ಅಥವಾ ಹಮಾಸ್‌ನಂತಹ ಗುಂಪುಗಳಿಂದ ಕಳೆದ 46 ವರ್ಷಗಳಲ್ಲಿ ಸತ್ತ ಅಮೆರಿಕನ್ ನಾಗರಿಕರ ಸಂಖ್ಯೆ ಅಂದಾಜು 50 ರಿಂದ 100ಕ್ಕೂ ಅಧಿಕ.

ಮಿಲಿಟರಿ ಸಾವುಗಳು: ಇರಾನ್ ಬೆಂಬಲಿತ ಗುಂಪುಗಳು ಇರಾಕ್ ಯುದ್ಧದ ಸಮಯದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಕೊಂದ ಅಮೆರಿಕನ್ ಸೈನಿಕರ ಸಂಖ್ಯೆ ಸುಮಾರು 600 ರಿಂದ 1,000 ಇರಬಹುದು. ಆದರೆ ನೆನಪಿರಲಿ, ಇವು ಮಿಲಿಟರಿ ಗುರಿಗಳ ಮೇಲಿನ ದಾಳಿಗಳೇ ಹೊರತು ನಾಗರಿಕರ ಮೇಲಿನ ಭಯೋತ್ಪಾದನೆಯಲ್ಲ.

ಅಮೆರಿಕ ಮಾಡಿದ ಹಾನಿ

ಈಗ ಅಮೆರಿಕದ ಕ್ರಮಗಳನ್ನು ಗಮನಿಸಿ: ಇರಾಕ್ ಮತ್ತು ಅಫ್ಘಾನಿಸ್ತಾನ: 21ನೇ ಶತಮಾನದಲ್ಲಿ ಅಮೆರಿಕ ನಡೆಸಿದ ಯುದ್ಧಗಳಲ್ಲಿ ಇರಾಕ್‌ನಲ್ಲಿ ಸುಮಾರು 1.5 ಲಕ್ಷದಿಂದ 2 ಲಕ್ಷ ನಾಗರಿಕರು ಮತ್ತು ಅಫ್ಘಾನಿಸ್ತಾನದಲ್ಲಿ ಸುಮಾರು 46,000 ನಾಗರಿಕರು ನೇರ ಹಿಂಸೆಗೆ ಬಲಿಯಾಗಿದ್ದಾರೆ. ಪರೋಕ್ಷ ಕಾರಣಗಳನ್ನು ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ.

ನೆತನ್ಯಾಹು ಅವರ ಭಯೋತ್ಪಾದನೆಯ ವ್ಯಾಖ್ಯಾನದಂತೆ ನೋಡುವುದಾದರೆ, ಪಶ್ಚಿಮ ಏಷ್ಯಾದಲ್ಲಿ ಕನಿಷ್ಠ 2.5 ಲಕ್ಷ ನಾಗರಿಕರನ್ನು ಕೊಂದ ಏಕೈಕ ದೇಶವೆಂದರೆ ಅದು ಇರಾನ್ ಅಲ್ಲ, ಅಮೆರಿಕ. ಕಳೆದ 46 ವರ್ಷಗಳಿಂದ ಅಮೆರಿಕದ ಜನರಿಗೆ ಇರಾನ್ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಅಮೆರಿಕ ಮಾಡಿದ ಹಾನಿಗೆ ಹೋಲಿಸಿದರೆ ಇರಾನ್‌ನ ಕ್ರಮಗಳು ತೀರಾ ಸಣ್ಣವು. ದೇವರು ಎನ್ನುವವನು ದೇಶಗಳು ಮಾಡಿದ ಕೆಟ್ಟ ಕೆಲಸಗಳಿಗೆ ತೀರ್ಪು ನೀಡುವುದಾದರೆ, ದೈವಿಕ ಶಿಕ್ಷೆಗೆ ಹೆದರಬೇಕಾದ ದೇಶ ಅಮೆರಿಕವೇ ಹೊರತು ಇರಾನ್ ಅಲ್ಲ.

ಕೃಪೆ: sonar21.com Iran Does Not Hate Americans… But it Has Legitimate Reasons to Do So

ಕನ್ನಡಾನುವಾದ – ಭರತ್ ಹೆಬ್ಬಾಳ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...