ಮಂಡ್ಯ | ಹಾವುಗಳ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಬದಲಾಯಿಸಿಕೊಳ್ಳಿ: ವಿದ್ಯಾಪ್ರಸಾದ್

Date:

ಹಾವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಆ ಮೂಲಕ ಹಾವುಗಳ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಹಾವು ಸಂರಕ್ಷಕ ಗೊರವನಹಳ್ಳಿ ವಿದ್ಯಾ ಪ್ರಸಾದ್ ತಿಳಿಸಿದರು.

ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯ ಸ್ಪೂರ್ತಿಧಾಮ ಪಬ್ಲಿಕ್ ಶಾಲೆಯಲ್ಲಿ ನಡೆದ ಹಾವುಗಳ ಬಗ್ಗೆ ನಡೆಯುತ್ತಿರುವ ಹೊಸ ಸಂಶೋಧನೆಗಳ ಹಾಗೂ ಅದರಿಂದ ತಿಳಿದು ಬಂದ ಹೊಸ ತಿಳುವಳಿಕೆಯ ಬಗ್ಗೆ ತಿಳಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಳೆಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ ಹಾವು ಕಚ್ಚಿದರೆ, ಕಚ್ಚಿದ ಭಾಗದಲ್ಲಿ ಇಂಟು ಮಾರ್ಕ್‌ ಹಾಕಿ, ಕಚ್ಚಿದ ಭಾಗಕ್ಕಿಂತ ಒಂದು ಅಡಿ ಮೇಲೆ ಹಗ್ಗದಲ್ಲಿ ಬಿಗಿದು ಕಟ್ಟುವ ರೂಢಿ ಏನಿತ್ತು ಅದು ತಪ್ಪು. ಆ ರೀತಿಯಲ್ಲಿ ಮಾಡುವಂತಿಲ್ಲ. ಅದರಿಂದ ಇನ್ನೂ ಅನಾಹುತ ಹೆಚ್ಚು ಆಗುತ್ತದೆ. ಮೆಡಿಕಲ್ ಪಠ್ಯವನ್ನೇ ಈಗಿನ ಸಂಶೋಧನೆಯಂತೆ ಬದಲಾಯಿಸಲು ಹೊರಟಿದ್ದಾರೆ ಗೊರವನಹಳ್ಳಿ ವಿದ್ಯಾ ಪ್ರಸಾದ್ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001197198

ಈಗಿನ ಸಂಶೋಧನೆಯಿಂದ ತಿಳಿದು ಬಂದ ಅರಿವು ಏನೆಂದರೆ, ಈ ಮೊದಲು ಹಾವು ಕಚ್ಚಿದ ಜಾಗದ ಒಂದು ಅಡಿ ಮೇಲೆ ರಕ್ತ ಆಡದಂತೆ ಹಗ್ಗದಿಂದ ಬಿಗಿದು ಕಟ್ಟುತ್ತಿದ್ದರು. ಹೀಗೆ ಕಟ್ಟುವುದರಿಂದಲೇ ಹೃದಯಾಘಾತ ಆಗುವ ಸಂಭವ ಹೆಚ್ಚು ಇರುತ್ತದೆ. ಬಿಗಿದು ಕಟ್ಟಿದ ಜಾಗದಲ್ಲಿ ಗ್ಯಾಂಗ್ರಿನ್ ಆಗುವ ಸಾಧ್ಯತೆ ಇದೆ. ಹೀಗೆ ಮಾಡದೆ ಹಾವು ಕಚ್ಚಿದ ತಕ್ಷಣ ಮಾಟ ಮಂತ್ರ ಮಾಡಿಸುತ್ತಾ ಸಮಯ ವ್ಯರ್ಥ ಮಾಡದೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಆ್ಯಂಟಿ ವೆನಂ ಕೊಡಿಸಬೇಕು ಎಂದರು.

ಹಾವು ಕಚ್ಚಿದ ಮೇಲೆ ಕಡಿಮೆ ಎಂದರೂ ಒಂದು ಗಂಟೆ ಅವಕಾಶ ಇರುತ್ತದೆ. ಗಾಬರಿ ಮಾಡಿಕೊಳ್ಳಬಾರದು ಇದರಿಂದ ರಕ್ತದ ಪರಿಚಲನೆ ಹೆಚ್ಚಾಗಿ ನಂಜು ಏರುತ್ತದೆ. ಹಾವು ಕಚ್ಚಿದಾಗ ಬಾಯಿ ಹಾಕಿ ರಕ್ತ ಹೊರ ತೆಗೆಯುವುದನ್ನು ಮಾಡಬಾರದು. ಬಾಯಿಯಲ್ಲಿ ಹುಣ್ಣು ಇತ್ಯಾದಿಗಳಿಂದ ಓಪನ್ ಇದ್ದರೆ ನಂಜು ಏರಿ ಅವರೇ ಮೊದಲು ಸಾಯುತ್ತಾರೆ. ಬಾಯಲ್ಲಿ, ನಾಲಿಗೆಯಲ್ಲಿ ಕೆಲವು ಅಂಶಗಳನ್ನು ಹೀರಿಕೊಳ್ಳುವ ಗುಣ ಇರುತ್ತದೆ. ಮೆದುಳು ಹಾಗೂ ಹೃದಯ ಹತ್ತಿರ ಇರುವುದರಿಂದ ಬೇಗ ನಂಜು ಏರಿ ಸಾವು ಬರುತ್ತದೆ. ಹಾವಿನ ವಿಷವನ್ನು ಸೇವನೆ ಮಾಡಿದರೆ ಏನು ಆಗುವುದಿಲ್ಲ. ಆದರೆ ರಕ್ತಕ್ಕೆ ಹೋದರೆ ಸಾವು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

1001197199

ಹಾವಿನ ದ್ವೇಷ 12 ವರುಷ ಅನ್ನುವುದೆಲ್ಲ ಸುಳ್ಳು. ಅದಕ್ಕೆ ಸಣ್ಣ ಮೆದುಳು ಇರುತ್ತದೆ. ಅದಕ್ಕೆ ಜ್ಞಾಪಕ ಶಕ್ತಿ ಕಡಿಮೆ, ಅದರ ಬದುಕು ಏನಿದ್ದರೂ 300 ಮೀಟರ್ ಪರಿಧಿಯಲ್ಲಿ ಅಷ್ಟೇ ಇರುತ್ತದೆ. ಯಾವುದಾದರೂ ಪ್ರಾಣಿ ಓಡಿಸಿಕೊಂಡು ಬಂದಾಗ ಗಾಬರಿಯಲ್ಲಿ ಅದರ ಪರಿಧಿಯನ್ನು ದಾಟಿ ಬಂದರೆ ತಿರುಗಿ ಅದೇ ಹಳೆಯ ಜಾಗಕ್ಕೆ ಹೋಗುವಷ್ಟು ನೆನಪು ಇರುವುದಿಲ್ಲ. ಅದು ಹೊಸ ಜಾಗ ಹುಡುಕಿಕೊಳ್ಳಬೇಕು” ಎಂದು ವಿದ್ಯಾಪ್ರಸಾದ್ ತಿಳಿಸಿದರು.

ಹಾವುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಅನಗತ್ಯ ಗಾಬರಿಯಿಂದ ಅವು ಕಂಡ ತಕ್ಷಣಕ್ಕೆ ಸಾಯಿಸುವುದು ಬೇಡ. ಹಾವುಗಳನ್ನು ಹಿಡಿದು ಪ್ರದರ್ಶಿಸುವುದು, ಹಾವಿನೊಡನೆ ಸರಸ ಆಡುತ್ತಾ ಮುತ್ತು ನೀಡುವ ಹುಚ್ಚಾಟಗಳನ್ನು ಮಾಡಬಾರದು. ವನ್ಯ ಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ತಪ್ಪಾಗುತ್ತದೆ. ಮಂಡ್ಯ ಜಿಲ್ಲೆಯನ್ನು ಹಾವು ಕಡಿತ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪಣ ತೊಡಬೇಕಿದೆ. ಮಾನವ-ಕಾಡು ಉಸಿರುಗಳ ಸಂಘರ್ಷ ತಪ್ಪಿಸಲು ಪಣ ತೊಡೋಣ ಎಂದು ಮಕ್ಕಳಿಗೆ ತಿಳುವಳಿಕೆ ಕೊಟ್ಟರು.

1001197278

ಹಾವು ಜನವಸತಿ ಪ್ರದೇಶದಲ್ಲಿ ಕಂಡು ಬಂದಲ್ಲಿ ಕೊಲ್ಲದೆ ಹಾವಿನ ಮೇಲೆ ಗಮನವಿರಿಸಿ ಉರಗ ಮಿತ್ರರಿಗೆ ವಿಷಯ ಮುಟ್ಟಿಸಿದರೆ, ಬಂದು ಹಾವುಗಳ ಭಯ ದೂರವಾಗಿಸಿ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ ಎಂದು ವಿದ್ಯಾಪ್ರಸಾದ್ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಶಿವರಾಜು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...