ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ

Date:

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕವಾಗಿ, ಪಾರಂಪರಿಕವಾಗಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಅದರಲ್ಲೂ ಸಾಮ್ರಾಟ ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾರ್ಯ ಕ್ಷೇತ್ರವಿದು.

ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣ ಮುಖ್ಯ ರಸ್ತೆಯಲ್ಲಿ ಹುದುಗಿದ್ದ ಮಣ್ಣು ಗುಡ್ಡೆಯಲ್ಲಿ ಎರಡು ನೆಲಮಾಳಿಗೆ ಪತ್ತೆಯಾಗಿದ್ದು. ಸುಸ್ಥಿತಿಯಲ್ಲಿದೆ. ಸರಿ ಸುಮಾರು ಆರು ಅಡಿ ಅಗಲ, 15 ಅಡಿ ಉದ್ದವಿರುವ ಚುಕ್ಕಿ ಗಾರೆ ಬೃಹತ್ ಕಲ್ಲುಗಳಿಂದ ನಿರ್ಮಾಣವಾಗಿದ್ದು, ಈಗಲು ಯಾವುದೇ ಮಳೆ, ಗಾಳಿಗೆ ಜಗ್ಗದೆ ಶಿಥಿಲಗೊಳ್ಳದೆ ಇರುವುದು ವಿಶೇಷ.

ಶ್ರೀರಂಗಪಟ್ಟಣದ ಹೆಜ್ಜೆ ಹೆಜ್ಜೆಯಲ್ಲೂ ,ಮಣ್ಣಿನ ಕಣ ಕಣ ಟಿಪ್ಪುವಿನ ಇತಿಹಾಸ ಸಾರುತ್ತದೆ. ಸಮ ಸಮಾಜದ ಕಲ್ಪನೆಯ ಹರಿಕಾರ, ಬ್ರಿಟೀಷರಿಗೆ ಸಿಂಹ ಸ್ವಪ್ನನಾಗಿ “ಮೈಸೂರು ಹುಲಿ” ಎಂದೇ ಬಿರುದಾಂಕಿತ ಕೂಡ ಆಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಂದೂ ಮುಸಲ್ಮಾನ ಒಟ್ಟಿಗೆ ಬೆರೆತು ಬಾಳಿ ಬದುಕುತ್ತಿರುವ ಶ್ರೀರಂಗಪಟ್ಟಣ ನೂರಾರು ಪಾರಂಪರಿಕ ಕಟ್ಟಡಗಳಿಗೆ, ಕುರುಹುಗಳಿಗೆ ಸಾಕ್ಷಿ. ಅಗೆದಂತೆಲ್ಲ ಇತಿಹಾಸ ಮರುಕಳಿಸುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲ ಒಂದಲ್ಲ ಒಂದು ಟಿಪ್ಪುವಿನ ಆಳ್ವಿಕೆಯ ಸಾಮ್ರಾಜ್ಯದ ವಿಶೇಷತೆಗಳು ಗೋಚರವಾಗುತ್ತದೆ.

ನೆಲಮಾಳಿಗೆ 1

ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಎರಡು ನೆಲ ಮಾಳಿಗೆಗಳು ಸುಸ್ಥಿತಿಯಲ್ಲಿ ಕಂಡು ಬಂದಿವೆ. ಸ್ಥಳೀಯರು ಅಂದಾಜಿಸುವ ಪ್ರಕಾರ, ರಾತ್ರಿ ಪಾಳಿಯ, ಗಸ್ತು ಸೈನಿಕರ ವಿಶ್ರಾಂತಿ ಕೊಠಡಿ ಇಲ್ಲವೇ, ಮಳೆಗೆ ಮದ್ದು, ಗುಂಡುಗಳು ನೆನೆಯದಂತೆ ಸಂಗ್ರಹಿಸಿಡುವ ಸಂಗ್ರಹಾಗಾರ ಇದ್ದಿರಬೇಕು ಎನ್ನುತ್ತಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಡಾ ಸುಜಯ್ ಕುಮಾರ್, “ಶ್ರೀರಂಗಪಟ್ಟಣ ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಪಾರಂಪರಿಕವಾಗಿ ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು. ಈಗ ಕಂಡು ಬಂದಿರುವ ನೆಲ ಮಾಳಿಗೆ ಸುಮಾರು 45 ವರ್ಷಗಳ ಹಿಂದೆ ನಾನು ಚಿಕ್ಕವನಿದ್ದಾಗ ಅಲ್ಲೆಲ್ಲ ಆಟ ಆಡಿರುವೆ. ಈಗಿನ ಹಾಗೆ ಇರಲಿಲ್ಲ. ಬಹಳ ಕಠಿಣವಾಗಿ ಇತ್ತು. ಆ ಕಡೆ ತೆರಳಲು ಕೂಡ ಆಗುತ್ತಿರಲಿಲ್ಲ. ಸೈನಿಕರು ಇಲ್ಲಿ ನಡೆದಾಡಿರುವಂತಹಾ ದಾರಿ ಇದೆ. ಈ ಗುಡ್ಡೆಗಳ ಮೇಲೆ ರಾತ್ರಿ ಪಾಳಿಯವರು ಗಸ್ತಿಗೆ ಬಳಸಿರಬೇಕು.ಅವರಿಗೆ ಅಗತ್ಯ ಇರುವ ವಸ್ತುಗಳ ಸಂಗ್ರಹಕ್ಕೆ ಇದ್ದಿರಬೇಕು ಅನಿಸುತ್ತದೆ” ಎಂದರು.

ನೆಲಮಾಳಿಗೆ

ವಕೀಲರಾದ ವೆಂಕಟೇಶ್ ಮಾತನಾಡಿ, “ನಗರಗಳನ್ನ, ಮಹಾ ನಗರಗಳನ್ನ ಯಾರು ಬೇಕಾದರೂ ಹುಟು ಹಾಕಬಹುದು. ಮುಂದಿನ ಪೀಳಿಗೆಗೆ ಇಂತಹ ಅಮೂಲ್ಯವಾದ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕಾದ ಕರ್ತವ್ಯ ನಮ್ಮದು” ಎಂದರು.

“ಶ್ರೀರಂಗಪಟ್ಟಣದ ಇತಿಹಾಸದ ಮೇಲೆ ಹೆಚ್ಚು ಹೆಚ್ಚು ಸಂಶೋಧನೆ ಆಗಬೇಕಿದೆ. ಈಗ ಕಂಡು ಬಂದಿರುವ ನೆಲ ಮಾಳಿಗೆ ಇರುವ ಜಾಗದಲ್ಲಿ ಒಟ್ಟು ಎಂಟು ಮಣ್ಣು ಗುಡ್ಡೆಗಳಿವೆ. ಅಲ್ಲೆಲ್ಲ ಮತ್ತೇನೋ ಇರುವ ಸಾಧ್ಯತೆ ಇದ್ದು ಈಗ ಮುಳ್ಳು, ಗಿಡಗಳಿಂದ ಆವೃತವಾಗಿದೆ. ಇದನ್ನೆಲ್ಲ ಸ್ವಚ್ಛ ಮಾಡಿ, ಇದರ ಬಗ್ಗೆ ಹೆಚ್ಚು ತಿಳಿಯುವ ಕೆಲಸ ಮಾಡಬೇಕು. ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವ ಕೆಲಸವನ್ನು ಜಿಲ್ಲಾಡಳಿತ ,ಸರ್ಕಾರ,ಕೇಂದ್ರ ಸರ್ಕಾರ, ಪುರಾತತ್ವ ಇಲಾಖೆ ಮಾಡಬೇಕಿದೆ” ಎಂದರು.

ಗ್ರಾಮ ಪಂಚಾಯತ್ ಸದಸ್ಯ ಜಯಶಂಕರ್ ಮಾತನಾಡಿ, “ಸಂಶೋಧಕ ಡಾ ಹರ್ಷವರ್ಧನ್ ಅವರ ಮಾರ್ಗದರ್ಶನದಲ್ಲಿ ಈ ನೆಲಮಾಳಿಗೆಗಳ ಬಗ್ಗೆ ಡಾ ಸುಜಯ್ ಕುಮಾರ್ ಅವರನ್ನು ಕೇಳಿದ್ದರಿಂದ ಅವರು ಮಾಹಿತಿ ನೀಡಿದರು. ಕೂಡಲೆ ಆ ಸ್ಥಳಕ್ಕೆ ಭೇಟಿ ಕೊಟ್ಟಾಗ, ಒಂದು ನೆಲ ಮಾಳಿಗೆ ಚುಕ್ಕಿ ಗಾರೆಯಿಂದಲೂ, ಇನ್ನೊಂದು ಕಲ್ಲುಗಳಿಂದ ನಿರ್ಮಿತವಾಗಿದೆ. ಈಗಲೂ ಯಾವುದೇ ಹಾನಿಗೆ ಒಳಗಾಗದೆ ಗಿಡಗಂಟೆಗಳು ಬೆಳೆದುಕೊಂಡಿವೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?

“ಹಂದಿಗಳು ವಾಸ ಮಾಡಲು ಜಾಗ ಮಾಡಿಕೊಂಡಿವೆ. ಇದನ್ನೆಲ್ಲ ಸ್ವಲ್ಪ ಸ್ವಚ್ಛ ಮಾಡಿ,
ನಡೆದಾಡುವಷ್ಟು ದಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾತ್ ವೇ ನಿರ್ಮಾಣ ಮಾಡಿ ನೆಲ ಮಾಳಿಗೆ ಸುತ್ತಮುತ್ತ ಸಂಪೂರ್ಣವಾಗಿ ಗಿಡಗಂಟಿಗಳನ್ನು ತೆಗೆದು ಜನರು ಬರುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುವುದು. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಸೈನಿಕರು ಓಡಾಟ ಮಾಡಿದ ದಾರಿಯ ಕುರುಹು ಕೂಡ ಪತ್ತೆಯಾಗಿದೆ. ಇದು ಶ್ರೀರಂಗಪಟ್ಟಣದ ಟಿಪ್ಪು ಆಳ್ವಿಕೆಯ ಗತ ವೈಭವ. ಇದನ್ನೆಲ್ಲ ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ” ಎಂದರು.

ನೆಲಮಾಳಿಗೆ 3

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...