ಧಾರ್ಮಿಕ ಬಹುತ್ವಕ್ಕೆ ವಿರುದ್ಧವಾದ ರಾಜ್ಯ ಸರ್ಕಾರದ ‘ರಾಮಪೂಜೆ’ ಆದೇಶ!

Date:

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ಆದೇಶ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಆದೇಶ ರಾಜ್ಯದ ಧಾರ್ಮಿಕ ಬಹುತ್ವಕ್ಕೆ ಅಡ್ಡಿಯಾಗಿದೆ.

“ಅಯೋಧ್ಯೆಯ ರಾಮನ ಪ್ರತಿಷ್ಠಾಪನೆ ಸಮಯದಲ್ಲಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಮಹಾಮಂಗಳಾರತಿ ನಡೆಯಲಿದೆ” ಎಂದು ಮುಜರಾಯಿ ಇಲಾಖೆ ಹೇಳಿದೆ. ಇದು ಕಾಂಗ್ರೆಸ್ ನ ಚುನಾವಣಾ ಘೋಷಣೆಯಾದ “ಸರ್ವ ಜನಾಂಗದ ಶಾಂತಿಯ ತೋಟ” ಪರಿಕಲ್ಪನೆಗೆ ವಿರುದ್ಧವಾಗಿದೆ. ನೂರಾರು ಜನಾಂಗಗಳ ನೂರಾರು ಆರಾಧನಾ ಪದ್ಧತಿಗಳು ಇರುವಾಗ ಒಬ್ಬ ದೇವನಿಗೆ ಏಕಕಾಲದಲ್ಲಿ ಎಲ್ಲಾ ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಬೇಕು ಎಂದು ಹೇಳುವುದು ಎಷ್ಟು ಸರಿ?

order 1
ಜ.6ರಂದು ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶ ಪ್ರತಿ

ರಾಮನ ಆರಾಧನೆ ಎನ್ನುವುದು ವೈಷ್ಣವ ಆರಾಧನಾ ಪದ್ಧತಿಯಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಶೈವ ದೇವಸ್ಥಾನಗಳಲ್ಲಿ ರಾಮ ಪ್ರತಿಷ್ಟಾಪನೆಗಾಗಿ ಯಾಕೆ ವಿಶೇಷ ಪೂಜೆ ಮಾಡಬೇಕು ಎಂಬ ಪ್ರಶ್ನೆ ಎದ್ದಿದೆ. ರಾಜ್ಯದ ಹಲವು ಮುಜರಾಯಿ ದೇವಸ್ಥಾನಗಳಲ್ಲಿ ವೈಷ್ಣವ ಪೂಜಾ ಪದ್ದತಿಯನ್ನು ಅನುಸರಿಸಬೇಕೋ? ಶೈವ ಪೂಜಾ ಪದ್ದತಿಯನ್ನು ಅನುಸರಿಸಬೇಕೋ ಎಂಬ ವಿವಾದವೇ ಇದೆ. ಹಾಗಿರುವಾಗ ವೈಷ್ಣವ ದೇವತಾರಾಧನೆಯಾಗಿರುವ ಶ್ರೀರಾಮನ ನಿಮಿತ್ತ ಶೈವ ಮತ್ತು ಶೂದ್ರ ದೇವಸ್ಥಾನ/ದೈವಸ್ಥಾನಗಳಲ್ಲಿ ಪೂಜೆ ಮಾಡಲೇಬೇಕು ಎಂದು ಆದೇಶಿಸಿರುವುದು ಹಲವು ದೇವಸ್ಥಾನಗಳ ಸಂಪ್ರದಾಯಕ್ಕೆ ವಿರುದ್ದವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯದ ಅತೀ ದೊಡ್ಡ ಮುಜರಾಯಿ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ! ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಶೈವಾಂಶ (ಶಿವಪರಂಪರೆ) ದೇಗುಲವಾಗಿದ್ದರೂ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನ ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ 2021 ಮಾರ್ಚ್ 21 ರಂದು ಬಹಿರಂಗವಾಗಿ ಪತ್ರಿಕಾಗೋಷ್ಡಿ ನಡೆಸಿ ಆರೋಪಿಸಿತ್ತು. ಈ ರೀತಿಯ ವಿವಾದ ಈಗಲೂ ಜಾರಿಯಲ್ಲಿರುವಾಗ ವೈಷ್ಣವ ರಾಮನ ಪ್ರತಿಷ್ಠಾಪನೆ ನಿಮಿತ್ತ ಕುಕ್ಕೆಯಲ್ಲಿ ಪೂಜೆ ಮಾಡಿ ಎಂದು ಹೇಳುವುದು ಸರಿಯಲ್ಲ.

ಈಗಾಗಲೇ ಶಿವನ ದೇವಸ್ಥಾನದಲ್ಲಿ ವಿಷ್ಣು ಆರಾಧಕರು ಸೇರಿಕೊಂಡಿದ್ದಾರೆ ಎಂಬ ವಿವಾದ ಜೀವಂತವಾಗಿದೆ. ಉದಾಹರಣೆಗೆ 1969ರಲ್ಲಿ ಸಂಶೋಧಕ ಡಾ ಮ ಸು ಅಚ್ಯುತ ಶರ್ಮರು ಬರೆದಿರುವ ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನಲೆ ಪುಸ್ತಕದ ಮದನಂತೇಶ್ವರ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ…

“ಉಡುಪಿಗೆ ಮಾಧ್ವಬ್ರಾಹ್ಮಣರು ಪ್ರವೇಶಿಸುವ ಮುಂಚೆ ಅನಂತೇಶ್ವರ ದೇಗುಲವು ಸ್ಥಾನಿಕ ಶಿವಬ್ರಾಹ್ಮಣರ ವಶದಲ್ಲಿತ್ತು. ಮಾಧ್ವ ಬ್ರಾಹ್ಮಣರು ಸ್ಥಳೀಯ ಬಂಟರ ಸಹಾಯ ಪಡೆದು ಸ್ಥಾನಿಕ ಶಿವ ಬ್ರಾಹ್ಮಣರನ್ನು ಓಡಿಸಿ ಅನಂತೇಶ್ವರ ದೇಗುಲವನ್ನು ವಶಪಡಿಸಿಕೊಂಡು ಅನಂತಾಸನ ದೇಗುಲ ಎಂದು ಕರೆದರು. ಆ ಬಳಿಕ ಬೇಕೆಂದೇ ಅನಂತೇಶ್ವರ ಶಿವಲಿಂಗಕ್ಕೆ ಹಾನಿ ಮಾಡಿ ಅದು ಕಾಣದಂತೆ ತಾಮ್ರದ ತಗಡೊಂದನ್ನು ಸುತ್ತವರೆಸಿ ಮುಚ್ಚಿಟ್ಟಿದ್ದಾರೆ. ಈ ಶಿವನ ಆಲಯದಲ್ಲಿ ಈಗ ಈಶ್ವರನಿಗೆ  ಪ್ರಿಯವಾದ ಬಿಲ್ವಪತ್ರೆ ಮತ್ತು ವಿಭೂತಿಯ ಉಪಯೋಗವೂ ಮಾಡದೇ ವಿಷ್ಣು ಆರಾಧನಾ ಕ್ರಮವಾದ ತುಳಸೀ ಗಂಧವನ್ನು ಕೊಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಇದು ಕೇವಲ ಉಡುಪಿಗೆ ಸೀಮಿತವಲ್ಲ‌. ಈಗಲೂ ಹಲವೆಡೆ ಮಾಧ್ವ ಬ್ರಾಹ್ಮಣರು ಪೂಜಿಸುವ ಶಿವ ದೇವಸ್ಥಾನದಲ್ಲಿ ವಿಭೂತಿ ಕೊಡದೇ ಗಂಧ ಕೊಡುವ ಬಗ್ಗೆ ಆಕ್ಷೇಪ ಇದೆ. ಹಾಗಿರುವಾಗ ಶಿವನ ದೇವಸ್ಥಾನದಲ್ಲಿ ರಾಮನಿಗಾಗಿ ಪೂಜೆ ಮಾಡುವುದು ಎಷ್ಟು ಸರಿ ?

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಹತ್ತಾರು ಭೂತಾರಾಧನಾ ದೈವಸ್ಥಾನಗಳಿವೆ.‌ ಭೂತಾರಾಧನೆಗೆ ಅದರದ್ದೇ ಆದ ದಲಿತ/ಶೂದ್ರ ಆರಾಧನಾ ಪದ್ದತಿಯಿದೆ. ವೈದಿಕ ಆರಾಧನಾ ಪದ್ದತಿಗಳನ್ನು ಭೂತಾರಾಧನೆಯಲ್ಲಿ ಅಳವಡಿಸಿಕೊಳ್ಳುವಂತಿಲ್ಲ. ಮಹಾಮಂಗಳಾರತಿ ಎಂಬ ಪೂಜಾ ಪದ್ದತಿಯೇ ದೈವಾರಾಧನೆಯಲ್ಲಿ ಇಲ್ಲ. ಹಾಗಾಗಿ ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ಭೂತಾರಾಧನಾ ಕೇಂದ್ರಗಳಲ್ಲಿ ಯಾವ ಕಾರಣಕ್ಕೂ ಮುಜರಾಯಿ ಇಲಾಖೆಯ ಈ ಆದೇಶ ಪಾಲಿಸಲು ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ? ಜ. 22ರಂದು ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ: ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ

ಉತ್ತರ ಕರ್ನಾಟಕ ಭಾಗದಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ ಚೌಡೇಶ್ವರಿ ದೇವಸ್ಥಾನಗಳು, ಬೆಂಗಳೂರು ಸುತ್ತಮುತ್ತ ಅಣ್ಣಮ್ಮ ದೇವಸ್ಥಾನಗಳು ಇವೆ. ಶ್ರೀರಾಮನ ದೇಗುಲ ಉದ್ಘಾಟನೆಗೂ ಅಣ್ಣಮ್ಮ, ಚೌಡೇಶ್ವರಿಗೂ ಏನು ಸಂಬಂಧ?

ಹಾಗೆ ನೋಡಿದರೆ ಇಡೀ ಕರ್ನಾಟಕದಲ್ಲಿರುವುದು ಮಾರಮ್ಮ, ಅಣ್ಣಮ್ಮ, ಭೂತಾರಾಧನೆ, ಮುನಿ ಪೂಜೆಯಂತಹ ದೇವರ ಆರಾಧನೆಗಳು ಮಾತ್ರ. ಇವನ್ನು ಹೊರತುಪಡಿಸಿದರೆ ಕಿರುಸಂಸ್ಕೃತಿಗೆ ಹತ್ತಿರವಾಗಿರುವ ಶಿವನ ಆರಾಧನೆ ನಮ್ಮಲ್ಲಿದೆ. ಆದರೆ ಶಿವಾಲಯಗಳು ಮತ್ತು ಶೂದ್ರ/ದಲಿತರ ಆರಾಧನಾ ಕೇಂದ್ರಗಳಲ್ಲಿ ವೈಷ್ಣವರ ರಾಮನಿಗಾಗಿ ಆರಾಧನೆ, ಪೂಜಾದಿಗಳು ನಡೆಯಬೇಕು ಎನ್ನುವುದು ‘ಧಾರ್ಮಿಕ ಹೇರಿಕೆ’ಯಲ್ಲದೇ ಇನ್ನೇನು ಅಲ್ಲ.

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...