ನುಡಿ ನಮನ | ತುಳುವರ ಸಾಕ್ಷಿ ಪ್ರಜ್ಞೆ ಅಮೃತ ಸೋಮೇಶ್ವರರು

Date:

ತುಳುನಾಡಿನ, ತುಳು ಮಣ್ಣಿನ ಸೌಹಾರ್ದ ಪರಂಪರೆಯನ್ನು ಪಾಲಿಸುವುದು ಬದುಕಿನ ಕರ್ತವ್ಯ ಎಂಬಷ್ಟರ ಮಟ್ಟಿಗೆ ಪ್ರಜ್ಞಾಪೂರ್ವಕವಾಗಿ ಜಾಗರೂಕತೆಯ ನಡೆಯೊಂದಿಗೆ ಬಾಳಿ ಬದುಕಿದವರು ಹಿರಿಯ ವಿದ್ವಾಂಸರಾದ ಪ್ರೊ.ಅಮೃತ ಸೋಮೇಶ್ವರರು.

1935ರಲ್ಲಿ ಜನಿಸಿದ ಅಮೃತರು 89 ವರ್ಷಗಳ ತುಂಬು ಜೀವನವನ್ನು ಕಪಟವಿಲ್ಲದೆ ಬದುಕಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತುಳು ಕನ್ನಡದ ಕೊಂಡಿಯಾಗಿದ್ದುಕೊಂಡು, ತುಳುವಿನ ಆಸ್ಮಿತೆಯನ್ನು ಎತ್ತಿ ತೋರಿದವರು. ಅಮೃತರ ಮನೆಮಾತು ಮಲಯಾಳಂ, ಶಿಕ್ಷಕರಾಗಿ ಕಲಿಸಿದ್ದು ಕನ್ನಡ, ಸಂಶೋಧನೆಯನ್ನೆಲ್ಲಾ ತುಳು ಭಾಷೆಗೆ ಧಾರೆ ಎರೆದರು.

amruta someshwar 2

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೈಸ್ಕೂಲಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡರ ಶಿಷ್ಯ, ಕಾಲೇಜಿನಲ್ಲಿ ಪಂಡಿತ ಸೇಡಿಯಾಪು ಕೃಷ್ಣ ಭಟ್ಟರು ಗುರುಗಳು , ಮುಂದುವರಿದ ಪರಂಪರೆಯಲ್ಲಿ ಅಮೃತರೆ ಗುರುಗಳಾದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮೂರು ದಶಕಗಳ ಕನ್ನಡ ಅಧ್ಯಾಪನ. ಅಮೃತರ ಶಿಷ್ಯತ್ವ ನೂರಾರು, ಸಾವಿರಾರು ಸಾಹಿತ್ಯಾಸಕ್ತರಿಗೆ ಒದಗಿತು. ಅಗಣಿತ ಮಂದಿಗೆ ಅವರು ಪಾಠ ಮಾಡದೆಯೇ ಗುರುಗಳಾದರು. ನೆಚ್ಚಿನ ಮಾರ್ಗದರ್ಶಕರಾದರು.

ಅಮೃತರೆಂದರೆ ತುಳು ಜಾನಪದ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಅಪಾರವಾದ, ಆಳವಾದ ಜ್ಞಾನ ಭಂಡಾರ. ಅವರು ಪಾಡ್ದನಗಳ ಸಂಗ್ರಹಕಾರ, ಯಕ್ಷಗಾನ ಕವಿ, ಯಕ್ಷಗಾನ ವಿಮರ್ಶಕ, ಭಾವಗೀತೆಯ ಕವಿ, ತುಳು ನಾಟಕಕಾರ, ಕನ್ನಡ ನಾಟಕಕಾರ, ಭಾಷಾ ಕೋಶ ರಚನೆಕಾರ, ಹೊಸ ಗಾದೆಗಳ ಜನಕ, ಕಾದಂಬರಿಕಾರ ಜೊತೆಗೆ ಮಾನವೀಯ ಅಂತಕರಣದ ಸರಳ ಸಜ್ಜನ ಚಿಂತಕ.

amruta someshwara 3

‘ಭಗವತಿ ಆರಾಧನೆ, ‘ಯಕ್ಷಾಂದೋಳ’ ‘ಕರೆಗಾಳಿ, ‘ತುಳು ಬದುಕು , ‘ಭ್ರಮಣ, ‘ತೀರದ ತೆರೆ, ‘ಹೃದಯ ವಚನಗಳು, ‘ಅವಿಲು, ‘ಯಕ್ಷಗಾನ ಕೃತಿ ಸಂಪುಟ, ‘ಮೋಯ ಮಲಯಾಳ -ಕನ್ನಡ ಕೋಶ, ‘ಅಪಾರ್ಥಿನೀ, ‘ಮೋಕೆದ ಬೀರೆ ಲೆಮಿಂಕಾಯೆ, ‘ತುಳು ಜೋಕುಮಾರಸ್ವಾಮಿ, ‘ತೆರಿನಾಯ ವಚನೊಲು, ‘ಯಕ್ಷಗಾನ ಛಾಯಾವತರಣ, ‘ಗೋಂದೊಲು ,ಇವೆಲ್ಲವೂ ಅಮೃತರು ಮಥಿಸಿದ ಎಂದೂ ತೀರದ ಅಮೃತಗಳು .

ಫಿನ್‌ಲ್ಯಾಂಡ್ ದೇಶದ ಜನಪದ ಮಹಾಕಾವ್ಯ ‘ಕಲೇವಾಲ’ದ ಒಂದು ಭಾಗವನ್ನು ‘ಮೋಕೆದ ಬೀರೆ ಲೆಮಿಂಕಾಯೆ’ ಎಂಬುದಾಗಿ ತುಳು ಭಾಷೆಗೆ ಅಮೃತರು ಅನುವಾದಿಸಿದ್ದರು.

ಡಾ.ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕವನ್ನು ತುಳುವಿಗೆ ಅನುವಾದಿಸಿದಾಗ ಇದರ ಪ್ರಥಮ ಪ್ರದರ್ಶನ ಉಡುಪಿ ರಂಗಭೂಮಿ ತಂಡವರು ಪ್ರಸ್ತುತ ಪಡಿಸಿದ್ದರು. ‘ಗೋಂದೊಲು’ ತುಳುನಾಡಿನಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ ನಾಟಕ. ಹೆಣ್ಣಿನ ಸ್ವಾಭಿಮಾನ, ಆತ್ಮಸ್ಥೈರ್ಯದ ಪ್ರತೀಕವಾಗಿ ಇವತ್ತಿಗೂ ಬಲು ಶಕ್ತಿಶಾಲಿ ನಾಟಕ.

amruta someshwar pic

ಅಮೃತರಿಗೆ 60 ತುಂಬಿದಾಗ ‘ಯಕ್ಷಾಂದೋಳ’ ಅಮೃತರ ಯಕ್ಷಗಾನ ವಿಮರ್ಶಾ ಲೇಖನಗಳ ಕೃತಿಯನ್ನು ಉಚ್ಚಿಲ ಕಲಾಗಂಗೋತ್ರಿ ಅಮೃತ ಸೋಮೇಶ್ವರ ಅಭಿನಂದನಾ ಸಮಿತಿ ಪ್ರಕಟಿಸಿ ಗೌರವ ಸಮರ್ಪಣೆ ಸಲ್ಲಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರದಿಂದ ಗೌರವಿಸಲ್ಪಟ್ಟವರು ಅಮೃತರು.

ನುಡಿದಂತೆ ನಡೆದ, ಬರೆದಂತೆ ಬದುಕಿದ, ಸತ್ಯವನ್ನು ಸತ್ಯವೆಂದೇ ಪ್ರತಿಪಾದಿಸಿದ, ಆಸೆ, ಆಮಿಷಗಳಿಗೆ ಬೆನ್ನು ಹತ್ತದ ಬರಹಗಾರರು ಅಮೃತರು. ಅವರದೆಂದೂ ಗಟ್ಟಿ ಏರು ಧ್ವನಿಯಾಗಿರಲಿಲ್ಲ, ಆದರೆ ಸ್ಪಷ್ಟವಾದ ನಿಖರ ಧ್ವನಿಯಾಗಿತ್ತು. ತನ್ನ ಹೆಸರಿನಿಂದಲೆ ಸೋಮೇಶ್ವರ ಎಂಬ ಊರಿಗೆ ಕೀರ್ತಿ ಕಲಶರಾದವರು ಅಮೃತರು.

1600x960 1174498 taranath
ತಾರಾನಾಥ್‌ ಗಟ್ಟಿ ಕಾಪಿಕಾಡ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...