ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರವು ತೆರಿಗೆಯ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ ಎಂಬ ಬಗ್ಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ನಡುವೆಯೇ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರನ್ನು ‘ದೊಡ್ಡಣ್ಣ’ ಎಂದು ಕರೆಯುವ ಮೂಲಕ ಬಿಜೆಪಿಯವರನ್ನೇ ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ.
ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯುತ್, ರೈಲು ಮತ್ತು ರಸ್ತೆ ವಲಯಗಳಿಗೆ ಸಂಬಂಧಿಸಿದ 56,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಪೂರ್ಣಗೊಂಡ ಹಲವಾರು ಯೋಜನೆಗಳನ್ನು ಕೂಡ ಉದ್ಘಾಟಿಸಿದರು.
“Prime Minister is like an elder brother, and with his assistance, every state’s CM can lead the path of progress,” stated CM Revanth Reddy during the foundation-laying and inauguration ceremony. pic.twitter.com/LiXwmCBkXx
— IANS (@ians_india) March 4, 2024
ಈ ಸಮಾರಂಭದಲ್ಲಿ ಮಾತನಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, “ಪ್ರಧಾನಿ ಎಂದರೆ ದೊಡ್ಡಣ್ಣನಿದ್ದಂತೆ. ಮೋದಿಯವರ ತವರು ರಾಜ್ಯವಾದ ಗುಜರಾತ್ನಂತೆ ಪ್ರಗತಿ ಸಾಧಿಸಲು ತೆಲಂಗಾಣ ರಾಜ್ಯಕ್ಕೆ ಅವರ ಬೆಂಬಲ ಬೇಕು” ಎಂದು ಹೇಳಿದರು.
“ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣವು ಕೇಂದ್ರದೊಂದಿಗೆ ಸಂಘರ್ಷ ಬಯಸುವುದಿಲ್ಲ ಮತ್ತು ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ” ಎಂದು ಇದೇ ವೇಳೆ ಹೇಳಿಕೆ ನೀಡಿದ್ದಾರೆ.
అభివృద్ధి కోసం వేదికలు పంచుకుంటాం…
సంక్షేమంలో సమన్వయంతో పని చేస్తాం…
సమాఖ్య స్ఫూర్తిని గౌరవించడమే మా సిద్ధాంతం.రాష్ట్రం విషయంలో రాజీపడబోం…
ఆత్మగౌరవం విషయంలో తలెత్తుకునే ఉంటాం.#TelanganaPrajaPrabhutwam #PrajaPalana pic.twitter.com/ZUf0s523lq— Revanth Reddy (@revanth_anumula) March 4, 2024
“ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ನಾನು ಬೆಂಬಲ ಸೂಚಿಸಲು ಬಯಸುತ್ತೇನೆ. ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಈ ಐದು ಮೆಟ್ರೋಪಾಲಿಟನ್ ನಗರಗಳು ಪ್ರಧಾನಿ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿನಲ್ಲಿ ಕೊಡುಗೆ ನೀಡಿವೆ” ಎಂದು ತೆಲಂಗಾಣ ಸಿಎಂ ರೆಡ್ಡಿ ಹೇಳಿದರು.
ಸಮಾರಂಭದಲ್ಲಿ ಪ್ರಧಾನಿಯವರ ಬಗ್ಗೆ ಸಿಎಂ ರೇವಂತ್ ರೆಡ್ಡಿ ಈ ಹೇಳಿಕೆ ನೀಡುತ್ತಿದ್ದಂತೆಯೇ ವೇದಿಕೆಯಲ್ಲಿ ಉಪಸ್ಥಿತರಾಗಿದ್ದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ನಗೆ ಬೀರಿದರು.





