‘ಎನ್‌ಡಿಟಿವಿ’ ಈಗ ಮೊದಲಿನಂತಿಲ್ಲ: ರಾಜೀನಾಮೆಯ ಬಳಿಕ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ

Date:

  • ತನ್ನದೇ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್ ಆರಂಭಿಸಿದ ಪತ್ರಕರ್ತ ಸೋಹಿತ್ ಮಿಶ್ರಾ
  • ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಅಡ್ಡಿಪಡಿಸಲು ಸೂಚಿಸಿದ್ದ ಎನ್‌ಡಿಟಿವಿ ಮುಖ್ಯಸ್ಥ ಸಂಜಯ್ ಪುಗಾಲಿಯಾ

‘ಎನ್‌ಡಿಟಿವಿ ಈಗ ಮೊದಲಿನಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದು ಸಾಕಷ್ಟು ಬದಲಾಗಿ ಬಿಟ್ಟಿದೆ’ ಎಂದು ಎನ್ ಡಿಟಿವಿ ಮುಂಬೈ ಬ್ಯೂರೋ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋಹಿತ್ ಮಿಶ್ರಾ ತಿಳಿಸಿದ್ದಾರೆ.

ಎನ್‌ಡಿಟಿವಿಯ ಹುದ್ದೆಯ ರಾಜೀನಾಮೆ ನೀಡಿದ ಬಳಿಕ Sohit Mishra Official ಎಂಬ ತನ್ನದೇ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್ ಆರಂಭಿಸಿರುವ ಅವರು, “ಎನ್‌ಡಿಟಿವಿಯಲ್ಲಿ ಈಗಲೂ ಹಲವು ಮಂದಿ ಪ್ರಾಮಾಣಿಕವಾಗಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಬಹಳಷ್ಟು ಬದಲಾವಣೆಗಲಾಗಿದೆ ಎಂಬುದು ಕೂಡ ವಾಸ್ತವ. ಅದು ಹಿಂದಿನಂತಿಲ್ಲ. ವರ್ಷಗಳ ಹಿಂದೆ ಕೆಲವು ಮಂದಿ ಇದನ್ನು ತಮ್ಮ ಕೈವಶ ಮಾಡಿಕೊಂಡಾಗ ಪತ್ರಿಕೋದ್ಯಮದ ಬಗ್ಗೆ ಭಾಷಣವನ್ನಷ್ಟೇ ಮಾಡಿದರು. ಆದರೆ ಅದು ಮಾತಿಗಷ್ಟೇ ಸೀಮಿತವಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಒಂದು ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಎನ್‌ಡಿಟಿವಿಯ ಕೆಂಪು ಮೈಕ್ ಹಿಡಿದುಕೊಳ್ಳುವುದು ಬಹಳ ಹೆಮ್ಮೆಯ ವಿಷಯವಾಗಿತ್ತು. ಆದರೆ, ಈಗ ಆ ಕೆಂಪು ಮೈಕ್‌ ಅನ್ನು ಯಾರೋ ನಿಯಂತ್ರಣ ಮಾಡುತ್ತಿದ್ದಾರೆ. ಮೊದಲು ಕೆಲವೊಂದು ರಾಜಕಾರಣಿಗಳು ಎನ್‌ಡಿಟಿವಿಯ ಹೆಸರು ಕೇಳುವಾಗಲೇ ಭಯಭೀತರಾಗುತ್ತಿದ್ದರು. ಆದರೆ, ಬದಲಾದ ಈಗಿನ ಸಮಯದಲ್ಲಿ ಅದೇ ರಾಜಕಾರಣಿಗಳು ಎನ್‌ಡಿಟಿವಿಯಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಎನ್‌ಡಿಟಿವಿ ಈ ದೇಶದ ಜನಪರ ಪತ್ರಿಕೋದ್ಯಮದಲ್ಲಿ ಹೆಮ್ಮೆಯಾಗಿದ್ದ ಸಂದರ್ಭದಲ್ಲಿ ಸರಿಯಾದ ದಾರಿಯಲ್ಲಿತ್ತು” ಎಂದು ತಮ್ಮ ಅನುಭವವನ್ನು ಸೋಹಿತ್ ಮಿಶ್ರಾ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುಮಾರು 10 ನಿಮಿಷಗಳ ವಿಡಿಯೋದಲ್ಲಿ ತಾನು 2017ರಲ್ಲಿ ಎನ್‌ಡಿಟಿವಿ ಸೇರಿದ್ದ ಸಂದರ್ಭ, ಜನರ ಪ್ರೀತಿ ಗಳಿಸಿದ್ದು, ಡಾ. ಪ್ರಣಯ್ ರಾಯ್ ಕಾರ್ಯ ನಿರ್ವಹಿಸಲು ನೀಡಿದ್ದ ಸ್ವಾತಂತ್ರ್ಯ, ತನ್ನ ಪತ್ರಿಕೋದ್ಯಮದ ಸೇವೆಯಿಂದ ಜನರಿಗಾದ ಅನುಭವ, ತನ್ನ ಹಲವು ಪ್ರಶ್ನೆಗಳಿಗೆ 27 ಬಾರಿ ‘ನಾನು ನಿಮಗೆ ಉತ್ತರವನ್ನು ಕೊಟ್ಟಿದ್ದೇನೆ’ ಎಂದಿದ್ದ ಬಿಜೆಪಿಯ ನಾಯಕ ಕಿರಿಟ್ ಸೋಮಯ್ಯ ಘಟನೆ, ಕೊರೋನಾ ಕಾಲದ ವರದಿಗಳು ಹಾಗೂ ‘ಕಡಿಮೆ ಸಂಬಳವಿದ್ದರೂ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದ ಎನ್‌ಡಿಟಿವಿ’ಯ ಬಗ್ಗೆ ಸೋಹಿತ್ ಮಿಶ್ರಾ ತನ್ನ ಅನುಭವಗಳನ್ನು ಹಂಚಿಕೊಂಡಿದ್ದು, ಮುಂದೆಯೂ ಜನರ ಪರವಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದ್ದೇನೆ. ಹಾಗಾಗಿಯೇ, ಹಲವರ ಸಲಹೆ ಸ್ವೀಕರಿಸಿ, ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದೇನೆ. ಎಲ್ಲರ ಪ್ರೀತಿಗೆ ಆಭಾರಿ’ ಎಂದು ತಿಳಿಸಿದ್ದಾರೆ.

ಸೋಹಿತ್ ಮಿಶ್ರಾ ಅವರು ಕೇಳಿದ್ದ ತನ್ನ ಹಲವು ಪ್ರಶ್ನೆಗಳಿಗೆ 27 ಬಾರಿ ‘ನಾನು ನಿಮಗೆ ಉತ್ತರವನ್ನು ಕೊಟ್ಟಿದ್ದೇನೆ’ ಎಂದಿದ್ದ ಬಿಜೆಪಿಯ ನಾಯಕ ಕಿರಿಟ್ ಸೋಮಯ್ಯ ಅವರ ‘ಬೈಟ್ ವಿಡಿಯೋ’ 2020ರಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಸದ್ಯ ಎನ್‌ಡಿಟಿವಿ ತೊರೆದ ಬಳಿಕ ಸೋಹಿತ್ ಮಿಶ್ರಾ ಚಾನೆಲ್ ಆರಂಭಿಸಿ ಎರಡು ದಿನಗಳಾಗಿದ್ದು, ಈ ಸುದ್ದಿ ಬರೆಯುವ ವೇಳೆಗೆ ಸುಮಾರು 1.13 ಲಕ್ಷ ಜನರು ‘Subscribers’ ಆಗಿ, ಸೇರಿಕೊಂಡಿದ್ದಾರೆ.

ರಾಜೀನಾಮೆಗೆ ಕಾರಣ?
ಅದಾನಿ ಸಂಸ್ಥೆಗಳ ಅವ್ಯವಹಾರಗಳ ಕುರಿತು ರಾಹುಲ್ ಗಾಂಧಿ ಮುಂಬೈನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗದ್ದಲ ಸೃಷ್ಟಿಸುವಂತೆ ಮತ್ತು ವಿಷಯವನ್ನು ಬದಲಾಯಿಸಲು ಮಧ್ಯಪ್ರವೇಶಿಸುವಂತೆ ಸೋಹಿತ್ ಅವರನ್ನು ಎನ್ ಡಿಟಿವಿ ವಾಹಿನಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಸೂಚನೆ ನೀಡಿದ್ದರು. ಇದನ್ನು ಪ್ರತಿಭಟಿಸಿ ಎನ್‌ಡಿಟಿವಿ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ.

ವಿದೇಶಿ ಶೆಲ್ ಕಂಪನಿ ವಿಷಯದಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಂಘ ಪರಿವಾರವೇ ಮುಂದೆ ಬಂದಿತ್ತು. ಎನ್‌ಡಿಟಿವಿ ಇದನ್ನು ಅನುಸರಿಸಿ ಅದಾನಿ ಪರವಾಗಿ ಸುದ್ದಿಯನ್ನು ಹರಡಿತು.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿವಾದಾತ್ಮಕ ಹಿಂಡೆನ್‌ಬರ್ಗ್‌ ವರದಿಯು 2013 ಮತ್ತು 2017 ರ ನಡುವೆ ನಾಲ್ಕು ಅದಾನಿ ಕಂಪನಿಗಳ ಷೇರು ತಿರುಚುವಿಕೆಯನ್ನು ಸೂಚಿಸುವ ಆರೋಪವನ್ನು ದೃಢಪಡಿಸಿದೆ. ಇದಾದ ಬಳಿಕ ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರವೂ ತೀವ್ರಗೊಂಡಿತ್ತು.

ಏತನ್ಮಧ್ಯೆ, ರಾಹುಲ್ ಗಾಂಧಿ ತಮ್ಮ ನಿಲುವನ್ನು ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಇಂಡಿಯಾ ನಾಯಕರ ನಿರ್ಧಾರದ ಪ್ರಕಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಮಿತಿಯ ಬೇಡಿಕೆಯನ್ನು ಘೋಷಿಸುವುದಾಗಿತ್ತು.

ಸೋಹಿತ್ ಮಿಶ್ರಾ ಸೇರಿದಂತೆ ಎಲ್ಲ ಪತ್ರಕರ್ತರು ಸಭಾಂಗಣವನ್ನು ತಲುಪಿದ್ದರು. ಅದಕ್ಕೂ ಮೊದಲು, ಸಂಜಯ್ ಪುಗಾಲಿಯಾ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸುವಂತೆ ಸೋಹಿತ್ ಅವರನ್ನು ಕೇಳಿದ್ದರು ಎಂದು ತಿಳಿದುಬಂದಿದೆ.

ಅದಾನಿ ಅವರ ಎಎಂಜಿ ಮೀಡಿಯಾ ನೆಟ್ವರ್ಕ್, ಎನ್‌ಡಿಟಿವಿ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ನಂತರ ಸಂಜಯ್ ಪುಗಾಲಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...