ಮೀಸಲಾತಿ ವಿಚಾರ | ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರಕರ್ತ, ಚಿತ್ರನಿರ್ದೇಶಕ ಡಾ ಬಸವರಾಜ್ ಇಟ್ನಾಳ ಪತ್ರ

Date:

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರಿಗೆ ಹಿಂದುಳಿದ ವರ್ಗದ 2ಬಿಯಲ್ಲಿ ನೀಡಲಾಗಿದ್ದ 4% ಮೀಸಲಾತಿ ಇನ್ಮುಂದೆ ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಮೀಸಲಾತಿ ಕುರಿತು ಪತ್ರಕರ್ತ, ಚಿತ್ರನಿರ್ದೇಶಕ ಡಾ ಬಸವರಾಜ್ ಇಟ್ನಾಳ ಅವರು ದಿನಾಂಕ 23 ಮಾರ್ಚ್ 2023ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವಿ ಪತ್ರವನ್ನು ಬರೆದಿದ್ದು, ಕೆಲವು ಅಂಶಗಳನ್ನು ನಿವೇದಿಸಿಕೊಂಡಿದ್ದಾರೆ.

ಉಚ್ಚ ನ್ಯಾಯಾಲಯಕ್ಕೆ ಅವರು ಬರೆದ ಪತ್ರದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ವಿಧಾನ ಸಭೆಗೆ ನಡೆದ ಕಳೆದ ಚುನಾವಣಾ ಸಮಯದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಬಿಂಬಿಸಲು ಹೋಗಿ ಲಿಂಗಾಯತರನ್ನು ಹಿಂದೂ ವಿರೋಧಿ, ವೀರಶೈವ ವಿರೋಧಿ ಎಂಬ ಕಲ್ಪನೆ ಮೂಡಿಸಿ ವಿಶ್ವಗುರು ಬಸವಣ್ಣನ ಅನುಯಾಯಿಗಳಾದ ಲಿಂಗಾಯತರನ್ನು ಸಂಕುಚಿತಗೊಳಿಸಲಾಯಿತು. ಅಷ್ಟೇ ಅಲ್ಲ, ಲಿಂಗಾಯತವನ್ನು ಒಂದು ಅಲ್ಪಸಂಖ್ಯಾತ ಧರ್ಮವಾಗಿಸಿ ಈ ದೇಶದ ಅಲ್ಪಸಂಖ್ಯಾತರ ಮೀಸಲಾತಿ ಪಾಲು ಬೇಡುವ ಸ್ಥಿತಿಗೆ ತರಲಾಯಿತು. ಒಂದು ಮಟ್ಟದಲ್ಲಿ ಅದು ವೀರಶೈವ ವಿರೋಧಿ ಚಳುವಳಿ ಆಗಿದ್ದರೆ, ಇನ್ನೊಂದು ಮಟ್ಟದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಲಿಂಗಾಯತರನ್ನು ಪೈಪೋಟಿಗೆ ಇಳಿಸುವ ಕ್ಷುದ್ರ ಹುನ್ನಾರ ಆಗಿತ್ತು. ಈ ವಿಭಜನಾ ತಂತ್ರಕ್ಕೆ ಶಿಕ್ಷೆಯಾಗಿ ಅಂದಿನ ಆಡಳಿತ ಪಕ್ಷ ಸೋತು, ಅಂದು ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರುಗಳೇ ತಪ್ಪೊಪ್ಪಿಗೆ ಮತ್ತು ಕ್ಷಮಾಪಣೆ ಕೇಳುವಂತಾಗಿತ್ತು. ಅದು ಈಗ ಇತಿಹಾಸ.

ಮತ್ತೆ ಈಗ ಚುನಾವಣಾ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಲಿಂಗಾಯತರನ್ನು ಮತ್ತೊಮ್ಮೆ ಕೇವಲವಾಗಿಸುವ, ಲಿಂಗಾಯತರನ್ನು ಮುಸ್ಲಿಮರ ಎಡೆಯನ್ನು ಕಸಿದು ತಿನ್ನುವ ಮಟ್ಟದ ಅವಿವೇಕಿಗಳು ಎಂಬ ಅರ್ಥ ಬರುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಒಕ್ಕಲಿಗರಾಗಲಿ, ಲಿಂಗಾಯತರಾಗಲಿ ಕೊಡುವ ಸಂಸ್ಕ್ರತಿಯ ಸಮುದಾಯಗಳು. ಇನ್ನೊಬ್ಬರ ಹಕ್ಕಿನ ಪಾಲನ್ನು ಕಸಿದುಕೊಳ್ಳುವ ಸಮುದಾಯಗಳಲ್ಲ. ಎಲ್ಲ ಲಿಂಗಾಯತ ಸಂಸ್ಥೆಗಳು ನಡೆಸುವ ಎಲ್ಲ ಶಿಕ್ಷಣ ಸಂಸ್ಥೆಗಳ ಒಟ್ಟಾರೆ ಸಂಸ್ಥೆಗಳು, ಅವುಗಳು ಮಾಡುವ ದಾಸೋಹದ ಒಟ್ಟಾರೆ ಸಾಮರ್ಥ್ಯ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಗೇ ಪೈಪೋಟಿ ಕೊಡುವಂತಿವೆ. ಅಂತಹುದ್ದರಲ್ಲಿ ಮುಸ್ಲಿಮರ ಮೀಸಲು ಹಕ್ಕನ್ನು ಕಸಿದು ಬದುಕುವ ಅಗತ್ಯವಾಗಲೀ, ಅಂತಹ ಸಂಸ್ಕಾರವಾಗಲಿ ಲಿಂಗಾಯತರಿಗೆ ಇಲ್ಲ. ಇದು ಲಿಂಗಾಯತರನ್ನು ಮುಸ್ಲಿಂ ವೈರಿಗಳಾಗಿಸುವ ಒಂದು ಖೂಳ ರಾಜಕೀಯ ತಂತ್ರ ಮಾತ್ರ.

ಈ ಹಿನ್ನೆಲೆಯಲ್ಲಿ ನೋಡಿದಾಗ ಅನಿಸುವುದು ಯಾವ ರಾಜಕಾರಣಿಗೂ ಯಾವ ರಾಜಕೀಯ ಪಕ್ಷಕ್ಕೂ ಲಿಂಗಾಯತರ ಘನತೆಯ ಬಗ್ಗೆ ಅಣ್ಣ ಬಸವಣ್ಣನ ನಿಸ್ಪ್ರಹ ಕಾಳಜಿಗಳ ಬಗ್ಗೆ ಯಾವ ಅರಿವೂ ಇಲ್ಲ. ಯಾವ ರಾಜಕಾರಣಿಯೂ ಯಾವ ಪಕ್ಷವೂ ಇಲ್ಲಿ ಬಸವಣ್ಣನ ಕಲ್ಯಾಣ ರಾಜ್ಯವನ್ನು ತರಲಾರದು. ಸದ್ಯಕ್ಕೆ ಉಳಿದಿರುವುದು ನ್ಯಾಯಾಂಗದ ಮೇಲೆ ಭರವಸೆ. ಬಸವ ಪರಂಪರೆಯನ್ನು ರಾಜಕೀಯ ಜೂಜಾಟದಿಂದ ಕಾಪಾಡಬಲ್ಲ ಶಕ್ತಿ ಇರುವುದು ನ್ಯಾಯಾಂಗದಲ್ಲಿ ಮಾತ್ರ.

  1. ಯಾವ ರಾಜಕಾರಣಿ, ಯಾವುದೇ ರಾಜಕೀಯ ಪಕ್ಷ ಹಾಗೂ ಸದರಿ ಪಕ್ಷಗಳೇ ನಡೆಸುವ ಸರ್ಕಾರಗಳು ಲಿಂಗಾಯತ ಮತ ಕೇಂದ್ರಿತ ರಾಜಕೀಯ ತೀರ್ಮಾನಗಳನ್ನು ಮಾತ್ರ ತೆಗೆದುಕೊಳ್ಳಲು ಮಾತ್ರ ಸಾಧ್ಯ. ಬಸವಣ್ಣನ ಧಾರ್ಮಿಕ ಪರಂಪರೆ ಉಳಿಯುವಂತ ತೀರ್ಮಾನಗಳನ್ನು ತೆಗೆದುಕೊಳ್ಳಲಾರರು. ಆದ್ದರಿಂದ ನ್ಯಾಯಾಂಗವೇ ಇದನ್ನು ಬಗೆಹರಿಸಬೇಕಾಗಿದೆ.
  2. ಹನ್ನೆರಡನೇ ಶತಮಾನದ ಬಸವ ಚಳುವಳಿಯಲ್ಲಿ ಬ್ರಾಹ್ಮಣರೂ ಇದ್ದರು. ಶೂದ್ರರೂ ಇದ್ದರು. ವೀರಶೈವ ಪರಂಪರೆಯವರೂ ಇದ್ದರು, ಲಿಂಗಾಯತ ಪರಂಪರೆಯವರೂ ಇದ್ದರು. ಮಹಿಳೆಯರೂ ಇದ್ದರು. ವ್ಯಾಪಾರಿಗಳೂ ಇದ್ದರು. ಚಿಂತಕರೂ ಇದ್ದರು. ಜನ ಸಾಮಾನ್ಯರೂ ಇದ್ದರು. ಆದರೆ ಎಲ್ಲರೂ ಎಲ್ಲ ಭೇದಗಳನ್ನು ಬಿಟ್ಟಿದ್ದರು. ಎಲ್ಲರೂ ಸಮನಾಗಿ ಎಲ್ಲ ಭೇದಗಳನ್ನು ತೊರೆಯುವುದೇ ಬಸವ ಪರಂಪರೆಯ ಮುಖ್ಯ ಲಕ್ಷಣ. ಹೀಗಾಗಿ ಇದು ಲಿಂಗಾಯತ ಧರ್ಮ ಅಥವಾ ವೀರಶೈವ ಧರ್ಮ ಮಾತ್ರ ಆಗಲು ಸಾಧ್ಯವಿಲ್ಲ.
  3. ಹಿಂದೂ ಮತ್ತು ಅಹಿಂದು ಎಂಬ ಬಗ್ಗೆ ಅಪಾರ ತಪ್ಪುಗ್ರಹಿಕೆಗಳಿವೆ. ಹಿಂದೂ ಎಂಬುದು ಧರ್ಮ ಎಂಬ ಯಾವ ದಾಖಲೆಗಳೂ ಇಲ್ಲ. ಅದೊಂದು ನಾಗರಿಕತೆ ಎಂಬ ಬಗ್ಗೆ ಯಾವ ತಕರಾರೂ ಇಲ್ಲದ ದಾಖಲೆಗಳಿವೆ. ಹಿಂದೂ ನಾಗರಿಕತೆಯಲ್ಲಿ ಸನಾತನ ಧರ್ಮ, ಬೌದ್ಧ, ಜೈನ, ಸಿಖ್ ಧರ್ಮಗಳು ಹುಟ್ಟಿವೆ. ಸನಾತನ ಧರ್ಮವೇ ಹಿಂದೂ ಧರ್ಮ ಎಂಬ ತಪ್ಪು ಗ್ರಹಿಕೆಯನ್ನು ಹರಡಲಾಗಿದೆ. ಆದ್ದರಿಂದ ಸನಾತನ ಅಲ್ಲದ್ದು ಹಿಂದೂ ಕೂಡ ಅಲ್ಲ ಎಂಬ ಹುಸಿ ವಿವಾದ ಹುಟ್ಟಿವೆ.
  4. ಏಸು ಕ್ರೈಸ್ತನ ಬೋಧನೆಗಳ ಆಧಾರದಲ್ಲಿ ಹುಟ್ಟಿದ್ದು ಕ್ರೈಸ್ತ ಧರ್ಮ. ಬುದ್ಧನ ಬೋಧನೆಯ ಆಧಾರಿತ ಧರ್ಮ ಬೌದ್ಧ ಧರ್ಮ. ಮಹಾವೀರ ಜೈನ ಬೋಧಿಸಿದ ಧರ್ಮ ಜೈನ ಧರ್ಮ. ಸಾಮಾನ್ಯವಾಗಿ ಆಯಾ ಧರ್ಮದ ಗುರುವಿನ ಹೆಸರು ಧರ್ಮದ ಹೆಸರಲ್ಲಿ ಇರುತ್ತದೆ. ಆದ್ದರಿಂದ ಬಸವಣ್ಣನ ಧರ್ಮವನ್ನು ಬಸವ ಧರ್ಮವೆಂದೇ ಕರೆಯಬೇಕಾಗುತ್ತದೆ.
  5. ಕ್ರೈಸ್ತರಲ್ಲಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂಬ ಎರಡು ಪಂಥಗಳಿವೆ. ಬೌದ್ಧರಲ್ಲಿ ಮಹಾಯಾನ ಮತ್ತು ಹೀನಾಯಾನ ಪಂಥಗಳಿವೆ. ಹಾಗೆಯೇ ಜೈನರಲ್ಲಿ ಶ್ವೇತಾಂಬರ ಮತ್ತು ದಿಗಂಬರ ಎಂಬ ಎರಡು ಪಂಥಗಳಿವೆ. ಅಷ್ಟೇ ಅಲ್ಲ, ಮುಸ್ಲಿಂ ಧರ್ಮದಲ್ಲಿ ಕೂಡ ಶಿಯಾ ಮತ್ತು ಸುನ್ನಿ ಎಂಬ ಪಂಥಗಳಿವೆ. ಹಾಗೆಯೇ, ಬಸವ ಧರ್ಮ ಲಿಂಗಾಯತ ಮತ್ತು ವೀರಶೈವ ಎಂಬೆರಡು ಪ್ರಮುಖ ಪಂಥಗಳನ್ನು ಹೊಂದಿರಲು ಸಾಧ್ಯ. ಕೇವಲ ಲಿಂಗಾಯತವಾಗಲಿ, ವೀರಶೈವವಾಗಲಿ ಇಡೀ ಧರ್ಮ ಎಂದು ಹೇಳಲು ಸಾಧ್ಯವಾಗದು.
  6. ಹಿಂದೂ ನಾಗರಿಕತೆಯ ಹೊಸ ಧರ್ಮವಾಗಿ ಬಸವ ಧರ್ಮವನ್ನು, ಲಿಂಗಾಯತ ಮತ್ತು ವೀರಶೈವ ಪಂಥಗಳನ್ನು ಒಳಗೊಂಡಂತೆ, ಘೋಷಿಸಬಹುದೇ ಎಂಬ ಕುರಿತು ಮಾನ್ಯ ಉಚ್ಚ ನ್ಯಾಯಾಲಯ ತನ್ನ ಸುಪರ್ದಿನಲ್ಲಿಯೇ ಒಂದು ತಜ್ಞ ಸಮಿತಿಯನ್ನು ರಚಿಸಿ, ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು. ಹಾಗೆಯೇ ಜನಗಣತಿಯ ಎಲ್ಲ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸದಂತೆ ಕ್ರಮ ತೆಗೆದುಕೊಳ್ಳಬಹುದೇ. ಸನಾತನ ಧರ್ಮದ ಅನುಯಾಯಿಗಳು ಸನಾತನ ಧರ್ಮವೆಂದೇ ನಮೂದಿಸಿಕೊಳ್ಳುವ ಅವಕಾಶ ಕೊಟ್ಟು, ಹಿಂದೂ ಎಂಬುದು ಧರ್ಮ ಸೂಚಕ ಪದವಾಗಿ ಬಳಸದಂತೆ ಕ್ರಮ ತೆಗೆದುಕೊಳ್ಳಬಹುದೇ ಎಂಬುದನ್ನೂ ಕೂಡ ತಜ್ಞ ಸಮಿತಿ ಹೇಳಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...