30 ವರ್ಷಗಳ ನಂತರ ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಿಮಪಾತ: ಕಾರಣವೇನು?

Date:

ಸೌದಿ ಅರೇಬಿಯಾ ಎಂದ ತಕ್ಷಣ ನೆನಪಾಗುವುದು ಸುಡು ಬಿಸಿಲು ಹಾಗೂ ಮರುಭೂಮಿ. ಆದರೆ, ಕಳೆದ ಕೆಲವು ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಹವಾಮಾನ ಬದಲಾಗುತ್ತಿದ್ದು, ಉತ್ತರ ಭಾಗದ ಮರುಭೂಮಿಯಲ್ಲಿ 30 ವರ್ಷಗಳ ನಂತರ ಮೊದಲ ಬಾರಿಗೆ ಭಾರೀ ಹಿಮಪಾತವಾಗಿದೆ.

ಉತ್ತರ ಸೌದಿ ಅರೇಬಿಯಾದಲ್ಲಿ ಬೀಸಿದ ತಂಪಾದ ಗಾಳಿಯ ಪರಿಣಾಮವಾಗಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಇದು ಹಿಮಪಾತಕ್ಕೆ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ. ಸುಮಾರು 2,600 ಮೀಟರ್ ಎತ್ತರದಲ್ಲಿರುವ ಜಬಲ್ ಅಲ್ ಜೌಫ್ ಮತ್ತು ಟ್ರೋಜೇನಾ ಪರ್ವತ ಪ್ರದೇಶಗಳಲ್ಲಿ ತಾಪಮಾನವು ಸುಮಾರು -4°C ಗೆ ಕುಸಿದಿದೆ. ಈ ಅಪರೂಪದ ದೃಶ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ.

ಭಾರೀ ಹಿಮಪಾತದ ನಂತರ ಸೌದಿ ಅರೇಬಿಯಾದ ಉತ್ತರ ಮರುಭೂಮಿಯ ಹಳದಿ ಭಾಗಗಳು ಬಿಳಿ ಬಣ್ಣಕ್ಕೆ ತಿರುಗಿದೆ. ತಬೂಕ್ ಮತ್ತು ಅಲ್-ಜೌಫ್‌ನಂತಹ ಪ್ರದೇಶಗಳಲ್ಲಿ, ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮರಳಿನ ದಿಬ್ಬಗಳಲ್ಲಿ ದಟ್ಟವಾದ ಹಿಮವು ಆವೃತವಾಗಿದೆ. ಹಿಮದಿಂದ ಆವೃತವಾದ ಮರುಭೂಮಿಯ ನಡುವೆಯೇ ಒಂಟೆಗಳು ನಡೆದಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೌದಿ ಅರೇಬಿಯಾದ ಉತ್ತರ ಭಾಗಗಳಲ್ಲಿ ಹಿಮಪಾತ ಸಂಭವಿಸುವುದು ಅಪರೂಪವಾದರೂ ಅದು ಸಂಭವಿಸದ ಸಂಗತಿ ಏನೂ ಅಲ್ಲ. ಆದರೆ, ತಬೂಕ್ ಪ್ರಾಂತ್ಯದಂತಹ ಎತ್ತರದ ಭಾಗಗಳಲ್ಲಿ ಹಿಮಪಾತವಾಗುತ್ತಿರುವುದು ವಿಶೇಷವಾಗಿದೆ.

ಸೌದಿ ಅರೇಬಿಯಾದಲ್ಲಿ ದಾಖಲಾದ ಅತ್ಯಂತ ತೀವ್ರವಾದ ಶೀತ ಅಲೆ 1992ರಲ್ಲಿ ಸಂಭವಿಸಿತ್ತು ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1992ರ ಜನವರಿಯಲ್ಲಿ ತಾಪಮಾನವು ದಾಖಲೆಯ ಕನಿಷ್ಠ ಮಟ್ಟ -9.3°C ಗೆ ಇಳಿದಿತ್ತು. 1973ರ ಜನವರಿಯಲ್ಲಿ ಸೈಬೀರಿಯಾದಿಂದ ಬೀಸಿದ್ದ ಹಿಮಗಾಳಿಯಿಂದಾಗಿ ರಿಯಾದ್‌ನಲ್ಲಿ ಸುಮಾರು 20 ಸೆಂ.ಮೀ ಎತ್ತರದಷ್ಟು ಹಿಮಪಾತ ಉಂಟಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಮೆಡಿಟರೇನಿಯನ್, ಯುರೋಪ್ ಅಥವಾ ಮಧ್ಯ ಏಷ್ಯಾದಿಂದ ಬರುವ ಪ್ರಬಲವಾದ ಶೀತ ಗಾಳಿಯ ಮುಂಭಾಗಗಳು ದಕ್ಷಿಣದ ಕಡೆಗೆ ಅರೇಬಿಯಾದ ಕಡೆಗೆ ಚಲಿಸುತ್ತವೆ. ಈ ತಂಪಾದ ಮಾರುತಗಳು ಶೂನ್ಯ ಡಿಗ್ರಿ ಉಷ್ಣಾಂಶ ಹೊಂದಿದ್ದು, ಈ ಮಾರುತಗಳು ಸತತವಾಗಿ ಬೀಸುತ್ತಿರುವುದರಿಂದ, ಸೌದಿಯ ವಾತಾವರಣ ತಂಪಾಗಿ, ಹಿಮ ಸುರಿಯಲಾರಂಭಿಸಿದೆ.

ಸಾಮಾನ್ಯವಾಗಿ ಸೌದಿಯ ಉತ್ತರದ ಎತ್ತರದ ಬೆಟ್ಟಗಳಲ್ಲಿ (2,500 ಮೀಟರ್‌ಗಿಂತ ಮೇಲೆ) ಮಾತ್ರ ಚಳಿಗಾಲದಲ್ಲಿ ಕೆಲವೊಮ್ಮೆ ಹಿಮಪಾತವಾಗುತ್ತದೆ. ಆದರೆ ಈ ಬಾರಿ ಶೀತ ವಾಯುಗುಂಪು ದಕ್ಷಿಣಕ್ಕೆ ಆಳವಾಗಿ ಇಳಿದಿದ್ದರಿಂದ ಮರುಭೂಮಿಯ ದೊಡ್ಡ ಪ್ರದೇಶಗಳನ್ನು ಆವರಿಸಿದೆ. ಕೆಲವು ವರದಿಗಳು ಹವಾಮಾನ ಬದಲಾವಣೆಯಿಂದಾಗಿ ಇಂತಹ ಅಸಹಜ ಹವಾಮಾನ ಬೆಳವಣಿಗೆಗಳು ಹೆಚ್ಚುತ್ತಿವೆ. ಇದು ಭವಿಷ್ಯವನ್ನು ಆತಂಕಕ್ಕೆ ದೂಡಲಿವೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಉಷ್ಣಾಂಶ -4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದು, ಮಳೆಯು ಹಿಮವಾಗಿ ಬೀಳುತ್ತಿದೆ. ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ ಮರುಭೂಮಿಯ ಸಮತಟ್ಟಾದ ಭಾಗಗಳಲ್ಲಿಯೂ ಸಹ ಇಷ್ಟೊಂದು ವ್ಯಾಪಕವಾಗಿ ಹಿಮಪಾತ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಮಪಾತದ ನಡುವೆಯೇ ಸ್ಥಳೀಯ ನಿವಾಸಿಗಳು ಮರುಭೂಮಿಯಲ್ಲಿ ಬಿದ್ದಿರುವ ಹಿಮಗಳಲ್ಲಿ ಖುಷಿಯಿಂದ ಆಟವಾಡುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೀಡಿಯೊಗಳಲ್ಲಿ, ನಿವಾಸಿಗಳು ಹಿಮದೊಂದಿಗೆ ಆಟವಾಡುವುದನ್ನು ಮತ್ತು ಖುಷಿಯಿಂದ ಗುಂಪು ನೃತ್ಯ ಮಾಡುವುದನ್ನು ಕಾಣಬಹುದು. ಹಿಮದಿಂದ ಆವೃತವಾದ ಮರುಭೂಮಿಯ ಬಯಲುಗಳಲ್ಲಿ ಒಂಟೆಗಳು ಓಡಾಡುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ.

ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಿಮಪಾತದ ಸುದ್ದಿಗಳು ಹರಡುತ್ತಿದ್ದಂತೆಯೇ ನಗರ ಪ್ರದೇಶದ ನಿವಾಸಿಗಳು ಅಪರೂಪಕ್ಕೆ ಕಾಣಸಿಗುವ ಹಿಮಪಾತವನ್ನು ಕಣ್ತುಂಬಿಕೊಳ್ಳಲು ತಬೂಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಸೌದಿಯ ಮಾಧ್ಯಮಗಳು ವರದಿ ಮಾಡಿದೆ.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...